ಬ್ರೇಕಿಂಗ್ ನ್ಯೂಸ್
08-08-22 09:42 pm Mangalore Correspondent ಕರಾವಳಿ
ಉಳ್ಳಾಲ, ಆ.8 : ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದ್ದು ಕಡಲ ತೀರದಲ್ಲಿದ್ದ ಗೆಸ್ಟ್ ಹೌಸ್ ಕಟ್ಟಡವೊಂದು ಕಡೆಗೂ ಕಡಲು ಪಾಲಾಗಿದೆ.
ಈ ಬಾರಿಯ ಮಳೆಗಾಲ ಆರಂಭದಲ್ಲೇ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿತ್ತು. ಬೀಚ್ ರಸ್ತೆಯನ್ನೇ ಕಡಲು ನುಂಗಿ ಹಾಕಿದ್ದು ತೀರದಲ್ಲಿರುವ ಬಹುತೇಕ ಮನೆಗಳು, ಗೆಸ್ಟ್ ಹೌಸ್ ಗಳು ಅಪಾದಂಚಿನಲ್ಲಿದ್ದವು. ಆಬಳಿಕ ಬಟ್ಟಪ್ಪಾಡಿ ಪ್ರದೇಶಕ್ಕೆ ಕಡಲ್ಕೊರೆತ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರ ದಂಡೇ ಆಗಮಿಸಿತ್ತು.

ಬಟ್ಟಂಪಾಡಿಯಲ್ಲಿ "ವಿಟಮಿನ್ ಸಿ" ಎಂಬ ಹೆಸರಿನ ಅಕ್ರಮ ಗೆಸ್ಟ್ ಹೌಸ್ ಕಟ್ಟಡ ಕಡಲಿನ ಅಂಚಿನಲ್ಲಿದ್ದು ಈಗಲೋ ಆಗಲೋ ಎನ್ನುವಂತಿತ್ತು. ಅದರ ಮಾಲಕ ಅಬ್ದುಲ್ಲ ಟಿ. ಎಂಬವರು ಕಟ್ಟಡದ ಬದಿಗೆ ಕಲ್ಲು, ಮರಳು ಮೂಟೆಗಳನ್ನ ಹಾಕಿ ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ತೀರ ಪ್ರದೇಶದ ಮೂಲನಿವಾಸಿಗಳ ಮನೆಗಳೇ ಕಡಲಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದರಿಂದ ಜಿಲ್ಲಾಡಳಿತದಿಂದ ಗೆಸ್ಟ್ ಹೌಸ್ ರಕ್ಷಣೆಗೆ ಕಾಮಗಾರಿ ಕೈಗೊಳ್ಳಲು ಸ್ಥಳೀಯರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದ ರೋಸಿ ಹೋಗಿದ್ದ ಗೆಸ್ಟ್ ಹೌಸ್ ಮಾಲಕ ಕಡಲ್ಕೊರೆತ ವೀಕ್ಷಣೆಗೆ ಬಂದಿದ್ದ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರಲ್ಲಿಯೂ ಅಳಲು ತೋಡಿಕೊಂಡಿದ್ದರು. ಉಳ್ಳಾಲ ತಾಲೂಕು ಕಚೇರಿಗೆ ಕಂಪ್ಯೂಟರ್, ಪೀಠೋಪಕರಣಗಳನ್ನ ನೀಡಿದ್ದರೂ ತಮ್ಮ ಗೆಸ್ಟ್ ಹೌಸನ್ನ ರಕ್ಷಿಸಲು ತಹಶೀಲ್ದಾರ್ ಬಿಡುತ್ತಿಲ್ಲ ಎಂದು ದೂರು ಹೇಳಿದ್ದರು. ಆದರೆ ಮಾಲಕರ ಶತ ಪ್ರಯತ್ನದ ನಡುವೆಯೂ ಕಡಲಿನ ಅಬ್ಬರ ಹೆಚ್ಚುತ್ತಲೇ ಇದ್ದು ಈಗ ಗೆಸ್ಟ್ ಹೌಸ್ ಕಟ್ಟಡದ ಭಾಗಶಃ ನೀರುಪಾಲಾಗಿದೆ. ಸಮುದ್ರರಾಜನ ರಕ್ಕಸ ಅಲೆಗಳು ನುಗ್ಗಿ ಬರುತ್ತಿದ್ದು ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ನುಂಗಿ ಹಾಕಲಿದೆ.
Guest house in Ullal finally due to soil erosion, administration negligence reason says owners.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 04:39 pm
HK News Staffer
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm