ಬ್ರೇಕಿಂಗ್ ನ್ಯೂಸ್
05-08-22 10:40 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 5: ಹಳೆ ಪೇಪರ್, ಹಳೆ ಕಬ್ಬಿಣ ಅಂತ ಸಿನಿಮಾ ಪದ್ಯ ಕೇಳಿರಬಹುದು. ಹೌದು.. ಈಗ ಹಳೆ ಪೇಪರ್ ಅನ್ನೋದು ಬರೀಯ ಗುಜರಿ ಸರಕಲ್ಲ. ಅತ್ಯಂತ ಬೇಡಿಕೆಯ ವಸ್ತುವಾಗಿದೆ. ತುಂಡು ಪೇಪರನ್ನೂ ಒಟ್ಟು ಮಾಡಿ, ಗುಜರಿಗೆ ಕೊಟ್ಟರೆ ಕೈತುಂಬ ಗಳಿಸುವ ದಿನ ಬಂದಿದೆ. ವರ್ಷದ ಹಿಂದೆ ಕೇವಲ ಕೇಜಿಗೆ 12ರಿಂದ 14 ರೂಪಾಯಿ ಇದ್ದ ಹಳೆ ಪೇಪರ್ ರೇಟು ಒಂದೇ ವರ್ಷದಲ್ಲಿ ದುಪ್ಪಟ್ಟು ಆಗಿದೆ. ಹೀಗಾಗಿ ಮನೆಯಲ್ಲಿ ಅಲ್ಲಲ್ಲಿ ಬೀಸಾಕುತ್ತಿದ್ದ ಹಳೆ ಪತ್ರಿಕೆಯನ್ನೆಲ್ಲ ಜನರು ಜೋಪಾನ ಇಟ್ಟುಕೊಳ್ಳಲು ತೊಡಗಿದ್ದಾರೆ.
ವರ್ಷದ ಹಿಂದೆ ನ್ಯೂಸ್ ಪ್ರಿಂಟ್ ದರವು ಕೇಜಿಗೆ 35 ರೂಪಾಯಿ ಇತ್ತು. ಈಗ ಅದರ ರೇಟು ಕೇಜಿಗೆ 80ರಿಂದ 90 ರೂಪಾಯಿ ಆಗಿದೆ. ನ್ಯೂಸ್ ಪ್ರಿಂಟ್ ದರ ಹೆಚ್ಚಿರುವುದರಿಂದ ಸಹಜವಾಗೇ ಹಳೆ ಪತ್ರಿಕೆಗಳ ದರವೂ ಹೆಚ್ಚಿದೆ. ಇಲ್ಲಿ ರೇಟ್ ಏರುವುದಕ್ಕೂ ಯುಕ್ರೇನ್- ರಷ್ಯಾ ಯುದ್ಧಕ್ಕೂ ತಾಳೆಯಿದೆ. ಅಲ್ಲಿನ ಯುದ್ಧದ ಕಾರಣ ಚೀನಾದಿಂದ ಬರುತ್ತಿದ್ದ ನ್ಯೂಸ್ ಪ್ರಿಂಟ್ ಕಡಿತಗೊಂಡಿದೆ. ಹೀಗಾಗಿ ಪೇಪರ್ ಮಿಲ್ ಗಳು ನ್ಯೂಸ್ ಪ್ರಿಂಟ್ ದರವನ್ನೂ ಒಮ್ಮೆಲೇ ಏರಿಸಿದೆ. ಇದರಿಂದಾಗಿ ಹಳೆ ಪತ್ರಿಕೆಯ ದರವೂ ಏರತೊಡಗಿದೆ.
ಗುಜರಿ ವ್ಯಾಪಾರಿಗಳು ಮನೆಗಳಿಂದ ಕೇಜಿಗೆ 25-26 ರೂಪಾಯಿ ಕೊಟ್ಟು ಖರೀದಿಸುವ ಹಳೆ ಪತ್ರಿಕೆಯನ್ನು ಎರಡು ರೂ. ಹೆಚ್ಚಿಗೆ ದರ ಪಡೆದು ನೇರವಾಗಿ ಪೇಪರ್ ಮಿಲ್ ಗಳಿಗೆ ಸಪ್ಲೈ ಮಾಡುತ್ತಾರೆ. ಮಿಲ್ ಗಳಲ್ಲಿ ಅದನ್ನು ರಿ ಸೈಕಲ್ ಮಾಡಿ, ಮತ್ತೆ ನ್ಯೂಸ್ ಪ್ರಿಂಟ್ ಆಗಿಸಿ ಕೇಜಿಗೆ 60 ರೂ.ಗೆ ಮಾರುತ್ತಾರೆ. ಹಳೆ ಪತ್ರಿಕೆ, ಹಳೆ ನೋಟ್ ಬುಕ್ಸ್ ಇವೆಲ್ಲದಕ್ಕೂ ಈಗ ಭಾರೀ ಡಿಮ್ಯಾಂಡ್ ಆಗಿದೆ. ಹಿಂದೆಲ್ಲಾ ಇಂಗ್ಲಿಷ್ ಹಳೆ ಪತ್ರಿಕೆಗಳಿಗೆ ಹೆಚ್ಚು ರೇಟ್ ಇತ್ತು. ಈಗ ಕನ್ನಡ- ಇಂಗ್ಲಿಷ್ ಎಲ್ಲ ಪತ್ರಿಕೆ, ಪುಸ್ತಕಕ್ಕೂ ಒಂದೇ ರೇಟಲ್ಲಿ ಗುಜರಿ ವ್ಯಾಪಾರಿಗಳು ಖರೀದಿಸುತ್ತಾರೆ. ಒಟ್ನಲ್ಲಿ ಯುಕ್ರೇನಲ್ಲಿ ಯುದ್ಧ ಆಗಿರುವುದು ಗುಜರಿ ಪತ್ರಿಕೆಗಳಿಗೆ ಡಿಮ್ಯಾಂಡ್ ಆಗುವಂತಾಗಿದೆ.
The demand for old newspapers and scrap paper has risen in the market. While old newspapers are being bought at up to Rs 26 a kilo, the price is likely to go up further. Last year, old newspapers were bought at Rs 12 to 15 a kilo which has now doubled. While households are carefully staking up old newspapers at home, scrap vendors have become equally careful in keeping the scrap paper intact.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 04:39 pm
HK News Staffer
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm