ಬ್ರೇಕಿಂಗ್ ನ್ಯೂಸ್
03-08-22 10:37 pm Mangalore Correspondent ಕರಾವಳಿ
ಪುತ್ತೂರು, ಆಗಸ್ಟ್ 3: ಕೋಮು ಸಾಮರಸ್ಯ ಕದಡಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸಾಮರಸ್ಯ ಸಾರುವ ವಿಡಿಯೋ ವೈರಲ್ ಆಗಿದೆ. ಮುಸ್ಲಿಂ ಯುವಕನೊಬ್ಬ ಆಯತಪ್ಪಿ ಹೊಳೆಗೆ ಬಿದ್ದು ರಕ್ಷಣೆಗಾಗಿ ಕೂಗಿಕೊಂಡರೆ, ಹಿಂದು ಯುವಕನೊಬ್ಬ ಹೊಳೆಗೆ ಹಾರಿ ಮುಸ್ಲಿಂ ಯುವಕನನ್ನು ರಕ್ಷಣೆ ಮಾಡಿ ಮಾನವೀಯ ಧರ್ಮವನ್ನು ಎತ್ತಿಹಿಡಿದಿದ್ದಾನೆ.
ಹತ್ತು ದಿನಗಳಲ್ಲಿ ಮೂವರು ಯುವಕರ ಹತ್ಯೆಯಾಗಿ ಬಿಸಿಯೇರಿದ್ದ ಕರಾವಳಿಯಲ್ಲಿ ಮಾನವೀಯತೆ ಸಾರುವ ಘಟನೆಯಿದು. ಸುಬ್ರಹ್ಮಣ್ಯ ಬಳಿಯ ಹರಿಹರ ಪಳ್ಳತ್ತಡ್ಕದಲ್ಲಿ ಭಾರೀ ಮಳೆಯಿಂದಾಗಿ ಸೇತುವೆಗಳು ಮರದ ದಿಮ್ಮಿಗಳಿಂದಾಗಿ ಬ್ಲಾಕ್ ಆಗಿತ್ತು. ಸೇತುವೆಯ ಮೇಲೂ ಬೃಹತ್ ಮರದ ದಿಮ್ಮಿಗಳು ಬಂದು ಬಿದ್ದಿದ್ದವು. ಅದನ್ನು ತೆರವುಗೊಳಿಸಲು ಕ್ರೇನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಇದೇ ವೇಳೆ, ಕ್ರೇನ್ ಆಪರೇಟರ್ ಶರೀಫ್ ಆಯತಪ್ಪಿ ಹೊಳೆಗೆ ಬಿದ್ದಿದ್ದು ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ.


ಶರೀಫ್ ಅವರು ಸ್ಥೂಲ ಕಾಯದ ವ್ಯಕ್ತಿಯಾಗಿದ್ದರಿಂದ ಮತ್ತು ಹೊಳೆ ತುಂಬಿ ಹರಿಯುತ್ತಿದ್ದ ಕಾರಣ ಈಜಲು ಆಗಿರಲಿಲ್ಲ. ರಕ್ಷಣೆಗಾಗಿ ಕೂಗಿದ ಬೆನ್ನಲ್ಲೇ ಅಲ್ಲಿದ್ದ ಸೋಮಶೇಖರ್ ಎಂಬ ಯುವಕನೊಬ್ಬ ಹೊಳೆಗೆ ಹಾರಿ, ಶರೀಫ್ ಜೀವ ರಕ್ಷಣೆಗೆ ಮುಂದಾಗಿದ್ದಾನೆ. ನೀರಿನಲ್ಲಿ ಮುಳುಗದಂತೆ ನೋಡಿಕೊಂಡಿದ್ದಲ್ಲದೆ, ಕೆಲಹೊತ್ತಿನಲ್ಲಿ ಸಾರ್ವಜನಿಕರು ನೀಡಿದ ಹಗ್ಗದ ಮೂಲಕ ಜೀವ ಉಳಿಸಲು ನೆರವಾಗಿದ್ದಾನೆ. ಬಳಿಕ ಜೆಸಿಬಿ ಬಳಸಿ ಶರೀಫ್ ನನ್ನು ಸಾರ್ವಜನಿಕರು ಮೇಲೆತ್ತಿದ್ದಾರೆ. ಹಿಂದು- ಮುಸ್ಲಿಂ ಹೆಸರಲ್ಲಿ ಕೋಮು ದ್ವೇಷ ಹರಡಿರುವಾಗಲೇ ಮುಸ್ಲಿಂ ಯುವಕನ ಜೀವ ಉಳಿಸಲು ತನ್ನ ಪ್ರಾಣದ ಹಂಗು ತೊರೆದು ಹೊಳೆಗೆ ಹಾರಿದ ಯುವಕ ಮಾನವೀಯತೆಯೇ ಶ್ರೇಷ್ಠ ಎನ್ನುವುದನ್ನು ಸಾರಿದ್ದು ನಾಡಿನ ಗಮನ ಸೆಳೆದಿದೆ.


ಭಾರೀ ಮಳೆಯ ಕಾರಣ ಸುಬ್ರಹ್ಮಣ್ಯಕ್ಕೆ ಭೇಟಿಯಿತ್ತ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಯುವಕ ಸೋಮಶೇಖರ್ ಕೆಲಸದ ಬಗ್ಗೆ ತಿಳಿದು ಬೆನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Puttur Amid tension in Mangalore two communities share harmony by helping a crane driver who fell into lake. A Muslim crane driver who fell into the lake accidently was helped by a Hindu boy who jumped into the lake risked his life by showing harmony amid communal fights in Dakshina Kannada.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 12:31 pm
Bengaluru staffer
MLA Vedavyas Kamath, Mangalore: ಶಾಸಕ ವೇದವ್ಯಾಸ...
07-02-26 11:47 am
ಅಕ್ರಮ ಸಂಬಂಧವೇ ರಕ್ತಪಾತಕ್ಕೆ ಕಾರಣ.. ನನ್ನ ಹತ್ಯೆಗೆ...
06-02-26 06:36 pm
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm