ಬ್ರೇಕಿಂಗ್ ನ್ಯೂಸ್
19-08-22 04:02 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 19: ಮಂಗಳೂರು ನಗರದಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕುವುದನ್ನು ನೋಡಿದ್ದೇವೆ. ಗ್ಯಾಸ್ ಪೈಪ್ ಲೈನ್, ಚರಂಡಿ ಕಾಮಗಾರಿ, ನೀರಿನ ಪೈಪ್ಲೈನ್ ಕಾರಣಕ್ಕೆ ಕಾಂಕ್ರೀಟ್ ರಸ್ತೆಯನ್ನು ಅಗೆಯುತ್ತಾರೆ. ಕೆಲವು ಕಡೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಚೌಕಾಕಾರದಲ್ಲಿ ಅಗೆದು ಕಾಮಗಾರಿ ನಡೆಸುತ್ತಾರೆ. ಆದರೆ, ಹೀಗೆ ಅಗೆದ ಜಾಗದಲ್ಲಿ ಮತ್ತೆ ಕಾಂಕ್ರೀಟ್ ತುಂಬಿಸುವ ಕೆಲಸವನ್ನು ಸರಿಯಾಗಿ ನಡೆಸುತ್ತಿಲ್ಲ.
ಇದಕ್ಕೊಂದು ತಾಜಾ ನಿದರ್ಶನ ಆಗಬಲ್ಲ ಮತ್ತು ಕೆಲವು ಮತಿಗೆಟ್ಟವರ ಕಾರಣದಿಂದಾಗಿ ಕಾಂಕ್ರೀಟ್ ರಸ್ತೆಯ ನಡುವಲ್ಲೇ ಟಿಪ್ಪರ್ ಲಾರಿ ಕುಸಿದು ಬಿದ್ದು ಸಿಕ್ಕಾಕ್ಕೊಂಡ ಘಟನೆ ನಗರದ ಬಿಜೈನಲ್ಲಿ ನಡೆದಿದೆ. ಜಲ್ಲಿ ತುಂಬಿದ್ದ ಲಾರಿ ಕಾಪಿಕಾಡು ಕಡೆಯಿಂದ ಬಿಜೈ ಆನೆಗುಂಡಿಗೆ ಆಗಮಿಸಿತ್ತು. ಅಲ್ಲಿನ ಒಳರಸ್ತೆಗೆ ಇನ್ನೇನು ಟರ್ನ್ ಮಾಡಬೇಕೆನ್ನುವಷ್ಟರಲ್ಲಿ ಲಾರಿಯ ಹಿಂದಿನ ಎಡಭಾಗದ ಚಕ್ರ ಹೂತು ಹೋಗಿದೆ. ಕಾಂಕ್ರೀಟ್ ರಸ್ತೆಯ ಮಧ್ಯದಲ್ಲೇ ಟೈರ್ ಒಂದೂವರೆ ಅಡಿಯಷ್ಟು ಒಳಕ್ಕೆ ಕುಸಿದಿದೆ.
ಚಾಲಕ ಇಳಿದು ನೋಡುವಷ್ಟರಲ್ಲಿ ಸಂಪೂರ್ಣ ಇಡೀ ಚಕ್ರವೇ ಗುಂಡಿಗೆ ಕುಸಿದು ಹೋಗಿತ್ತು. ಅಲ್ಲಿ ನೋಡಿದರೆ, ಗೈಲ್ ಗ್ಯಾಸ್ ಪೈಪ್ ಲೈನಿಗೆಂದು ಕಾಂಕ್ರೀಟ್ ರಸ್ತೆಯನ್ನು ಅಗೆದಿದ್ದು, ಕೆಲಸ ಮುಗಿದ ಬಳಿಕ ಒಳಗಡೆ ಮಣ್ಣು ತುಂಬಿಸಿ ಮೇಲ್ಭಾಗಕ್ಕೆ ಖಾಲಿ ಸಿಮೆಂಟ್ ನೀರನ್ನು ಸುರಿದು ಗಟ್ಟಿಗೊಳಿಸಿದಂತೆ ಕಂಡುಬಂದಿದೆ. ಜಲ್ಲಿ ತುಂಬಿದ ಟಿಪ್ಪರ್ ಲಾರಿಯಾಗಿದ್ದರಿಂದ ಅದರ ಭಾರಕ್ಕೆ ಚೌಕಾಕೃತಿಯಲ್ಲಿ ಕೊರೆದು, ಅದನ್ನು ಲೆವೆಲ್ ಮಾಡಿದ್ದ ಜಾಗದಲ್ಲಿ ಟೈರ್ ಕುಸಿದು ಹೋಗಿದೆ. ಒಂದು ಭಾಗಕ್ಕೆ ಲಾರಿ ವಾಲಿ ನಿಂತಿದ್ದು, ಚಾಲಕ ಮತ್ತು ಇತರ ಸಿಬಂದಿ ಏನು ಮಾಡುವುದೆಂದು ತೋಚದೆ ಈ ರೀತಿ ಮಾಡಿಟ್ಟ ಗೈಲ್ ಗ್ಯಾಸ್ ಪೈಪ್ ಲೈನ್ ಸಿಬಂದಿ ಬಗ್ಗೆ ಶಾಪ ಹಾಕಿದ್ದಾರೆ.
ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಜೆಸಿಬಿ ಇತರ ಕಾಮಗಾರಿ ನಡೆಸುವ ಮಂದಿ ಸಕಾಲದಲ್ಲಿ ಸಿಗದೆ ಲಾರಿ ಚಾಲಕ ಚಿಂತೆಗೆ ಒಳಗಾಗಿದ್ದರು. ಜಲ್ಲಿಯನ್ನು ಖಾಲಿ ಮಾಡಿಯೇ ಲಾರಿಯನ್ನು ಮೇಲೆತ್ತಬೇಕು ಎಂಬ ಚಿಂತೆಯಲ್ಲಿದ್ದರು. ಆದರೆ ಕಾಂಕ್ರೀಟ್ ರಸ್ತೆಯನ್ನು ಅಗೆದು ಮತ್ತೆ ಕಾಂಕ್ರೀಟ್ ಹಾಕದೆ ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕರಿಗೆ ವಂಚಿಸಿರುವ ಗೈಲ್ ಗ್ಯಾಸ್ ಪೈಪ್ ಲೈನ್ ವಿರುದ್ಧ ಯಾರು ಏಕ್ಷನ್ ತಗೋಬೇಕು ಹೇಳಿ.
Mangalore Overloaded truck gets stuck after concentrate road collapses in Bejai. Often drilling and patching the concentrate roads is the reason for collapse it is said.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
22-06-25 07:48 pm
HK News Desk
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm