ಬ್ರೇಕಿಂಗ್ ನ್ಯೂಸ್
26-12-22 01:32 pm Udupi Correspondent ಕರಾವಳಿ
ಉಡುಪಿ, ಡಿ.25: ಕಳೆದ ಮೇ ತಿಂಗಳಲ್ಲಿ ಉದ್ಘಾಟನೆಯಾದ ಎರಡೇ ದಿನದಲ್ಲಿ ತುಂಡಾಗಿ ಕೊಚ್ಚಿ ಹೋಗಿದ್ದ ಮಲ್ಪೆಯ ತೇಲುವ ಸೇತುವೆಯನ್ನು ಮತ್ತೆ ಯಥಾಸ್ಥಿತಿಗೆ ತರಲಾಗಿದೆ. ಕೇರಳ ಮತ್ತು ಮುಂಬೈನ ತಜ್ಞರು ಪರಿಶೀಲನೆ ನಡೆಸಿದ ಬಳಿಕ ತೇಲುವ ಸೇತುವೆಯನ್ನು ಸಾರ್ವಜನಿಕ ಉಪಯೋಗಕ್ಕಾಗಿ ಡಿ.25ರಂದು ಲೋಕಾರ್ಪಣೆ ಮಾಡಲಾಗಿದೆ.
ಉಡುಪಿ ಶಾಸಕ ರಘುಪತಿ ಭಟ್, ಎರಡನೇ ಬಾರಿಗೆ ಸೇತುವೆಯನ್ನು ಉದ್ಘಾಟನೆ ಮಾಡಿದ್ದು, ಪ್ರವಾಸಿಗರ ಬಳಕೆಗೆ ಚಾಲನೆ ನೀಡಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಎಸ್ಪಿ ಅಕ್ಷಯ್ ಹಾಕೆ ಉಪಸ್ಥಿತರಿದ್ದರು. ಕರ್ನಾಟಕದ ಮೊಟ್ಟಮೊದಲ ತೇಲುವೆ ಸೇತುವೆ ಇದಾಗಿದ್ದು, ಇದಕ್ಕೂ ಮೊದಲು ಕೇರಳದಲ್ಲಿ ಇದೇ ಮಾದರಿಯ ತೇಲುವ ಸೇತುವೆಯನ್ನು ಮಾಡಲಾಗಿತ್ತು. ಅಲ್ಲಿನದ್ದೇ ಮಾದರಿಯಲ್ಲಿ ಮಲ್ಪೆ ಬೀಚ್ ನಲ್ಲಿ ಪ್ರಯೋಗ ಮಾಡಲಾಗಿತ್ತು. ಆದರೆ ಇಲ್ಲಿನ ಸಮುದ್ರದ ಭೋರ್ಗರೆತದ ನಡುವೆ ಸೇತುವೆ ಕೊಚ್ಚಿ ಹೋಗಿತ್ತು.
ಇದೀಗ ಮುಂಬೈನ ಎಚ್ಎನ್ ಮೆರೈನ್ ಕಂಪನಿಯ ತಜ್ಞರು ಬಂದು ಸರ್ಟಿಫೈ ಮಾಡಿದ್ದಾರೆ. ಅಲ್ಲದೆ, ಸೇತುವೆಯ ಸಾಮರ್ಥ್ಯ ಮತ್ತು ಶಕ್ತಿಯ ಬಗ್ಗೆ ಪ್ರಯೋಗವನ್ನೂ ಮಾಡಿದ್ದಾರೆ. ಇತ್ತೀಚೆಗೆ ಬಂದಿದ್ದ ಮಾಂಡೋಸ್ ಚಂಡಮಾರುತದ ಸಂದರ್ಭದಲ್ಲಿ ಅಬ್ಬರದ ಅಲೆಗಳಿಗೆ ಸೇತುವೆಯನ್ನು ನೀರಿನಲ್ಲಿ ಬಿಟ್ಟು ಸಮಸ್ಯೆ ಎದುರಾಗುತ್ತಾ ಎಂದು ಪರೀಕ್ಷೆಗೆ ಒಡ್ಡಲಾಗಿತ್ತು. ಪ್ರಾಯೋಗಿಕ ಪರೀಕ್ಷೆಯ ಬಳಿಕ ಉಡುಪಿ ಜಿಲ್ಲಾಡಳಿತ ಪ್ರವಾಸಿಗರ ಬಳಕೆಗೆ ಅನುಮತಿ ನೀಡಿದೆ.
ತೇಲುವ ಸೇತುವೆಯು 120 ಮೀಟರ್ ಉದ್ದವಿದ್ದು, 3.5 ಮೀಟರ್ ಅಗಲ ಹೊಂದಿದೆ. ಏಕಕಾಲದಲ್ಲಿ ನೂರಕ್ಕೂ ಹೆಚ್ಚು ಮಂದಿ ನಿಲ್ಲುವಷ್ಟು ಸಾಮರ್ಥ್ಯವನ್ನೂ ಹೊಂದಿದೆ. ಸೇತುವೆಯ ಎರಡೂ ಬದಿಯಲ್ಲಿ ಸ್ಟೀಲ್ ರಾಡ್ ಇಡಲಾಗಿದ್ದು, ಪ್ರವಾಸಿಗರು ಅದನ್ನು ಹಿಡಿದು ನಡೆದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಸೇತುವೆಯ ಉದ್ದಕ್ಕೂ 15 ಮಂದಿ ಲೈಫ್ ಗಾರ್ಡ್, 50 ಮಂದಿ ಲೈಫ್ ಬಾಯ್ಸ್ ಮತ್ತು ಮುಂಜಾಗ್ರತೆಗಾಗಿ ಬೋಟ್ ಇರುತ್ತದೆ. ಸೇತುವೆಯ ಮೇಲೆ ಹೋಗುವ ಮಂದಿ ಪ್ರತಿಯೊಬ್ಬರೂ ಲೈಫ್ ಜಾಕೆಟ್ ಹಾಕ್ಕೊಂಡು ಹೋಗಬೇಕಾಗುತ್ತದೆ. ಶೇಖರ್ ಪುತ್ರನ್, ಧನಂಜಯ ಕಾಂಚನ್ ಮತ್ತು ಸುದೇಶ್ ಶೆಟ್ಟಿ ಪಾಲುದಾರಿಕೆಯಲ್ಲಿ ತೇಲುವ ಸೇತುವೆಯನ್ನು ವ್ಯವಸ್ಥೆ ಮಾಡಲಾಗಿದೆ.
MLA Raghupati Bhat inaugurated floating bridge at Malpe beach on Sunday December 25. Bhat said that except Kerala, Malpe beach is the only one that has floating bridge which will increase the joy of tourists. Former minister Pramod Madhwaraj and SP Akshay Hake were the chief guests. A similar bridge was inaugurated in May but it got broken in just two days due to technical fault.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm