ಬ್ರೇಕಿಂಗ್ ನ್ಯೂಸ್
26-07-22 02:50 pm Mangalore Correspondent ಕರಾವಳಿ
ಮಂಗಳೂರು, ಜುಲೈ 26: ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆಯನ್ನು ಮೀನುಗಾರಿಕೆ ಬಗ್ಗೆ ಏನೂ ತಿಳಿಯದ ಸುಳ್ಯದ ಗೌಡ ಸಮುದಾಯದ ವ್ಯಕ್ತಿಗೆ ನೀಡಿರುವುದಕ್ಕೆ ಕರಾವಳಿಯಲ್ಲಿ ಬಿಜೆಪಿ ಒಳಗಡೆಯೇ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಮೊಗವೀರ ಸಮುದಾಯದ ಮುಖಂಡರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಮೀನುಗಾರಿಕಾ ಇಲಾಖೆಯ ಸಚಿವ ಎಸ್.ಅಂಗಾರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪ್ರಕೋಷ್ಠದಲ್ಲಿ ಗುರುತಿಸಿರುವ ನವೀನ್ ಸುವರ್ಣ ಎಂಬವರು ನಿನ್ನೆ ರಾತ್ರಿಯೇ ಸಚಿವ ಅಂಗಾರ ಅವರಿಗೆ ಫೋನ್ ಮಾಡಿ ತರಾಟೆಗೆತ್ತಿಕೊಂಡಿದ್ದಾರೆ. ಯಾವುದೇ ಸರಕಾರ ಬಂದರೂ, ಮೀನುಗಾರಿಕಾ ನಿಗಮವನ್ನು ಆಯಾ ಸಮುದಾಯವರಿಗೇ ನೀಡುತ್ತಿದ್ದರು. ಈ ಬಾರಿ ನೀವು ಸುಳ್ಯದ ಗೌಡ ಸಮುದಾಯಕ್ಕೆ ನೀಡಿದ್ದೀರಿ. ಮೀನುಗಾರರ ಬಗ್ಗೆ ಏನೂ ತಿಳಿಯದ ವ್ಯಕ್ತಿಗೆ ಯಾಕೆ ನೀಡಿದ್ದೀರಿ. ನಮ್ಮ ಸಮುದಾಯದಲ್ಲಿ ಪಾರ್ಟಿಗೆ ಕೆಲಸ ಮಾಡಿದವರು ಯಾರೂ ಸಿಕ್ಕಿಲ್ಲವೇ ಎಂದು ಅಂಗಾರ ಅವರನ್ನು ಪ್ರಶ್ನೆ ಮಾಡಿದ್ದಾರೆ.


ಅಂಗಾರ ಅವರು, ತನಗೇನು ಗೊತ್ತಿಲ್ಲ. ನೀವು ರಾಜ್ಯಾಧ್ಯಕ್ಷರಿಗೆ ಕೇಳಿ ಎಂದು ಹೇಳಿ ನುಣುಚಿಕೊಂಡಿದ್ದಾರೆ. ನಾವು ಕೇಳುತ್ತೇವೆ, ಅವರಲ್ಲೂ ಕೇಳುತ್ತೇವೆ. ನೀವು ಮೀನುಗಾರಿಕಾ ಸಚಿವರಿದ್ದೀರಲ್ಲ. ನಿಮಗೆ ತಿಳಿದಿಲ್ಲವೇ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ನನಗೇನು ತಿಳಿದಿಲ್ಲ ಎಂದು ಅಂಗಾರ ಉತ್ತರಿಸಿದ್ದಾರೆ. ಸುಳ್ಯದ ತೀರ್ಥರಾಮ ಎಂಬವರಿಗೆ ನಿಗಮದ ಅಧ್ಯಕ್ಷ ಹುದ್ದೆಗೆ ನೇಮಕ ಆಗಿದೆ. ಮೀನುಗಾರ ಸಮುದಾಯದ ಮೊಗವೀರ ಆಗಬಹುದು. ಇತರೇ ಖಾರ್ವಿ, ಬೋವಿ ಯಾರಿಗಾದ್ರೂ ಕೊಡಬಹುದಿತ್ತು. ಮೀನುಗಾರರ ಪೈಕಿ 39 ಜಾತಿಗಳವರಿದ್ದಾರೆ. ಮೂರು ಜಿಲ್ಲೆಗಳಲ್ಲಿ ಮೀನುಗಾರ ವೃತ್ತಿಯನ್ನು ಮಾಡಿಕೊಂಡಿರುವ ಬಹಳಷ್ಟು ಮಂದಿ ಬಿಜೆಪಿಯಲ್ಲಿದ್ದಾರೆ. ಯಾಕಾಗಿ ಈ ತಾರತಮ್ಯ ಮಾಡಿದ್ದೀರಿ. ಈ ಬಗ್ಗೆ ನಾವು ಪ್ರಶ್ನೆ ಮಾಡುತ್ತೇವೆ. ನೀವು ಕೂಡಲೇ ಇದನ್ನು ಸರಿ ಮಾಡಬೇಕು ಎಂದು ನವೀನ್ ಸುವರ್ಣ, ಅಂಗಾರರಿಗೆ ಫೋನ್ ಮಾಡಿ ಒತ್ತಾಯಿಸಿರುವ ಆಡಿಯೋ ವೈರಲ್ ಆಗಿದೆ.

