ಬ್ರೇಕಿಂಗ್ ನ್ಯೂಸ್
11-10-22 08:19 pm Mangalore Correspondent ಕರಾವಳಿ
ಮಂಗಳೂರು, ಅ.11: ಲ್ಯಾಪ್ ಟಾಪ್ ಕೊಡಿಸುತ್ತೇನೆಂದು ಹೇಳಿ ನಗರದ ಉದ್ಯಮಿಯೊಬ್ಬರ ಬಳಿಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಶಾಪ್ ಹೊಂದಿರುವ ಉದ್ಯಮಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು, ಬಿಡಿ ಭಾಗಗಳನ್ನು ಮಾರಾಟ ಮಾಡುವ ಉದ್ಯಮ ಹೊಂದಿದ್ದಾರೆ. ಇವರಿಗೆ ಜೈಪುರದ ವೈಶಾಲಿ ನಗರದ ಮನೋಜ್ ಚೌರಾಸಿಯಾ ಎಂಬಾತ ಫೋನ್ ಕರೆ ಮಾಡಿ, ನಾವು ಕಡಿಮೆ ದರಕ್ಕೆ ಲ್ಯಾಪ್ ಟಾಪ್ ಪೂರೈಸುತ್ತೇವೆ ಎಂದು ನಂಬಿಸಿದ್ದಾನೆ. ಅದರಂತೆ, ಕಳೆದ ಆಗಸ್ಟ್ ತಿಂಗಳಲ್ಲಿ ಎರಡು ಲ್ಯಾಪ್ ಟಾಪ್ ಖರೀದಿಸಿದ್ದರು.

ಆನಂತರ ಕೆಲವು ದಿನಗಳ ಬಳಿಕ ಮನೋಜ್ ಚೌರಾಸಿಯಾ ಮತ್ತು ಆತನ ಅಸಿಸ್ಟೆಂಟ್ ಸುರಕ್ಷಾ ಖಂಡೇಲ್ ವಾಲಾ ಫೋನ್ ಕರೆ ಮಾಡಿ, ಮತ್ತಷ್ಟು ಲ್ಯಾಪ್ ಟಾಪ್ ಖರೀದಿಸುವಂತೆ ಆಫರ್ ಮಾಡಿದ್ದಾರೆ. ಅದರಂತೆ, ಉದ್ಯಮಿ 15 ಎಚ್ ಪಿ ಬ್ರಾಂಡಿನ ಲ್ಯಾಪ್ ಟಾಪ್ ಮತ್ತು ಕ್ಯಾರಿ ಬ್ಯಾಗನ್ನು ನೀಡುವಂತೆ ಡೀಲ್ ಕುದುರಿಸಲು ಒಪ್ಪಿದ್ದರು. ಅಲ್ಲದೆ, ಸಾಮಗ್ರಿ ಪೂರೈಸುವುದಕ್ಕಾಗಿ 5.70 ಲಕ್ಷ ರೂ.ಗಳನ್ನು ಮನೋಜ್ ಚೌರಾಸಿಯಾಗೆ ನೀಡಿದ್ದರು. ಆದರೆ ಚೌರಾಸಿಯಾ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾರೆಂದು ದೂರು ನೀಡಲಾಗಿದೆ.
ಪೊಲೀಸರು ಪರಿಶೀಲನೆ ನಡೆಸಿದಾಗ ಮನೋಜ್ ಚೌರಾಸಿಯಾ ಮಂಗಳೂರಿನಲ್ಲೇ ಹಲವರಿಗೆ ಇದೇ ರೀತಿ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾನೆಂದು ಗೊತ್ತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
A case is filed in which it is accused that a person was fleeced Rs 5.70 lac on the pretext of supplying laptops. An entrepreneur from the city is selling spare parts of laptop and computers. He was approached by Manoj Chaurasia of Vaishali city in Jaipur saying that he will supply laptops at low price. Accordingly, in the month of August, the city entrepreneur bought two laptops from him.
12-11-25 09:03 pm
Bangalore Correspondent
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm