ಬ್ರೇಕಿಂಗ್ ನ್ಯೂಸ್
08-08-22 09:42 pm Mangalore Correspondent ಕರಾವಳಿ
ಉಳ್ಳಾಲ, ಆ.8 : ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದ್ದು ಕಡಲ ತೀರದಲ್ಲಿದ್ದ ಗೆಸ್ಟ್ ಹೌಸ್ ಕಟ್ಟಡವೊಂದು ಕಡೆಗೂ ಕಡಲು ಪಾಲಾಗಿದೆ.
ಈ ಬಾರಿಯ ಮಳೆಗಾಲ ಆರಂಭದಲ್ಲೇ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿತ್ತು. ಬೀಚ್ ರಸ್ತೆಯನ್ನೇ ಕಡಲು ನುಂಗಿ ಹಾಕಿದ್ದು ತೀರದಲ್ಲಿರುವ ಬಹುತೇಕ ಮನೆಗಳು, ಗೆಸ್ಟ್ ಹೌಸ್ ಗಳು ಅಪಾದಂಚಿನಲ್ಲಿದ್ದವು. ಆಬಳಿಕ ಬಟ್ಟಪ್ಪಾಡಿ ಪ್ರದೇಶಕ್ಕೆ ಕಡಲ್ಕೊರೆತ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರ ದಂಡೇ ಆಗಮಿಸಿತ್ತು.

ಬಟ್ಟಂಪಾಡಿಯಲ್ಲಿ "ವಿಟಮಿನ್ ಸಿ" ಎಂಬ ಹೆಸರಿನ ಅಕ್ರಮ ಗೆಸ್ಟ್ ಹೌಸ್ ಕಟ್ಟಡ ಕಡಲಿನ ಅಂಚಿನಲ್ಲಿದ್ದು ಈಗಲೋ ಆಗಲೋ ಎನ್ನುವಂತಿತ್ತು. ಅದರ ಮಾಲಕ ಅಬ್ದುಲ್ಲ ಟಿ. ಎಂಬವರು ಕಟ್ಟಡದ ಬದಿಗೆ ಕಲ್ಲು, ಮರಳು ಮೂಟೆಗಳನ್ನ ಹಾಕಿ ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ತೀರ ಪ್ರದೇಶದ ಮೂಲನಿವಾಸಿಗಳ ಮನೆಗಳೇ ಕಡಲಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದರಿಂದ ಜಿಲ್ಲಾಡಳಿತದಿಂದ ಗೆಸ್ಟ್ ಹೌಸ್ ರಕ್ಷಣೆಗೆ ಕಾಮಗಾರಿ ಕೈಗೊಳ್ಳಲು ಸ್ಥಳೀಯರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದ ರೋಸಿ ಹೋಗಿದ್ದ ಗೆಸ್ಟ್ ಹೌಸ್ ಮಾಲಕ ಕಡಲ್ಕೊರೆತ ವೀಕ್ಷಣೆಗೆ ಬಂದಿದ್ದ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರಲ್ಲಿಯೂ ಅಳಲು ತೋಡಿಕೊಂಡಿದ್ದರು. ಉಳ್ಳಾಲ ತಾಲೂಕು ಕಚೇರಿಗೆ ಕಂಪ್ಯೂಟರ್, ಪೀಠೋಪಕರಣಗಳನ್ನ ನೀಡಿದ್ದರೂ ತಮ್ಮ ಗೆಸ್ಟ್ ಹೌಸನ್ನ ರಕ್ಷಿಸಲು ತಹಶೀಲ್ದಾರ್ ಬಿಡುತ್ತಿಲ್ಲ ಎಂದು ದೂರು ಹೇಳಿದ್ದರು. ಆದರೆ ಮಾಲಕರ ಶತ ಪ್ರಯತ್ನದ ನಡುವೆಯೂ ಕಡಲಿನ ಅಬ್ಬರ ಹೆಚ್ಚುತ್ತಲೇ ಇದ್ದು ಈಗ ಗೆಸ್ಟ್ ಹೌಸ್ ಕಟ್ಟಡದ ಭಾಗಶಃ ನೀರುಪಾಲಾಗಿದೆ. ಸಮುದ್ರರಾಜನ ರಕ್ಕಸ ಅಲೆಗಳು ನುಗ್ಗಿ ಬರುತ್ತಿದ್ದು ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ನುಂಗಿ ಹಾಕಲಿದೆ.
Guest house in Ullal finally due to soil erosion, administration negligence reason says owners.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
13-07-26 09:16 pm
HK News Staffer
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
13-07-26 10:57 pm
HK News Staffer
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm
ಬಿಡದಿ ಟೌನ್ಶಿಪ್ ಜಟಾಪಟಿ ; ಸರ್ವೆಗೆ ಬಂದಿದ್ದ ಅಧಿ...
13-07-26 07:39 pm
ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ, ಧರ್ಮಸ್ಥಳ...
13-07-26 02:54 pm