ಇದೇ ವೇಳೆ, ಕರಾವಳಿಯ ಮೀನುಗಾರ ಸಮುದಾಯದ ಮುಖಂಡರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೂ ಫೋನ್ ಮಾಡಿ ಆಕ್ಷೇಪ ಹೇಳಿದ್ದಾರೆ. ಅಲ್ಲದೆ, ಉತ್ತರ ಕರ್ನಾಟಕದ ಗಂಗಾ ಮತಸ್ಥರು ಬೆಂಗಳೂರಿನಲ್ಲಿ ಪ್ರೆಸ್ ಕರೆದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ನಿಗಮದ ಅಧ್ಯಕ್ಷರ ಬದಲಾವಣೆ ಮಾಡದೇ ಇದ್ದರೆ, ನಾವು ಕೂಡ ಪ್ರತಿಕೂಲ ನಡೆಯನ್ನು ತೆಗೆದುಕೊಳ್ಳುತ್ತೇವೆ. ನಾಳೆಯೇ ಮಾಧ್ಯಮದ ಮುಂದೆ ಬಂದು ಆಕ್ಷೇಪ ಹೇಳಿಕೊಳ್ಳುತ್ತೇವೆ ಎಂದು ಮಂಗಳೂರಿನ ಮೊಗವೀರ ಮುಖಂಡರು ಹೇಳಿದ್ದಾರೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರ ವೃತ್ತಿಯನ್ನು ಮಾಡಿಕೊಂಡಿರುವ ಹಲವು ಸಮುದಾಯಗಳಿವೆ. ಈ ಪೈಕಿ ಹೆಚ್ಚಿನ ಮೀನುಗಾರ ಮುಖಂಡರು ಬಿಜೆಪಿಯಲ್ಲಿ ಗುರುತಿಸಿದ್ದಾರೆ. ಆದರೆ, ನಮಗೆ ಶಾಸಕ ಸ್ಥಾನ ಕೊಡುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ಈ ಬಾರಿ ಬಿಜೆಪಿಯಲ್ಲಿ ಬಂಟರಿಗೇ ಹೆಚ್ಚಿನ ಸ್ಥಾನ ಹೊಂದಿದ್ದಾರೆ. ಯಾಕೆ ನಮ್ಮ ಬಗ್ಗೆ ತಾರತಮ್ಯ. ಮೀನುಗಾರಿಕಾ ನಿಗಮ ಒಂದು ಇತ್ತು. ಅದಕ್ಕೂ ಈ ಬಾರಿ ಕಲ್ಲು ಹಾಕಿದ್ದಾರೆ. ಮೀನುಗಾರಿಕೆ ಮಾಹಿತಿಯೇ ಇಲ್ಲದ ಯಾರೋ ಒಬ್ಬರನ್ನು ತಂದು ಕೂರಿಸಿದ್ದಾರೆ ಎಂದು ಮೀನುಗಾರರು ಆಕ್ಷೇಪ ಎತ್ತಿದ್ದಾರೆ.
Mogaveera communtiy slams Minister Angara for giving fisheries board post to Gowda society, phone call goes viral.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm