ಬ್ರೇಕಿಂಗ್ ನ್ಯೂಸ್
14-08-22 04:47 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 14: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅತ್ಯಂತ ವಿಶಿಷ್ಟವಾಗಿ ತ್ರಿವರ್ಣ ರಚಿಸಲಾಗಿದೆ. ದೇವಸ್ಥಾನದ ಮುಂದಿನ ಅಂಗಣದಲ್ಲಿ ಧವಸ ಧಾನ್ಯಗಳನ್ನಷ್ಟೇ ಬಳಸಿಕೊಂಡು ಆಕರ್ಷಕ ತ್ರಿವರ್ಣ ರಚಿಸಿದ್ದು ನೋಡುಗರ ಗಮನ ಸೆಳೆದಿದೆ.
ಗುರು ಬೆಳದಿಂಗಳು ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಕಲಾವಿದ ಮತ್ತು ಛಾಯಾಗ್ರಾಹಕ ಪುನಿಕ್ ಶೆಟ್ಟಿ ನೇತೃತ್ವದಲ್ಲಿ ಕ್ಷೇತ್ರದ ಸಿಬಂದಿ ಮತ್ತು ಗುರು ಬೆಳದಿಂಗಳು ಸಂಸ್ಥೆಯ ಸದಸ್ಯರು ಸೇರಿ 18 ಗಂಟೆಗಳ ಪರಿಶ್ರಮದಿಂದ ಆಕರ್ಷಕ ತ್ರಿವರ್ಣ ರಚಿಸಿದ್ದಾರೆ. ಯಾವುದೇ ಬಣ್ಣಗಳನ್ನು ಬಳಸದೆ ಕೇವಲ ಧಾನ್ಯ, ತರಕಾರಿ, ಹೂಗಳನ್ನಷ್ಟೇ ಬಳಸ್ಕೊಂಡು ತ್ರಿವರ್ಣದ ಆಕರ್ಷಣೆ ಮೂಡಿಸಿದ್ದು ವಿಶೇಷ.
ಒಟ್ಟು 900 ಕೇಜಿ ಧಾನ್ಯ, 100 ಕೇಜಿ ತರಕಾರಿ, 38 ಅಡಿ ವೃತ್ತ, 54 ಕಲಶ, 108 ಬಾಳೆಎಲೆ, 500 ವೀಳ್ಯದೆಲೆ, 100 ಕೇಜಿ ಬೆಳ್ತಿಗೆ ಅಕ್ಕಿಯನ್ನು ಬಳಸಲಾಗಿದೆ. 38 ಅಡಿ ವ್ಯಾಸದ ವೃತ್ತದಲ್ಲಿ ಹೆಸರು ಬೇಳೆಯನ್ನು ಹಸಿರು ಬಣ್ಣಕ್ಕೆ ಬಳಸಿದರೆ, ಬಿಳಿ ಬಣ್ಣವನ್ನು ಸೂಚಿಸಲು ಸಾಗುವನ್ನು ಬಳಸಲಾಗಿದೆ. ಕೇಸರಿ ಬಣ್ಣ ಸೂಚಿಸಲು ಕಡ್ಲೆ ಬೇಳೆಯನ್ನು ಉಪಯೋಗಿಸಲಾಗಿದೆ. ಅದರ ಸುತ್ತಲೂ ಬಾಳೆ ಎಲೆಯಲ್ಲಿ ಕಲಶಗಳನ್ನಿಟ್ಟು ವೀಳ್ಯದೆಲೆ ಮತ್ತು ಅಡಿಕೆ ಇರಿಸಲಾಗಿದೆ. ದೇವಸ್ಥಾನದ ಆವಣರಣ ಆಗಿರುವುದರಿಂದ ಧಾರ್ಮಿಕತೆಯ ಟಚ್ ಕೊಡಲಾಗಿದೆ.
ಕುದ್ರೋಳಿ ದೇವಸ್ಥಾನದ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ದೀಪ ಬೆಳಗಿಸಿ, ಆಕರ್ಷಕ ತ್ರಿವರ್ಣವನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗುರು ಬೆಳದಿಂಗಳು ಸಂಸ್ಥೆಯ ಅಧ್ಯಕ್ಷ ಪದ್ಮರಾಜ್ ಆರ್., ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಮೊಂತೇರೊ, ಕಾರ್ಪೊರೇಟರ್ ಅನಿಲ್, ಲೀಲಾಕ್ಷ ಕರ್ಕೇರ, ಚಿತ್ತರಂಜನ್ ಗರೋಡಿ ಮತ್ತಿತರರಿದ್ದರು.
To mark the Amrut Mahotsav (75th anniversary of the country's Independence), the Kudroli Shree Gokarnanatheshwara Temple Committee has drawn a 38 feet tricolor national flag with food grains (Dhanya) and vegetables on the premises of Kudroli Gokarnanatheshwara Temple here on Sunday, August 14.Former minister B Janardhan Poojary inaugurated the rangoli. He also greeted the public for the 75th anniversary of the country's Independence on the occasion.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
22-06-25 07:48 pm
HK News Desk
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm