ಬ್ರೇಕಿಂಗ್ ನ್ಯೂಸ್
15-07-22 10:13 pm Mangalore Correspondent ಕರಾವಳಿ
ಮಂಗಳೂರು, ಜುಲೈ 15: ಮಳಲಿ ಮಸೀದಿ ಜಟಾಪಟಿ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿಶ್ವ ಹಿಂದು ಪರಿಷತ್ತಿಗೆ ಹಿನ್ನಡೆಯಾಗಿದೆ. ವಿಎಚ್ ಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ಕೆಳಗಿನ ಕೋರ್ಟಿನಲ್ಲಿಯೇ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶ ಮಾಡಿದೆ.
ಇತ್ತೀಚೆಗೆ ಮಳಲಿ ಮಸೀದಿ ವಿಚಾರದಲ್ಲಿ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ವಿಎಚ್ ಪಿ ಪರ ವಕೀಲರು, ಪ್ರಕರಣದಲ್ಲಿ ಮಸೀದಿ ಸರ್ವೇ ನಡೆಸಲು ಕೋರ್ಟ್ ಕಮಿಷನ್ ನೇಮಕ ಮಾಡಬೇಕು. ಕೆಳಗಿನ ಕೋರ್ಟ್ ಮಧ್ಯಂತರ ತೀರ್ಪು ನೀಡಲು ಅವಕಾಶ ನೀಡಬಾರದು ಎಂದು ಕೇಳಿಕೊಂಡಿದ್ದರು. ಹಾಗಾಗಿ ಮಂಗಳೂರು ಕೋರ್ಟಿನಲ್ಲಿ ಯಾವುದೇ ರೀತಿಯ ಮಧ್ಯಂತರ ಆದೇಶ ನೀಡದಂತೆ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿತ್ತು.

ಈ ಬಗ್ಗೆ ಮಸೀದಿ ಕಮಿಟಿ ಪರ ವಕೀಲರು ಹೈಕೋರ್ಟಿನಲ್ಲಿ ಪ್ರತಿ ವಾದ ಸಲ್ಲಿಸಿದ್ದು, ಕೆಳಗಿನ ನ್ಯಾಯಾಲಯಕ್ಕೆ ಆದೇಶ ನೀಡಬಾರದೆಂದು ತಡೆ ವಿಧಿಸಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದಾರೆ. ಅಲ್ಲದೆ, ಕೆಳಗಿನ ನ್ಯಾಯಾಲಯದಲ್ಲಿ ವಾದ ನಡೆಯುತ್ತಿರುವ ಸಂದರ್ಭದಲ್ಲಿಯೇ ಹೈಕೋರ್ಟಿಗೆ ಅರ್ಜಿ ಸಲ್ಲಿಸಿರುವ ಔಚಿತ್ಯವನ್ನೂ ಪ್ರಶ್ನಿಸಿದ್ದಾರೆ. ವಾದ ಆಲಿಸಿದ ಹೈಕೋರ್ಟ್, ವಿಎಚ್ ಪಿ ಪರ ಅರ್ಜಿಯನ್ನು ವಜಾ ಮಾಡಿದ್ದು ಕೆಳಗಿನ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ. ಹೀಗಾಗಿ ಮಳಲಿ ಮಸೀದಿ ವಿವಾದದ ಚೆಂಡು ಮತ್ತೆ ಮಂಗಳೂರು ನ್ಯಾಯಾಲಯಕ್ಕೆ ಬಂದಿದೆ.

ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಈಗಾಗಲೇ ಮಸೀದಿ ಕಮಿಟಿ ಮತ್ತು ವಿಎಚ್ ಪಿ ಪರವಾಗಿ ಎಂಟಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಮಸೀದಿ ನವೀಕರಣಕ್ಕೆ ತಡೆ ಕೇಳಿ ವಿಎಚ್ ಪಿ ಕಡೆಯಿಂದ ಸಲ್ಲಿಸಿದ್ದ ಅರ್ಜಿ ಮೊದಲಿನದಾಗಿದ್ದು, ಅದನ್ನು ತೆರವು ಮಾಡುವಂತೆ ಮಸೀದಿ ಕಮಿಟಿ ಪರ ಹಿರಿಯ ವಕೀಲ ಎಂ.ಪಿ.ಶೆಣೈ ವಾದ ಮಂಡಿಸಿದ್ದರು. ಆನಂತರ, ಗ್ಯಾನವಾಪಿ ಮಸೀದಿ ಮಾದರಿಯಲ್ಲಿ ಕೋರ್ಟ್ ಕಮಿಷನ್ ನೇಮಕ ಮಾಡಬೇಕೆಂದು ವಿಎಚ್ ಪಿ ಕಡೆಯಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಿತ್ತು. ನವೀಕರಣ ಕಾಮಗಾರಿಗೆ ವಿಧಿಸಿರುವ ತಡೆಯಾಜ್ಞೆ ತೆರವುಗೊಳಿಸುವ ಅರ್ಜಿಯನ್ನು ಮೊದಲು ಇತ್ಯರ್ಥ ಪಡಿಸಬೇಕೆಂದು ಮಸೀದಿ ಕಮಿಟಿ ಆಗ್ರಹ ಮಾಡಿದ್ದರೆ, ವಿಎಚ್ ಪಿ ಪರ ವಕೀಲರು ಕೋರ್ಟ್ ಕಮಿಷನ್ ನೇಮಕ ಮಾಡಲೇಬೇಕು. ಅದನ್ನು ಹೊರತುಪಡಿಸಿ ಕಾಮಗಾರಿಗೆ ತಡೆಯಾಜ್ಞೆ ನೀಡಿರುವುದನ್ನು ತೆರವು ಮಾಡಬಾರದು ಎಂದು ವಾದಿಸಿದ್ದರು.
ಇವೆರಡೂ ವಿಚಾರದಲ್ಲಿ ಮಂಗಳೂರಿನ ಕೋರ್ಟಿನಲ್ಲಿ ಒಂದೂವರೆ ತಿಂಗಳ ಕಾಲ ವಾದ - ಪ್ರತಿವಾದ ನಡೆದಿದ್ದು ಯಾವ ಅರ್ಜಿಯನ್ನು ಮೊದಲು ಪರಿಗಣಿಸಬೇಕು ಎಂಬ ಬಗ್ಗೆ ತೀರ್ಪು ನೀಡುವುದಕ್ಕೆ ಬಾಕಿಯಿತ್ತು. ಈಗ ಒಟ್ಟು ವಿವಾದ ಮತ್ತೆ ಮಂಗಳೂರಿನ ಕೋರ್ಟ್ ಅಂಗಳಕ್ಕೆ ಬಂದಿದ್ದು ಮತ್ತೆ ಕುತೂಹಲ ಗರಿಗೆದರಿದೆ.
The Karnataka High Court on Friday rejected a petition filed questioning the decision of the Additional City Civil court in Mangalore to first decide on the aspect of maintainability of the suit for permanent injunction, seeking to restrain the Malali Jumma Masjid authorities from dismantling the old tiled-structure of masjid said to be resembling a temple, before deciding on the application for appointment of a court commissioner to survey the masjid.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm