ಬ್ರೇಕಿಂಗ್ ನ್ಯೂಸ್
27-07-22 09:34 pm Mangalore Correspondent ಕರಾವಳಿ
ಸುಳ್ಯ, ಜುಲೈ 27: ಬೇರೆಲ್ಲ ನಾಯಕರು ಹೆದರಿ ಓಡಿದರು. ಹರೀಶ್ ಪೂಂಜ ಮಾತ್ರ ಕೊನೆಯ ವರೆಗೆ ನಿಂತಿದ್ದು. ಈಗ ಯಾಕೆ ನೀವು ಬಂದಿದ್ದು ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರನ್ನು ಬಿಜೆಪಿ ಕಾರ್ಯಕರ್ತರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಸಂಜೆ ವೇಳೆಗೆ ಬಂದ ಸಚಿವ ಅಂಗಾರ ಮತ್ತು ಮಂಗಳೂರಿನ ಮೇಯರ್ ಪ್ರೇಮಾನಂದ ಶೆಟ್ಟಿ ಅವರನ್ನು ಕಾರ್ಯಕರ್ತರು ತರಾಟೆ ಮಾಡಿದ್ದಾರೆ.
ಅವರನ್ನೆಲ್ಲ ನಾವು ಓಟು ಕೊಟ್ಟು ಗೆಲ್ಲಿಸಿದ್ದು ಯಾಕೆ. ಅವರೆಲ್ಲ ಅರ್ಧದಲ್ಲಿ ಓಡಿದ್ರಲ್ಲ. ಅವರಿಗೆ ನಾಚಿಕೆ ಆಗೋದಿಲ್ವೇ.. ಇವತ್ತು ಕಠಿಣ ಕ್ರಮ ಅಂತ ಹೇಳ್ತಾರೆ. ನಾಳೆ ಮತ್ತೆ ಹೆಣ ಬೀಳುತ್ತದೆ. ಬಿಜೆಪಿ ಸರಕಾರ ಬಂದರೂ, ಹೆಣ ಬೀಳೋದು ಅಂದ್ರೆ ನಾವು ಯಾರನ್ನು ನಂಬಬೇಕು. ನಾಯಕರೆಲ್ಲ ಬಂದರೂ, ಅರ್ಧದಲ್ಲಿಯೇ ಓಡಿದ್ರಲ್ಲ ಎಂದು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ.

ಅಲ್ಲಿನ ಪರಿಸ್ಥಿತಿ ಸರಿ ಇರಲಿಲ್ಲ ಅಲ್ವೇ ಎಂದು ಅಂಗಾರ ಹೇಳಿದ್ದಕ್ಕೆ, ಏನು ಪರಿಸ್ಥಿತಿರೀ.. ನಿನ್ನೆ ರಾತ್ರಿ ಬರಲು ಆಗಿಲ್ಲ. ರಾತ್ರಿಯಾದರೂ, ನಿಮ್ಮ ಸಚಿವನಿಗೆ ಬರಲು ಆಗಿಲ್ಲ ಅಲ್ವೇ.. ಮೊನ್ನೆ ಹರ್ಷನ ಕೊಲೆ ಆಗಿದೆ. ನಾವು ಸಾಮಾನ್ಯ ಕಾರ್ಯಕರ್ತರು. ನಾವು ಓಟು ಕೊಟ್ಟು ಗೆಲ್ಲಿಸಿದ್ದು. ನಾವು ಚುನಾವಣೆಗೆ ಕೆಲಸ ಮಾಡೋದು. ನಿಮ್ಮ ನಾಯಕರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಪ್ರಶ್ನೆಗಳಿಗೆ ಅಂಗಾರ ಮೂಕ ಪ್ರೇಕ್ಷಕನಾಗಿದ್ದರು. ಹಗಲಲ್ಲಿ ಬೆಳ್ಳಾರೆ ಪೇಟೆಯಲ್ಲಿ ಗಲಾಟೆ ಆಗುತ್ತಿದ್ದ ಸಂದರ್ಭದಲ್ಲಿಯೂ ಅಂಗಾರ ಸ್ಥಳಕ್ಕೆ ಬಂದಿರಲಿಲ್ಲ. ಆ ಕುರಿತ ಸಿಟ್ಟನ್ನೂ ಕಾರ್ಯಕರ್ತರು ಹೊರ ಹಾಕಿದ್ರು.
Bellare murder, Minister Anagara slammed by Praveen family. Minister Angara who visited praveens family was slammed left and right.
12-04-26 07:58 pm
HK News Staffer
ಪಿಯುಸಿ ಫಸ್ಟ್ ಕ್ಲಾಸ್ ಪಾಸಾದ ಜೀವಾವಧಿ ಶಿಕ್ಷೆಗೀಡಾದ...
10-04-26 06:53 pm
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
11-04-26 09:05 pm
Giridhar Shetty
ಚಂದ್ರನ ಸುತ್ತಿ ಮರಳಿದ ನಾಸಾದ ಗಗನಯಾತ್ರಿಗಳು ; ಸುರಕ...
11-04-26 12:44 pm
ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿ...
10-04-26 11:05 pm
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
11-04-26 05:05 pm
Mangalore Correspondent
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
11-04-26 11:14 pm
HK News Desk
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm