ಬ್ರೇಕಿಂಗ್ ನ್ಯೂಸ್
27-07-22 09:34 pm Mangalore Correspondent ಕರಾವಳಿ
ಸುಳ್ಯ, ಜುಲೈ 27: ಬೇರೆಲ್ಲ ನಾಯಕರು ಹೆದರಿ ಓಡಿದರು. ಹರೀಶ್ ಪೂಂಜ ಮಾತ್ರ ಕೊನೆಯ ವರೆಗೆ ನಿಂತಿದ್ದು. ಈಗ ಯಾಕೆ ನೀವು ಬಂದಿದ್ದು ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರನ್ನು ಬಿಜೆಪಿ ಕಾರ್ಯಕರ್ತರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಸಂಜೆ ವೇಳೆಗೆ ಬಂದ ಸಚಿವ ಅಂಗಾರ ಮತ್ತು ಮಂಗಳೂರಿನ ಮೇಯರ್ ಪ್ರೇಮಾನಂದ ಶೆಟ್ಟಿ ಅವರನ್ನು ಕಾರ್ಯಕರ್ತರು ತರಾಟೆ ಮಾಡಿದ್ದಾರೆ.
ಅವರನ್ನೆಲ್ಲ ನಾವು ಓಟು ಕೊಟ್ಟು ಗೆಲ್ಲಿಸಿದ್ದು ಯಾಕೆ. ಅವರೆಲ್ಲ ಅರ್ಧದಲ್ಲಿ ಓಡಿದ್ರಲ್ಲ. ಅವರಿಗೆ ನಾಚಿಕೆ ಆಗೋದಿಲ್ವೇ.. ಇವತ್ತು ಕಠಿಣ ಕ್ರಮ ಅಂತ ಹೇಳ್ತಾರೆ. ನಾಳೆ ಮತ್ತೆ ಹೆಣ ಬೀಳುತ್ತದೆ. ಬಿಜೆಪಿ ಸರಕಾರ ಬಂದರೂ, ಹೆಣ ಬೀಳೋದು ಅಂದ್ರೆ ನಾವು ಯಾರನ್ನು ನಂಬಬೇಕು. ನಾಯಕರೆಲ್ಲ ಬಂದರೂ, ಅರ್ಧದಲ್ಲಿಯೇ ಓಡಿದ್ರಲ್ಲ ಎಂದು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ.

ಅಲ್ಲಿನ ಪರಿಸ್ಥಿತಿ ಸರಿ ಇರಲಿಲ್ಲ ಅಲ್ವೇ ಎಂದು ಅಂಗಾರ ಹೇಳಿದ್ದಕ್ಕೆ, ಏನು ಪರಿಸ್ಥಿತಿರೀ.. ನಿನ್ನೆ ರಾತ್ರಿ ಬರಲು ಆಗಿಲ್ಲ. ರಾತ್ರಿಯಾದರೂ, ನಿಮ್ಮ ಸಚಿವನಿಗೆ ಬರಲು ಆಗಿಲ್ಲ ಅಲ್ವೇ.. ಮೊನ್ನೆ ಹರ್ಷನ ಕೊಲೆ ಆಗಿದೆ. ನಾವು ಸಾಮಾನ್ಯ ಕಾರ್ಯಕರ್ತರು. ನಾವು ಓಟು ಕೊಟ್ಟು ಗೆಲ್ಲಿಸಿದ್ದು. ನಾವು ಚುನಾವಣೆಗೆ ಕೆಲಸ ಮಾಡೋದು. ನಿಮ್ಮ ನಾಯಕರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಪ್ರಶ್ನೆಗಳಿಗೆ ಅಂಗಾರ ಮೂಕ ಪ್ರೇಕ್ಷಕನಾಗಿದ್ದರು. ಹಗಲಲ್ಲಿ ಬೆಳ್ಳಾರೆ ಪೇಟೆಯಲ್ಲಿ ಗಲಾಟೆ ಆಗುತ್ತಿದ್ದ ಸಂದರ್ಭದಲ್ಲಿಯೂ ಅಂಗಾರ ಸ್ಥಳಕ್ಕೆ ಬಂದಿರಲಿಲ್ಲ. ಆ ಕುರಿತ ಸಿಟ್ಟನ್ನೂ ಕಾರ್ಯಕರ್ತರು ಹೊರ ಹಾಕಿದ್ರು.
Bellare murder, Minister Anagara slammed by Praveen family. Minister Angara who visited praveens family was slammed left and right.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am