ಬ್ರೇಕಿಂಗ್ ನ್ಯೂಸ್
13-08-22 05:29 pm Mangalore Correspondent ಕರಾವಳಿ
ಉಳ್ಳಾಲ, ಆ.13: ಓವರ್ ಸ್ಪೀಡ್ ಆರೋಪದಡಿ ಕೇಸು ದಾಖಲಿಸಿದರೂ, ದಂಡ ಕಟ್ಟದ ಸಿಟಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ಬಸ್ಸು ನೌಕರರು ತಲಪಾಡಿ ರೂಟ್ ನಲ್ಲಿ ಬಸ್ ಮುಷ್ಕರ ನಡೆಸಿದ್ದು, ಚಾಲಕನ ಬಿಡುಗಡೆ ಆಗುತ್ತಿದ್ದಂತೆ ಸಂಜೆ ಹೊತ್ತಿಗೆ ಮುಷ್ಕರ ಕೈಬಿಟ್ಟು ಟ್ರಾಫಿಕ್ ಎಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇಂದು ಬೆಳಗ್ಗೆ 42 ರೂಟ್ ನಂಬರಿನ ಉಷಾ ಟ್ರಾವೆಲ್ಸ್ ಸಿಟಿ ಬಸ್ಸನ್ನು ಮೇಲಿನ ತಲಪಾಡಿಯಲ್ಲಿ ಗಸ್ತಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಎಎಸ್ಸೈ ರಾಬರ್ಟ್ ಲಸ್ರಾದೊ ತಡೆದಿದ್ದರು. ಓವರ್ ಸ್ಪೀಡ್ ಕಾರಣವೊಡ್ಡಿ 1000 ರೂ. ದಂಡ ಕಟ್ಟುವಂತೆ ಬಸ್ ನಿರ್ವಾಹಕ ದಯಾನಂದ್ ಅವರನ್ನ ಪೀಡಿಸಿದ್ದರು. ಚೆಕ್ ಪೋಸ್ಟ್ ಇದ್ದ ಪ್ರದೇಶದಲ್ಲಿ ಹೇಗೆ ಸ್ಪೀಡ್ ಬರಲು ಸಾಧ್ಯ ಎಂದು ನಿರ್ವಾಹಕರು ಪ್ರಶ್ನೆ ಮಾಡಿದ್ದರು. ಕೊನೆಗೆ ಎಎಸ್ಸೈ 500 ರೂ. ದಂಡ ಕಟ್ಟುವಂತೆ ಒತ್ತಡ ಹೇರಿದ್ದು, ದಂಡ ಪಾವತಿಸಲು ನಿರ್ವಾಹಕ ನಿರಾಕರಿಸಿದ್ದರು. ಅದೇ ವಿಚಾರದಲ್ಲಿ ವಾಗ್ವಾದ ನಡೆದಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಎಸ್ಐ, ಬಸ್ ಚಾಲಕ ಅಭಿರಾಜ್ ಅವರನ್ನ ಉಳ್ಳಾಲ ಪೊಲೀಸರನ್ನು ಕರೆಸಿ ವಶಕ್ಕೆ ಪಡೆಯುವಂತೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಬಸ್ ನೌಕರರು ದಿಢೀರ್ ಆಗಿ ತಲಪಾಡಿ ರೂಟ್ ಬಸ್ಸುಗಳನ್ನೆಲ್ಲ ನಿಲ್ಲಿಸಿ ಮುಷ್ಕರ ನಡೆಸಿದರು.
ಈ ಮಧ್ಯೆ ದ.ಕ. ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅವರು ಉಳ್ಳಾಲ ಠಾಣಾಧಿಕಾರಿಯಲ್ಲಿ ವಶಕ್ಕೆ ಪಡೆದ ಬಸ್ ಚಾಲಕ ಅಭಿರಾಜ್ ಅವರನ್ನ ಬಿಡುಗಡೆ ಮಾಡುವಂತೆ ಮಾತುಕತೆ ನಡೆಸಿದ್ದಾರೆ. ಪೊಲೀಸರು ಮುಚ್ಚಳಿಕೆ ಬರೆಸಿ ಚಾಲಕ ಅಭಿರಾಜ್ ಅವರನ್ನು ಬಿಡುಗಡೆ ಮಾಡುತ್ತಿದ್ದಂತೆ ಬಸ್ಸು ನೌಕರರು ಮುಷ್ಕರ ಕೈ ಬಿಟ್ಟು ಬಸ್ ಸ್ಟೇರಿಂಗ್ ತಿರುಗಿಸಿದ್ದಾರೆ.
ಮುಷ್ಕರ ಹಿಂತೆಗೆಯುವ ಮುನ್ನ ಸಿಟಿ ಬಸ್ಸುಗಳಿಗೆ ನಿರಂತರ ಉಪಟಳ ನೀಡುತ್ತಿರುವ ಎಎಸ್ಐ ಲಸ್ರಾದೊ ವಿರುದ್ಧ ಕ್ರಮಕ್ಕೆ ಆಗ್ರಹಿಸುವಂತೆ ಬಸ್ಸು ನೌಕರರು ಜಯಶೀಲ ಅಡ್ಯಂತಾಯ ಅವರಲ್ಲಿ ಕೇಳಿಕೊಂಡಿದ್ದಾರೆ. ಟ್ರಾಫಿಕ್ ಎಎಸ್ಸೈ ಬಗ್ಗೆ ಬಸ್ ಸಿಬಂದಿ ಕಡೆಯಿಂದ ನಿರಂತರ ದೂರುಗಳು ಬರುತ್ತಿದ್ದು ಟ್ರಾಫಿಕ್ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಈ ಬಗ್ಗೆ ದೂರು ಹೇಳುವುದಾಗಿ ಅಡ್ಯಂತಾಯ ಅವರು ಹೇಳಿದ್ದಾರೆ.
Bus driver taken to custody over speed, released, bus resume service at Talapady at Ullal in Mangalore.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
22-06-25 07:48 pm
HK News Desk
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm