ಬ್ರೇಕಿಂಗ್ ನ್ಯೂಸ್
24-09-22 10:19 pm Mangalore Correspondent ಕರಾವಳಿ
ಮಂಗಳೂರು, ಸೆ.24: ಶಾಲೆ, ಕಾಲೇಜಿನಲ್ಲಿ ಮೊಬೈಲ್ ಹಿಡ್ಕೊಂಡು ಕ್ಲಾಸಿಗೆ ತೆರಳಲು ಅವಕಾಶ ಇಲ್ಲ. ಆದರೂ ಕಾಲೇಜು ವಿದ್ಯಾರ್ಥಿಗಳು ಈಗೆಲ್ಲ ಮೊಬೈಲ್ ತಗೊಂಡೇ ತರಗತಿಗೆ ಹೋಗುತ್ತಾರೆ. ಆದರೆ, ಮೊಬೈಲಿನಲ್ಲಿ ತರಗತಿಯೊಳಗೆ ಏನ್ ನೋಡ್ತಾರೆ ಅನ್ನೋದ್ರ ಬಗ್ಗೆ ಅಧ್ಯಾಪಕರು ಗಮನ ಇಟ್ಟಿದ್ದಾರೆಯೇ? ಸುರತ್ಕಲ್ ಸಮೀಪದ ಕಾಟಿಪಳ್ಳದ ಕಾಲೇಜು ಒಂದರಲ್ಲಿ ವಿದ್ಯಾರ್ಥಿಗಳು ತರಗತಿ ಒಳಗಡೆಯೇ ಬ್ಲೂ ಫಿಲಂ ನೋಡುತ್ತಿದ್ದರು ಅನ್ನುವ ಬಗ್ಗೆ ಅಲ್ಲಿನ ಕೆಲವು ವಿದ್ಯಾರ್ಥಿಗಳು ದೂರಿಕೊಂಡಿದ್ದಾರೆ.
ಅಲ್ಲಿನ ಪಿಯು ತರಗತಿಯಲ್ಲಿ ಹುಡುಗರು ಜೊತೆಯಾಗಿ ಕುಳಿತು ಮೊಬೈಲಿನಲ್ಲಿ ವಿಡಿಯೋ ನೋಡುತ್ತಾರಂತೆ. ಇದನ್ನು ಒಬ್ಬಾತ ವಿಡಿಯೋ ಮಾಡಿ ಪ್ರಿನ್ಸಿಪಾಲ್ ಗೆ ದೂರು ನೀಡಿದರೂ, ಕ್ಯಾರ್ ಮಾಡಿಲ್ಲವಂತೆ. ಇತರೇ ಹುಡುಗಿಯರು ಕ್ಲಾಸಿನಲ್ಲಿ ಟ್ಯಾಲೆಂಟ್ಸ್ ಡೇ ಕಾರ್ಯಕ್ರಮಕ್ಕೆ ಪ್ರಾಕ್ಟೀಸ್ ಮಾಡುತ್ತಿದ್ದರೆ, ಕೆಲವರು ವಿಡಿಯೋ ನೋಡುತ್ತಿದ್ದರು. ಇದನ್ನು ಪ್ರಿನ್ಸಿಪಾಲರಲ್ಲಿ ಪ್ರಶ್ನೆ ಮಾಡಿದರೆ, ನಮ್ಮನ್ನೇ ಆರೋಪಿಯಾಗಿ ನೋಡುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ನಾವು ಮಾತನಾಡಿದರೂ, ವಿಡಿಯೋ ಮಾಡಿ ಹಾಕ್ತೀಯಾ ಎಂದು ಪ್ರಶ್ನಿಸಿ ತಮಾಷೆ ಮಾಡುತ್ತಾರಂತೆ.
ಇತ್ತೀಚೆಗೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು, ಸಹಪಾಠಿ ವಿದ್ಯಾರ್ಥಿನಿಯನ್ನೇ ಅತ್ಯಾಚಾರಗೈದಿದ್ದು ಅದರ ವಿಡಿಯೋ ಹೊರಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಕಾಲೇಜು ವಿದ್ಯಾರ್ಥಿಗಳ ಅತಿರೇಕದ ವರ್ತನೆಯಿಂದಾಗಿ ಮಂಗಳೂರಿನ ಜನರು ತಲೆತಗ್ಗಿಸುವಂತಾಗಿತ್ತು. ಇದಕ್ಕೆಲ್ಲ ಮೊಬೈಲ್ ಕಾರಣ ಎಂದರೂ ಅತಿಶಯವಲ್ಲ. ಮೊಬೈಲಿನ ಕಾರಣ ಎಲ್ಲವೂ ಬೆರಳ ತುದಿಯಲ್ಲಿ ಸಿಗುವುದರಿಂದ ಕೆಲವರ ಅತಿರೇಕದ ವರ್ತನೆಗೆ ಕಾರಣವಾಗುತ್ತಿದೆ. ಇದಕ್ಕೆ ಹುಡುಗ- ಹುಡುಗಿಯ ಭೇದ ಇಲ್ಲದಂತಾಗಿದೆ. ತರಗತಿಯಲ್ಲಿ ಮೊಬೈಲ್ ಬಳಕೆಗೆ ನಿಷೇಧ ಇದ್ದರೂ, ಕಾಲೇಜಿನ ಆಡಳಿತವಾಗಲೀ, ಉಪನ್ಯಾಸಕರಾಗಲೀ ಮುತುವರ್ಜಿ ವಹಿಸಿಲ್ಲ. ಕಾಟಿಪಳ್ಳದ ಕಾಲೇಜಿನಲ್ಲಿ ಮೊಬೈಲ್ ಆಟಾಟೋಪದ ಬಗ್ಗೆ ದೂರು ನೀಡಿದರೂ ಆಡಳಿತ ಮತ್ತು ಅಧ್ಯಾಪಕ ವರ್ಗ ನಿರ್ಲಕ್ಷಿಸಿದ್ದಾರಂದ್ರೆ, ಏನು ಹೇಳಬೇಕು ಹೇಳಿ.
Mangalore Students of a private college watch obscene video in classroom, Some of the alumni students of the college speaking to Headline karnataka said that principal has taken no action against such students. Also the video has gone viral in the college
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
14-07-26 01:37 pm
HK News Staffer
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
14-07-26 02:43 pm
HK News Staffer
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm