ಬ್ರೇಕಿಂಗ್ ನ್ಯೂಸ್
17-08-22 03:44 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 17: ಫಿಶ್ ಮಿಲ್ ಗಳ ಗಬ್ಬು ವಾಸನೆ, ಪರಿಸರ ಮಾಲಿನ್ಯದ ಬಗ್ಗೆ ಪದೇ ಪದೇ ಸಾರ್ವಜನಿಕರು ದೂರು ಹೇಳಿಕೊಂಡು ಬಂದಿದ್ದರೂ, ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳು ಕ್ರಮ ಜರುಗಿಸಿರಲಿಲ್ಲ. ಪ್ರತಿ ಬಾರಿಯೂ ನೋಟೀಸ್ ಕೊಟ್ಟು ಸುಮ್ಮನಾಗುತ್ತಿದ್ದರು. ಆದರೆ, ಈ ಬಗ್ಗೆ ರಾಜ್ಯ ಘಟಕದಿಂದ ನೋಟಿಸ್ ಕೊಟ್ಟರೂ, ಕ್ಯಾರೆನ್ನದ ಮಂಗಳೂರಿನ 16 ಫಿಶ್ ಮಿಲ್ ಘಟಕಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗದಾಪ್ರಹಾರ ಮಾಡಿದೆ. ಬರಾಕಾ ಸೇರಿದಂತೆ ಉಳ್ಳಾಲ, ಸುರತ್ಕಲ್, ಬೈಕಂಪಾಡಿ, ಮುಕ್ಕದಲ್ಲಿರುವ 16 ಫಿಶ್ ಮಿಲ್ ಗಳನ್ನು ಸ್ಥಗಿತಗೊಳಿಸಲು ಆದೇಶ ಮಾಡಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಈ ಬಗ್ಗೆ ಆದೇಶದ ಪ್ರತಿ ಬಂದಿದ್ದು, ಕೂಡಲೇ ಬಂದ್ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ, ಕಾವೂರಿನಲ್ಲಿ ಕಚೇರಿ ಹೊಂದಿರುವ ಮೆಸ್ಕಾಂ ಎಂಡಿಗೂ ಸದ್ರಿ ಫಿಶ್ ಮಿಲ್ ಗಳಿಗೆ ಒದಗಿಸಿರುವ ವಿದ್ಯುತ್ತನ್ನು ಕಡಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

ಕಳೆದ ಒಂದು ವರ್ಷದಲ್ಲಿ ಹಲವು ಬಾರಿ ಫಿಶ್ ಮಿಲ್ ಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟೀಸ್ ಮಾಡಲಾಗಿತ್ತು. ನೀರು ಮತ್ತು ಪರಿಸರ ಮಾಲಿನ್ಯ ಆಗುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಎಚ್ಚರಿಕೆ ನೋಟೀಸ್ ನೀಡಲಾಗಿತ್ತು. ಅಲ್ಲದೆ, ಸಮುದಕ್ಕೆ ಬಿಡುತ್ತಿರುವ ತ್ಯಾಜ್ಯವನ್ನು ಶುದ್ಧೀಕರಿಸಲು ಬಯೋ ಫಿಲ್ಟರ್ ಯಂತ್ರವನ್ನು ಅಳವಡಿಸುವಂತೆ ಸೂಚಿಸಲಾಗಿತ್ತು. ಕಳೆದ ಎಪ್ರಿಲ್ ತಿಂಗಳಲ್ಲಿ ರಾಜ್ಯ ಘಟಕದ ಅಧಿಕಾರಿಗಳು ಮತ್ತು ಅಧ್ಯಕ್ಷರು ಮಂಗಳೂರಿನ ವಿವಿಧ ಘಟಕಗಳಿಗೆ ಬಂದು ಪರಿಶೀಲನೆ ನಡೆಸಿದ್ದರು. ಫಿಶ್ ಮಿಲ್ ಘಟಕಗಳಲ್ಲಿ ತ್ಯಾಜ್ಯ ನಿಯಂತ್ರಣಕ್ಕೆ ವ್ಯವಸ್ಥೆ ಮಾಡದೇ ಇರುವುದನ್ನು ಕಂಡುಕೊಂಡಿದ್ದರು. ಆನಂತರ, ಸೂಕ್ತ ನಿಯಂತ್ರಣ ವ್ಯವಸ್ಥೆ ಕೈಗೊಳ್ಳುವಂತೆ ಎಪ್ರಿಲ್ 29ರಂದು ಎಲ್ಲ ಫಿಶ್ ಮಿಲ್ ಘಟಕಗಳಿಗೆ ನೋಟೀಸ್ ನೀಡಲಾಗಿತ್ತು.
ಕೆಲವು ಘಟಕಗಳಲ್ಲಿ ಬಯೋ ಫಿಲ್ಟರ್ ಇದ್ದರೂ, ಅದು ಕಾರ್ಯಾಚರಣೆ ಆಗುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ಬಯೋ ಫಿಲ್ಟರ್ ಮತ್ತು ಬಾಯ್ಲರ್ ಇಡುವುದಕ್ಕೆ ಸಿಆರ್ ಝೆಡ್ ಕ್ಲೀಯರೆನ್ಸ್ ಪಡೆಯದೇ ಇರುವುದು ಕಂಡುಬಂದಿತ್ತು. ಅಲ್ಲದೆ, ಫಿಶ್ ಮಿಲ್ ಇರುವಲ್ಲಿ ಗಬ್ಬೆದ್ದು ನಾರುವ ವಾಸನೆ ಮತ್ತು ಸಾರ್ವಜನಿಕರ ದೂರುಗಳು ಹಾಗೂ ಸಮುದ್ರಕ್ಕೆ ತ್ಯಾಜ್ಯ ಬಿಡುತ್ತಿದ್ದುದರಿಂದ ನೀರು ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತಿರುವುದು ರಾಜ್ಯ ಘಟಕದ ಅಧಿಕಾರಿಗಳ ಪರಿಶೀಲನೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ಫಿಶ್ ಮಿಲ್ ಘಟಕದ ಮಾಲೀಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ಸೂಕ್ತವಾಗಿ ಸ್ಪಂದಿಸದ ಕಾರಣ ಮಂಗಳೂರಿನ 16 ಫಿಶ್ ಮಿಲ್ ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.
Mangalore Fish factories pollution causing health hazards, 16 fish mills ordered to shut down by Environmental department. locals have been raising voice to inform people's representatives, police, the Pollution Control Board and concerned authorities to take action against the fish factories since long.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm