ಬ್ರೇಕಿಂಗ್ ನ್ಯೂಸ್
09-12-22 10:58 pm Mangalore Correspondent ಕರಾವಳಿ
ಮಂಗಳೂರು, ಡಿ.9: ಶಿರಾಡಿ ಘಾಟ್ ನಲ್ಲಿ ಸುರಂಗ ಮಾರ್ಗ ನಿರ್ಮಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾವಕ್ಕೆ ಕೇಂದ್ರ ಸರಕಾರ ನಿರಾಸಕ್ತಿ ತೋರಿದೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕೇಳಿದ ಚುಕ್ಕಿ ಪ್ರಶ್ನೆಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಉತ್ತರಿಸಿದ್ದು, ಸುರಂಗ ಮಾರ್ಗ ಅತ್ಯಂತ ಹೆಚ್ಚು ಬಜೆಟ್ ಬಯಸುತ್ತದೆ ಮತ್ತು ಕಾರ್ಯ ಸಾಧುವಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ ದಶಕಗಳ ಹಿಂದಿನ ಕನಸಾಗಿದ್ದ ಸುರಂಗ ಮಾರ್ಗ ಪ್ರಸ್ತಾವ ಬಹುತೇಕ ಕೈಬಿಟ್ಟಂತಾಗಿದೆ.
ಕಳೆದ ಫೆಬ್ರವರಿಯಲ್ಲಿ ಮಂಗಳೂರಿಗೆ ಬಂದಿದ್ದ ಸಚಿವ ನಿತಿನ್ ಗಡ್ಕರಿ, ಶಿರಾಡಿಯಲ್ಲಿ ಆರು ಪಥದ ರಸ್ತೆ ಮತ್ತು ಸುರಂಗ ಮಾರ್ಗ ನಿರ್ಮಿಸಲಾಗುವುದು. 14 ಸಾವಿರ ಕೋಟಿ ಮೊತ್ತದ ಈ ಯೋಜನೆಗೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ನೀಡಲಾಗುವುದು ಎಂದು ಹೇಳಿದ್ದರು. ಈ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿರುವ ಗಡ್ಕರಿ, ಈಗಾಗಲೇ ನಾಲ್ಕು ಪಥದ ರಸ್ತೆ ನಿರ್ಮಿಸುವ ಬಗ್ಗೆ ಹೆದ್ದಾರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆ ಬಗ್ಗೆ ಸದ್ಯದಲ್ಲೇ ಡಿಪಿಆರ್ ರಚಿಸಲಿದ್ದಾರೆ ಎಂದಿದ್ದಾರೆ.
ಕೆನರಾ ಚೇಂಬರ್ ಆಫ್ ಕಾಮರ್ಸ್ ಶಿರಾಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಿದಲ್ಲಿ ಸಾಗಾಟ ವೆಚ್ಚ ತಗ್ಗಲಿದೆ, ಮಂಗಳೂರು- ಬೆಂಗಳೂರು ನಡುವೆ ಸಂಚಾರಕ್ಕೆ ಸಹಕಾರಿ ಆಗಲಿದೆ ಎಂದು ಮನವಿ ಮಾಡಿದ್ದರು. ಈ ಬಗ್ಗೆ ಆಸ್ಟ್ರಿಯಾ ಮೂಲದ ಕಂಪನಿಯೊಂದು ಸಮೀಕ್ಷೆಯನ್ನೂ ನಡೆಸಿತ್ತು. 23.5 ಕಿಮೀ ಉದ್ದದ ರಸ್ತೆ ನಿರ್ಮಿಸಿ, ಅದರಲ್ಲಿ ಆರು ಕಡೆ ಸುರಂಗ, ಏಳು ಸೇತುವೆ ನಿರ್ಮಿಸುವ ಪ್ರಸ್ತಾಪ ಮಾಡಿತ್ತು.
ಈಗ ಮಂಗಳೂರು- ಬೆಂಗಳೂರು ಸಂಚಾರಕ್ಕೆ ಏಳರಿಂದ ಎಂಟು ಗಂಟೆ ಬೇಕಾಗಿದ್ದರೆ, ಸುರಂಗ ನಿರ್ಮಾಣದ ಬಳಿಕ ಒಂದು ಗಂಟೆ ಕಡಿಮೆಯಾಗುವ ಬಗ್ಗೆ ಚಿಂತನೆ ಇತ್ತು. ಅಲ್ಲದೆ, ಸುರಂಗ ಮಾರ್ಗ ಮಾಡಿದಲ್ಲಿ ಹೆಚಚು ಅರಣ್ಯ ನಾಶ ಆಗುವುದಿಲ್ಲ. ದ್ವಿಪಥದ ಬದಲು ನಾಲ್ಕು ಪಥದ ರಸ್ತೆ ಮಾಡಿದಲ್ಲಿ ಅಪಾರ ಅರಣ್ಯ ನಾಶ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಅಪಾರ ನಿರ್ಮಾಣ ವೆಚ್ಚ ಮತ್ತು ಮಳೆಗಾಲದಲ್ಲಿ ಕುಸಿಯುವ ಬೆಟ್ಟಗಳ ನಡುವೆ ಸುರಂಗ ಮಾರ್ಗ ಉಚಿತವಲ್ಲ ಎಂಬ ನಿರ್ಧಾರಕ್ಕೆ ಹೆದ್ದಾರಿ ಸಚಿವಾಲಯ ಬಂದಿದೆ.
The much-hyped Green Tunnel Bypass for Shiradi Ghat on Bengaluru-Mangaluru National Highway 75 was found to be not viable and instead the National Highways Authority of India (NHAI) was asked to prepare a detailed project report (DPR) for a four-lane road on the 26-km Ghat stretch. This was disclosed by Union Minister for Road Transport and Highways Nitin Gadkari in the Lok Sabha while answering a question on the present status of Shiradi Ghat posed by Nalin Kumar Kateel, MP of Dakshina Kannada on Thursday, December 8 in New Delhi.
25-06-25 02:56 pm
Bangalore Correspondent
Assault Case, Anant Kumar Hegde, Accident: ಹಲ...
25-06-25 01:09 pm
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
Tumakuru Suicide, Instagram Reels: ರೀಲ್ಸ್ ವಿಚ...
24-06-25 08:16 pm
25-06-25 07:40 pm
HK News Desk
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
24-06-25 09:49 pm
Mangalore Correspondent
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
25-06-25 04:06 pm
HK News Desk
ಸ್ನೇಹಿತನಿಂದ 8 ಲಕ್ಷ ರೂ. ಸಾಲ ; ಕೊಟ್ಟ ಸಾಲ ತೀರಿಸಲ...
24-06-25 09:51 pm
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am