ಬ್ರೇಕಿಂಗ್ ನ್ಯೂಸ್
09-11-22 08:54 pm Mangalore Correspondent ಕರಾವಳಿ
ಮಂಗಳೂರು, ನ.9: ಮಂಗಳೂರು ನಗರದಲ್ಲಿ ಕೆಲವು ಪ್ರದೇಶಗಳು ಕತ್ತಲಾಗುತ್ತಿದ್ದಂತೆ ರೆಡ್ ಲೈಟ್ ಏರಿಯಾವೋ ಅನ್ನುವಂತೆ ಬದಲಾಗುತ್ತದೆ. ಅರೆಬರೆ ಬಟ್ಟೆ ತೊಟ್ಟು ತಮ್ಮ ಮೈಮಾಟ ತೋರಿಸುವ ಮಂಗಳಮುಖಿಯರು ಲಲ್ಲೆಗರೆದು ಗಿರಾಕಿಗಳನ್ನು ತಮ್ಮ ಬುಟ್ಟಿಗೆ ಹಾಕ್ಕೊಳ್ತಿದ್ದಾರೆ. ಜಪ್ಪಿನಮೊಗರಿನ ಸಂಚಾರಿ ಠಾಣೆಯ ಎದುರಲ್ಲೇ ಮಂಗಳಮುಖಿಯರ ಕಾಟ ಹೆಚ್ಚಾಗಿದ್ದು ಸಾರ್ವಜನಿಕರು ರಸ್ತೆ ಬದಿ ಅಡ್ಡಹಾಕುವ ಇವರಿಂದ ಸುಲಿಗೆಗೆ ಒಳಗಾಗುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಕದ್ರಿ ಪಾರ್ಕ್, ಎಜೆ ಆಸ್ಪತ್ರೆಯ ಬಳಿಯಲ್ಲೂ ಇದೇ ರೀತಿ ಮಂಗಳಮುಖಿಯರು ಕಾಟ ಕೊಡುತ್ತಾರೆ. ಇತ್ತೀಚಿನ ಕೆಲವು ದಿನಗಳಿಂದ ಜಪ್ಪಿನಮೊಗರಿನಲ್ಲಿ ಹೆದ್ದಾರಿ ಬದಿಯಲ್ಲೇ ಕೆಲವರು ಅರೆಬರೆ ಬಟ್ಟೆ ತೊಟ್ಟು ಗಿರಾಕಿಗಳತ್ತ ಬಲೆ ಬೀಸುತ್ತಿದ್ದಾರೆ. ಇವರ ವೇಶ್ಯಾವಾಟಿಕೆ ದಂಧೆಗೆ ಲಾರಿ, ಟ್ರಕ್ ಚಾಲಕರು, ಕ್ಲೀನರ್ ಗಳೇ ಟಾರ್ಗೆಟ್. ಕದ್ರಿ, ಕೆಪಿಟಿ ಆಸುಪಾಸು ರಾತ್ರಿ ನಿಲ್ಲಿಸುವ ಟ್ರಕ್ ಚಾಲಕರನ್ನು ಮಂಗಳಮುಖಿಯರು ತಮ್ಮ ಬಲೆಗೆ ಬೀಳಿಸಿ ಸುಲಿಯುತ್ತಿದ್ದಾರೆ. ಜಪ್ಪಿನಮೊಗರಿನಲ್ಲಿ ಈಗ ಸ್ಥಳೀಯ ಕೆಲವರು ಕೂಡ ಖಾಯಂ ಗಿರಾಕಿಗಳಾಗಿದ್ದು, ಇದಕ್ಕಾಗಿ ಕತ್ತಲಾಗುತ್ತಿದ್ದಂತೆ ಅರ್ಧ ಲಂಗ ತೊಟ್ಟು ವಯ್ಯಾರದಲ್ಲಿ ನಿಲ್ಲುವ ಲಲನೆಯರಂತೆ ಇವರು ಗಾಳ ಹಾಕುತ್ತಿದ್ದಾರೆ.


ಹೆದ್ದಾರಿ ಬದಿಯಲ್ಲಿ ಸಣ್ಣ ಮಿಡಿ, ಸ್ಕರ್ಟ್ ಹಾಕಿ ನಿಲ್ಲುವ ಇವರು ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸರತಿ ನಿಲ್ಲುವ ವೇಶ್ಯೆಯರಂತೆ ತೋರುತ್ತಾರೆ. ಹೆದ್ದಾರಿ ಬದಿಯಲ್ಲಿ ಓಪನ್ನಾಗಿ ಇವರು ದಂಧೆಗಿಳಿಯುತ್ತಿದ್ದರೂ, ಎದುರಲ್ಲೇ ಇರುವ ಸಂಚಾರಿ ಠಾಣೆ ಪೊಲೀಸರ ಕಣ್ಣಿಗೆ ಬಿದ್ದಿಲ್ಲವೋ, ಬೀಳದಂತೆ ನಟಿಸುತ್ತಾರೋ ಗೊತ್ತಿಲ್ಲ. ಸ್ಥಳೀಯ ಕೆಲವರು ಇವರ ವೇಷ ತಿಳಿಯದೆ, ಹತ್ತಿರ ಹೋಗಿ ತಮ್ಮ ಸೊತ್ತುಗಳನ್ನೆಲ್ಲ ಕಳಕೊಂಡಿದ್ದಾರೆ ಎನ್ನುವ ವಿಚಾರಗಳೂ ಹೊರಬೀಳುತ್ತಿವೆ. ಹಗಲಿನಲ್ಲಿ ಟ್ರಾಫಿಕ್ ಸಿಗ್ನಲ್, ಟೋಲ್ ಗೇಟ್ ಆಸುಪಾಸು ಕಾಣಿಸಿಕೊಳ್ಳುವ ಮಂಗಳಮುಖಿಯರು ವಾಹನ ಸವಾರರಿಂದ ಹಣ ಕೀಳುತ್ತಾರೆ. ಹಣ ಕೊಡದೇ ಇದ್ದರೆ, ಶಾಪ ಹಾಕುವ ಮಂದಿಯೂ ಇದ್ದಾರೆ.


ರಾತ್ರಿಯಾಗುತ್ತಿದ್ದಂತೆ ಇವರ ವೇಷ ಬದಲಾಗುತ್ತಿದ್ದು, ವೇಶ್ಯಾವಾಟಿಕೆ ದಂಧೆಗಿಳಿಯುವುದು ಜನಸಾಮಾನ್ಯರು ಭಯಪಟ್ಟು ಸಂಚರಿಸುವ ಸ್ಥಿತಿಯಾಗಿದೆ. ಈ ರೀತಿಯ ಸುಲಿಗೆಕೋರರಿಗೆ ಕಡಿವಾಣ ಹಾಕಲು ಹೆದ್ದಾರಿ ಕಾಯುವ ಪೊಲೀಸರಿಗೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ.
Transgenders found doing prostitution openly near Jeppinamogaru in Mangalore without fear right opposite to Traffic police station.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
07-02-26 10:53 pm
HK News Desk
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 10:48 pm
HK News Desk
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm
ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಪ...
07-02-26 08:14 pm
Shivamogga Conversion: ಶಿಕ್ಷಕಿಯಾದ ಬಳಿಕ ಪತ್ನಿ...
07-02-26 06:44 pm
Bangalore Cat Kidnap: ಬೆಂಗಳೂರಿನಲ್ಲಿ ಠಾಣೆ ಮೆಟ್...
07-02-26 05:21 pm