ಬ್ರೇಕಿಂಗ್ ನ್ಯೂಸ್
28-10-22 08:47 pm Mangalore Correspondent ಕರಾವಳಿ
ಮಂಗಳೂರು, ಅ.28 : ಮೀನುಗಾರಿಕೆ ಧಕ್ಕೆ ಬಳಿಯ ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ ಲಕ್ಷದ್ವೀಪಕ್ಕೆ ಸರಕು ಸಾಗಿಸುವ ಮಿನಿ ಹಡಗು ಮಾದರಿಯ ಮೂರು (ಮಂಜಿ) ಬೃಹತ್ ಬೋಟುಗಳು ಬೆಂಕಿಗಾಹುತಿಯಾಗಿದೆ.
ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಬೋಟ್ ಇದಾಗಿದ್ದು ಬೆಂಗ್ರೆಯಲ್ಲಿ ಮಳೆಗಾಲದಲ್ಲಿ ಮಳೆ ಬೀಳದಂತೆ ತೆಂಗಿನ ಗರಿಗಳಿಂದ ಮಾಡಿದ್ದ ಕೊಟ್ಟಿಗೆಯನ್ನು ರಚಿಸಿ, ಅದರ ಅಡಿಭಾಗದಲ್ಲಿ ಹಡಗನ್ನು ನಿಲ್ಲಿಸಲಾಗಿತ್ತು. ಶುಕ್ರವಾರ ಸಂಜೆ ಹೊತ್ತಿಗೆ ಕೊಟ್ಟಿಗೆ ಪಕ್ಕದಲ್ಲಿ ಮಕ್ಕಳು ಪಟಾಕಿ ಬಿಡುತ್ತಿದ್ದರು. ಈ ವೇಳೆ, ಮಕ್ಕಳು ಸಿಡಿಸಿದ್ದ ಪಟಾಕಿಯೊಂದು ನೇರವಾಗಿ ತೆಂಗಿನ ಗರಿಗಳಿದ್ದ ಮಾಡಿಗೆ ಹೋಗಿದ್ದು ಬೆಂಕಿ ಸಿಡಿಯುವಂತೆ ಕಾರಣವಾಗಿದೆ ಎನ್ನಲಾಗುತ್ತಿದೆ. ಕ್ಷಣಾರ್ಧದಲ್ಲಿ ಬೆಂಕಿ ಹರಡಿದ್ದು ಒಂದರಿಂದ ಇನ್ನೊಂದು ಮಿನಿ ಹಡಗುಗಳಿಗೆ ವ್ಯಾಪಿಸಿದೆ.


ಸರಕು ಸಾಗಿಸಲು ಬಳಸುತ್ತಿದ್ದ ಮೂರೂ ಹಡಗುಗಳು ಪೂರ್ತಿ ಹೊರಮೈ ಮರದಿಂದ ನಿರ್ಮಿತವಾಗಿದ್ದು ಒಳಭಾಗದ ರಚನೆಯೂ ಫೈಬರ್ ಮತ್ತು ಮರದಿಂದ ಮಾಡಲ್ಪಟ್ಟವು. ಹೀಗಾಗಿ ಬೆಂಕಿ ಬಹುಬೇಗನೆ ಇಡೀ ಹರಡಿದ್ದು ನೋಡ ನೋಡುತ್ತಲೇ ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಬಾನೆತ್ತರಕ್ಕೆ ಏರಿತ್ತು. ಒಂದು ಹಡಗು ಮಂಗಳೂರಿನ ವೈದ್ಯರಿಗೆ ಸೇರಿದ್ದಾಗಿದ್ದು ಇನ್ನೆರಡು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದೆಂದು ಮಾಹಿತಿಯನ್ನು ಸ್ಥಳೀಯರು ತಿಳಿಸಿದ್ದಾರೆ.


ವಿಷಯ ತಿಳಿದ ಕೂಡಲೇ ವಿವಿಧ ಕಡೆಯ ಅಗ್ನಿಶಾಮಕ ದಳ ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೂರೂ ಹಡಗುಗಳು ಪೂರ್ತಿಯಾಗಿ ಸುಟ್ಟು ಹೋಗಿವೆ. ಈ ಮಿನಿ ಹಡಗಿನ ಒಂದರ ಬೆಲೆ ಐದು ಕೋಟಿಯಷ್ಟಿದ್ದು ಬೆಂಕಿ ದುರಂತದಲ್ಲಿ ಮೂರೂ ಭಸ್ಮ ಆಗಿವೆ. ಈ ಮಿನಿ ಹಡಗಿನಲ್ಲಿ ಅಂದಾಜು 300 ಟನ್ ನಷ್ಟು ಸರಕು ಸಾಗಾಟ ಮಾಡಲಾಗುತ್ತಿತ್ತು.
Mangalore Three boats anchored in Kasaba Bengre under Panambur Police Station limits here accidentally caught fire on Friday, October 28. It is said that initially one boat caught fire. Later the flames spread to nearby anchored boats.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am