ಬ್ರೇಕಿಂಗ್ ನ್ಯೂಸ್
28-08-22 02:10 pm Udupi Correspondent ಕರಾವಳಿ
ಉಡುಪಿ, ಆಗಸ್ಟ್ 28: ಉಡುಪಿ – ಪೆರಂಪಳ್ಳಿ ರಸ್ತೆಯ ಅವ್ಯವಸ್ಥೆ, ಗುಂಡಿ ಬಿದ್ದಿರುವುದನ್ನು ಸರಿಪಡಿಸದ ಶಾಸಕ ರಘುಪತಿ ಭಟ್ ಅವರನ್ನು ಯುವತಿಯೊಬ್ಬರು ತರಾಟೆಗೆತ್ತಿಕೊಂಡು ವಿಡಿಯೋ ಮಾಡಿದ್ದು, ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ತಪರಾಕಿ ಬೀಸಿದಂತಾಗಿದೆ.
ಪೆರಂಪಳ್ಳಿ ರಸ್ತೆಯಲ್ಲೇ ನೀವು ಹೋಗುತ್ತೀರಲ್ಲಾ.. ನಿಮಗೆ ಇಲ್ಲಿ ಗುಂಡಿ ಬಿದ್ದಿರುವುದು ಕಾಣಲ್ವಾ.. ನಿಮ್ಮದು ಸರಕಾರಿ ಕಾರು, ಎದ್ದು ಬಿದ್ದು ಹೋದರೂ ಏನೂ ಅನಿಸೋದಿಲ್ಲ. ನಾವು ಕಷ್ಟಪಟ್ಟು ಸ್ಕೂಟರ್, ಕಾರು ತಗೊಂಡಿರುತ್ತೇವೆ. ಒಂದು ಗುಂಡಿಗೆ ಬಿದ್ದಾಗ ವ್ಯಥೆ ಪಡುತ್ತೇವೆ. ನಿಮಗೆ ಒಂಚೂರಾದ್ರೂ ಮನುಷ್ಯತ್ವ ಇಲ್ಲವೇ ಎಂದು ಯುವತಿ ಪ್ರಶ್ನೆ ಮಾಡಿದ್ದಾರೆ.
ಮೊನ್ನೆ ಒಂದು ದಿನ ಇದೇ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಗುಂಡಿಗೆ ಬಿದ್ದು ಗಾಯಗೊಂಡಿದ್ದರು. ನಮ್ಮ ಕಣ್ಣೆದುರಲ್ಲೇ ಘಟನೆ ನಡೆದಿತ್ತು. ಅಲ್ಲಲ್ಲಿ ಗುಂಡಿ ಬಿದ್ದು ರಸ್ತೆ ಹಾಳಾಗಿದ್ದರೂ, ಅದನ್ನು ದುರಸ್ತಿ ಪಡಿಸೋಕೆ ಆಗಿಲ್ಲ. ನಾವು ವಾಹನ ತೆರಿಗೆ, ರಸ್ತೆ ತೆರಿಗೆ, ಟೋಲ್ ಗೇಟ್ ಎಲ್ಲ ಯಾಕೆ ಕಟ್ಟುವುದು. ಈ ಗುಂಡಿ ಬಿದ್ದ ರಸ್ತೆಯಲ್ಲಿ ಪ್ರಯಾಣಿಸಲು ನಾವು ತೆರಿಗೆ ಕಟ್ಟಬೇಕೇ. .ಟೋಲ್ ಕಟ್ಟುವ ಅಗತ್ಯವಿದೆಯೇ..?
ನೀವ್ಯಾಕೆ ಜನಪ್ರತಿನಿಧಿಗಳೆಲ್ಲ ಮನುಷ್ಯತ್ವ ಹೀನರಾಗಿ ವರ್ತಿಸುತ್ತಿದ್ದೀರಿ. ಮಂಗಳೂರಿನಲ್ಲಿ ಮೋದಿ ಬರುತ್ತಿರುವ ಕಾರಣಕ್ಕೆ ರಸ್ತೆ ಸರಿಪಡಿಸುತ್ತಿದ್ದಾರೆ. ಮೋದಿ ಕಾರಣದಿಂದಾದ್ರೂ ರಸ್ತೆ ಸರಿ ಆಗ್ತಾ ಇದೆ. ಉಡುಪಿಗೆ ರಸ್ತೆ ಸರಿ ಮಾಡಲು ಯಾರು ಬರಬೇಕು.. ಮೋದಿಯೇ ಬರಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮಲ್ಲಿ ಬೇರೆ ಯಾವುದೂ ಕೇಳಿಕೊಳ್ಳುವುದಿಲ್ಲ. ಕನಿಷ್ಠ ರಸ್ತೆಯನ್ನು ಮಾತ್ರ ಸರಿಪಡಿಸಿಕೊಡಿ ಎಂದು ಹೇಳಿ ಈ ವಿಡಿಯೋ ಶಾಸಕರಿಗೆ ಮುಟ್ಟುವ ವರೆಗೂ ವೈರಲ್ ಮಾಡುವಂತೆ ಮನವಿ ಮಾಡಿದ್ದಾರೆ.
MLA Raghupati Bhat has responded to a video posted on the social media demanding responsible answers from him over the bad condition of roads. On Friday August 26, Komal Jennifer D’Souza, a resident of Udupi had taken the MLA to task over the pathetic condition of Perampalli-Manipal road. The video had gone viral within minutes of posting it on social media.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
22-06-25 07:48 pm
HK News Desk
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm