ಬ್ರೇಕಿಂಗ್ ನ್ಯೂಸ್
08-08-22 09:42 pm Mangalore Correspondent ಕರಾವಳಿ
ಉಳ್ಳಾಲ, ಆ.8 : ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದ್ದು ಕಡಲ ತೀರದಲ್ಲಿದ್ದ ಗೆಸ್ಟ್ ಹೌಸ್ ಕಟ್ಟಡವೊಂದು ಕಡೆಗೂ ಕಡಲು ಪಾಲಾಗಿದೆ.
ಈ ಬಾರಿಯ ಮಳೆಗಾಲ ಆರಂಭದಲ್ಲೇ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿತ್ತು. ಬೀಚ್ ರಸ್ತೆಯನ್ನೇ ಕಡಲು ನುಂಗಿ ಹಾಕಿದ್ದು ತೀರದಲ್ಲಿರುವ ಬಹುತೇಕ ಮನೆಗಳು, ಗೆಸ್ಟ್ ಹೌಸ್ ಗಳು ಅಪಾದಂಚಿನಲ್ಲಿದ್ದವು. ಆಬಳಿಕ ಬಟ್ಟಪ್ಪಾಡಿ ಪ್ರದೇಶಕ್ಕೆ ಕಡಲ್ಕೊರೆತ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರ ದಂಡೇ ಆಗಮಿಸಿತ್ತು.
ಬಟ್ಟಂಪಾಡಿಯಲ್ಲಿ "ವಿಟಮಿನ್ ಸಿ" ಎಂಬ ಹೆಸರಿನ ಅಕ್ರಮ ಗೆಸ್ಟ್ ಹೌಸ್ ಕಟ್ಟಡ ಕಡಲಿನ ಅಂಚಿನಲ್ಲಿದ್ದು ಈಗಲೋ ಆಗಲೋ ಎನ್ನುವಂತಿತ್ತು. ಅದರ ಮಾಲಕ ಅಬ್ದುಲ್ಲ ಟಿ. ಎಂಬವರು ಕಟ್ಟಡದ ಬದಿಗೆ ಕಲ್ಲು, ಮರಳು ಮೂಟೆಗಳನ್ನ ಹಾಕಿ ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ತೀರ ಪ್ರದೇಶದ ಮೂಲನಿವಾಸಿಗಳ ಮನೆಗಳೇ ಕಡಲಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದರಿಂದ ಜಿಲ್ಲಾಡಳಿತದಿಂದ ಗೆಸ್ಟ್ ಹೌಸ್ ರಕ್ಷಣೆಗೆ ಕಾಮಗಾರಿ ಕೈಗೊಳ್ಳಲು ಸ್ಥಳೀಯರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದ ರೋಸಿ ಹೋಗಿದ್ದ ಗೆಸ್ಟ್ ಹೌಸ್ ಮಾಲಕ ಕಡಲ್ಕೊರೆತ ವೀಕ್ಷಣೆಗೆ ಬಂದಿದ್ದ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರಲ್ಲಿಯೂ ಅಳಲು ತೋಡಿಕೊಂಡಿದ್ದರು. ಉಳ್ಳಾಲ ತಾಲೂಕು ಕಚೇರಿಗೆ ಕಂಪ್ಯೂಟರ್, ಪೀಠೋಪಕರಣಗಳನ್ನ ನೀಡಿದ್ದರೂ ತಮ್ಮ ಗೆಸ್ಟ್ ಹೌಸನ್ನ ರಕ್ಷಿಸಲು ತಹಶೀಲ್ದಾರ್ ಬಿಡುತ್ತಿಲ್ಲ ಎಂದು ದೂರು ಹೇಳಿದ್ದರು. ಆದರೆ ಮಾಲಕರ ಶತ ಪ್ರಯತ್ನದ ನಡುವೆಯೂ ಕಡಲಿನ ಅಬ್ಬರ ಹೆಚ್ಚುತ್ತಲೇ ಇದ್ದು ಈಗ ಗೆಸ್ಟ್ ಹೌಸ್ ಕಟ್ಟಡದ ಭಾಗಶಃ ನೀರುಪಾಲಾಗಿದೆ. ಸಮುದ್ರರಾಜನ ರಕ್ಕಸ ಅಲೆಗಳು ನುಗ್ಗಿ ಬರುತ್ತಿದ್ದು ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ನುಂಗಿ ಹಾಕಲಿದೆ.
Guest house in Ullal finally due to soil erosion, administration negligence reason says owners.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 11:34 am
Mangalore Correspondent
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm