ಬ್ರೇಕಿಂಗ್ ನ್ಯೂಸ್
09-07-22 10:26 pm Mangalore Correspondent ಕರಾವಳಿ
ಉಳ್ಳಾಲ, ಜು.9 : ಐಟಿಐ ಕಲಿಯಬೇಕಿದ್ದ ಮಗ, ಏಳನೇ ತರಗತಿಯಲ್ಲಿ ಓದಬೇಕಿದ್ದ ಮಗಳು. ಇಬ್ಬರು ಮಕ್ಕಳೂ ಕಿಡ್ನಿ ವೈಫಲ್ಯಗೊಂಡು ಆಸ್ಪತ್ರೆಯ ಐಸಿಯು ಘಟಕದಲ್ಲಿ ನರಳುತ್ತಿರುವುದನ್ನ ನೋಡುವ ಹೆತ್ತ ತಾಯಿಯ ನೋವು ದೇವರಿಗೇ ಪ್ರೀತಿ ಎಂಬಂತಿದೆ.
ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಐಸಿಯು ಘಟಕದಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಬ್ಬರ ಅಶಕ್ತ ತಾಯಿಯೊಬ್ಬಳ ಕರುಣಾಜನಕ ಕಥೆ ಇದು. ಅಮಿತ ಮತ್ತು ಶೇಖರ್ ದಂಪತಿಯ ಪ್ರಥಮ ಪುತ್ರ ಅಭಿಷೇಕ್(16) ಕಳೆದ ವರುಷ ಎಸ್ಎಸ್ಎಲ್ ಸಿ ಮುಗಿಸಿ ವಿಟ್ಲದ ಕಾಲೇಜೊಂದರಲ್ಲಿ ITI ಸೇರಿದ್ದು ತರಗತಿಗೆ ತೆರಳಿದ್ದ ಮರು ದಿವಸವೇ ಆತನಿಗೆ ಜ್ವರ ಕಾಣಿಸಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ರಕ್ತಹೀನತೆ ಇದ್ದು ಕಿಡ್ನಿ ವೈಫಲ್ಯ ಆದ ಬಗ್ಗೆ ವೈದ್ಯರು ತಿಳಿಸಿದ್ದರು. ಕೂಡಲೇ ಆತನಿಗೆ ಡಯಾಲಿಸಿಸ್ ಚಿಕಿತ್ಸೆ ಆರಂಭಿಸಲಾಗಿತ್ತು. ಕಳೆದ ಎಂಟು ತಿಂಗಳಿಂದ ಅಭಿಷೇಕ್ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು ಹಾಸಿಗೆ ಹಿಡಿದಿದ್ದಾನೆ.
ನಾಲ್ಕು ತಿಂಗಳ ಹಿಂದಷ್ಟೆ ಆರನೇ ತರಗತಿ ಮುಗಿಸಿದ್ದ ಅಮಿತ ಅವರ ಎರಡನೇ ಮಗಳು ಐಶ್ವರ್ಯಳಿಗೂ ಜ್ವರ ಬಂದಿದ್ದು ತಪಾಸಣೆ ನಡೆಸಿದ ವೈದ್ಯರು ರಕ್ತಹೀನತೆಯಿಂದಾಗಿ ಆಕೆಯ ಕಿಡ್ನಿಯೂ ವೈಫಲ್ಯಗೊಂಡಿರುವ ಬಗ್ಗೆ ತಿಳಿಸಿದ್ದರು. ಅಮಿತ ಅವರು ಗೃಹಿಣಿಯಾಗಿದ್ದು ಪತಿ ಶೇಖರ್ ಅವರು ಪುತ್ತೂರಿನ ಬೀದಿ ಬದಿಯಲ್ಲಿ ಬಟ್ಟೆ ಮಾರುವ ಕಾಯಕ ನಡೆಸುತ್ತಿದ್ದಾರೆ. ಕಲ್ಲಡ್ಕ ಮೂಲದ ಪರಿಶಿಷ್ಟ ಜಾತಿಗೆ ಸೇರಿರುವ ಈ ಕುಟುಂಬ ಸದ್ಯ ಪುತ್ತೂರಿನ ಕಬಕದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದೆ.

ಅಭಿಷೇಕ್ ಮತ್ತು ಐಶ್ವರ್ಯ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮಕ್ಕಳಿಗೂ ಡಯಾಲಿಸಿಸ್ ಚಿಕಿತ್ಸೆಗೆ ತಿಂಗಳಿಗೆ ತಲಾ 25,000 ರೂಪಾಯಿ ಖರ್ಚು ತಗಲುತ್ತಿದೆ. ಆದಷ್ಟು ಬೇಗನೆ ಕಿಡ್ನಿ ಕಸಿ ಮಾಡುವಂತೆಯೂ ವೈದ್ಯರು ಸಲಹೆ ನೀಡಿದ್ದಾರಂತೆ. ಡಯಾಲಿಸಿಸ್ ಚಿಕಿತ್ಸೆ ನೀಡುವುದಕ್ಕೇ ಚಡಪಡಿಸುತ್ತಿರುವ ಅಶಕ್ತ ಕುಟಂಬವು ಕಿಡ್ನಿ ಕಸಿ ಮಾಡುವುದಾದರೂ ಹೇಗೆ..?
ಅರಳುವ ಮೊಗ್ಗುಗಳಾದ ಅಭಿಷೇಕ್ ಮತ್ತು ಐಶ್ವರ್ಯರ ಚಿಕಿತ್ಸೆಗೆ ಸಹಾಯ ಮಾಡಲಿಚ್ಛಿಸುವ ಸಹೃದಯಿಗಳು ಕೆಳಕಂಡ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.
Name: Anitha Alias Amitha
Bank : Bank of Baroda
Account no : 71250100010036
IFSC : BARB0VJKDKA
Branch : Kalladka
Google pay no: 9740169971
Mangalore Both Children suffer kidney failure and are suffering at Ks Hedge Hospital in Derlakatte in Ullal, Mother seeks help from people for their medical expenses.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm