ಬ್ರೇಕಿಂಗ್ ನ್ಯೂಸ್
14-10-22 04:56 pm Mangalore Correspondent ಕರಾವಳಿ
ಉಳ್ಳಾಲ, ಅ.14 : ಬ್ಯಾಂಕ್ ಉದ್ಯೋಗಿಯೋರ್ವರು ಮನೆಯಲ್ಲಿ ಪತ್ನಿ, ಮಕ್ಕಳಿಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಮುಚ್ಚಿಲ ಕೋಡಿ ಎಂಬಲ್ಲಿ ನಡೆದಿದೆ.
ಕೊಣಾಜೆ, ಮುಚ್ಚಿಲ ಕೋಡಿ ನಿವಾಸಿ ಚರಣ್ ರಾಜ್ ಶೆಟ್ಟಿ(37) ಆತ್ಮಹತ್ಯೆಗೈದ ಯುವಕ. ಚರಣ್ ಅವರು ಕರ್ನಾಟಕ ಬ್ಯಾಂಕ್ ನ ಪಚ್ಚನಾಡಿ ಶಾಖೆಯಲ್ಲಿ ಅಟೆಂಡರ್ ಆಗಿದ್ದರು. ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಅವರು ಮದ್ಯ ವ್ಯಸನಕ್ಕೆ ದಾಸರಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.
ಪತ್ನಿ ಮತ್ತು ಇಬ್ಬರು ಮಕ್ಕಳು ನವರಾತ್ರಿಗೆಂದು ತವರು ಮನೆಗೆ ತೆರಳಿದ್ದರು. ನಿನ್ನೆ ಚರಣ್ ಅವರು ಪತ್ನಿಯ ಮನೆಗೆ ತೆರಳಿ ಮಕ್ಕಳನ್ನು ಮಾತನಾಡಿಸಿ ಬಂದಿದ್ದರಂತೆ.
ಚರಣ್ ಅವರ ತಾಯಿ ಶಾಲಾ ಬಸ್ಸಲ್ಲಿ ಕಂಡಕ್ಟರ್ ಆಗಿದ್ದು ಇಂದು ಬೆಳಗ್ಗೆ ಬೇಗನೆ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ಚರಣ್ ಅವರು ಸಾಕು ನಾಯಿಯನ್ನ ಹಿಡಿದು ವಾಕಿಂಗ್ ತೆರಳಿದ್ದರಂತೆ. ಮಧ್ಯಾಹ್ನ ಚರಣ್ ಅವರ ಮೊಬೈಲಿಗೆ ಪತ್ನಿ ಕರೆ ಮಾಡಿದ್ದು ಸ್ವೀಕರಿಸದೇ ಇದ್ದಾಗ ಮುಚ್ಚಿಲ ಕೋಡಿಯ ನೆರೆಹೊರೆಯವರಲ್ಲಿ ವಿಚಾರಿಸಿದ್ದಾರೆ. ನೆರೆ ಹೊರೆಯವರು ಮನೆಯನ್ನ ಪರಿಶೀಲಿಸಿದಾಗ ಚರಣ್ ರಾಜ್ ನೇಣು ಬಿಗಿದಿದ್ದು ಅವರನ್ನ ರಕ್ಷಿಸಲು ಆಸ್ಪತ್ರೆಗೆ ಕೊಂಡೊಯ್ದರೂ ಅದಾಗಲೇ ಅಸುನೀಗಿದ್ದಾರೆ.
ಮೃತ ಚರಣ್ ರಾಜ್ ಅವರಿಗೆ ಆರು ತಿಂಗಳ ಮತ್ತು ಮೂರು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕೊಣಾಜೆ ಠಾಣಾ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.
Ullal 37 year old Bank employee commits suicide in Mangalore , financial crises suspected. The deceased has been identified as Charan Raj Shetty (37).
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
24-06-25 01:02 am
HK News Desk
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
23-06-25 11:01 pm
Mangalore Correspondent
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
Mangalore, Lokayukta Raid, MCC: ಮಂಗಳೂರು ಪಾಲಿಕ...
23-06-25 06:56 pm
Sudheer Kumar Reddy, Mangalore; ಸಾಕ್ಷ್ಯಗಳಿದ್ದ...
23-06-25 06:07 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm