ಬ್ರೇಕಿಂಗ್ ನ್ಯೂಸ್
08-07-22 09:07 pm Mangalore Correspondent ಕರಾವಳಿ
ಮಂಗಳೂರು, ಜುಲೈ 8: ಜನಪ್ರತಿನಿಧಿಗಳಾದವರು ಅವಿವೇಕಿ ರೀತಿ ಹೇಳಿಕೆಗಳನ್ನು ಕೊಡಬಾರದು. ಕಡಲ್ಕೊರೆತ ಸಮಸ್ಯೆ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಾರದವರು ಸಮಾಜ ಒಡೆಯುವ ಹೇಳಿಕೆ ನೀಡುತ್ತಿದ್ದಾರೆ. ಇವರ ವೈಫಲ್ಯಗಳನ್ನು ಮುಚ್ಚಿ ಹಾಕಲು ಈ ರೀತಿ ಹೇಳುತ್ತಿದ್ದಾರೆ. ಯಾಕೆ, ಇವರು ಅಧಿವೇಶನಕ್ಕೆ ಬಂದು ಆಸ್ತಿ ಮುಟ್ಟುಗೋಲು ಹಾಕುವುದಕ್ಕೆ ಹೇಳಿಲ್ಲ. ನಾವು ಉತ್ತರ ಕೊಡುತ್ತಿದ್ದೆವು. ಈಗ ಪೇಪರಿನಲ್ಲಿ ಬರುವುದಕ್ಕೆ ಹೇಳಿಕೆ ನೀಡಿ, ಜನರನ್ನು ಗೊಂದಲಕ್ಕೆ ಸಿಲುಕಿಸುವುದಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ವಿಪಕ್ಷ ನಾಯಕ ಯುಟಿ ಖಾದರ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿಕೆಯ ಬಗ್ಗೆ ಕಿಡಿಕಾರಿದ್ದಾರೆ.
ಅಕ್ರಮ ಗೋಹತ್ಯೆ ನಡೆಸಿದರೆ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವಂತೆ ಶಾಸಕ ಭರತ್ ಶೆಟ್ಟಿ ಹೇಳಿಕೆ ನೀಡಿದ್ದರು. ಶಾಸಕರ ಹೇಳಿಕೆಯ ಕುರಿತ ಪತ್ರಕರ್ತರ ಪ್ರಶ್ನೆಗೆ ಹರಿಹಾಯ್ದ ಯುಟಿ ಖಾದರ್, ಇವರಿಗೆ ಅಂಥ ಕಾಳಜಿ ಇದ್ದರೆ, ಅಲ್ಲಿ ಕಾನೂನು ಸಚಿವರಿದ್ದಾರೆ. ಅವರಿಗೆ ಹೋಗಿ ಹೇಳಲಿ. ಸೆಷನಲ್ಲಿ ಬಂದು ಚರ್ಚೆ ಮಾಡಿಲ್ಲ ಯಾಕೆ. ಜನಪ್ರತಿನಿಧಿ ಆಗಿದ್ದ ಮೇಲೆ ಎಲ್ಲರನ್ನೂ ಒಳಗೊಂಡು ವ್ಯವಹರಿಸಬೇಕು. ಯಾವುದೇ ಸಮಸ್ಯೆ ಇದ್ದರೂ, ಸೌಹಾರ್ದವಾಗಿ ಬಗೆಹರಿಸಲು ನೋಡಬೇಕು ವಿನಾ ಮತ್ತೊಂದು ಸಮಸ್ಯೆ ಹುಟ್ಟುಹಾಕುವುದಲ್ಲ ಎಂದು ಹೇಳಿದರು.

ಗೋಹತ್ಯೆ ಕಾನೂನನ್ನು ಬಿಜೆಪಿ ಸರಕಾರ ತಂದಿದೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕಾಗಿದೆ. ಆದರೆ ಬಕ್ರೀದ್ ಸಂದರ್ಭದಲ್ಲಿ ಕುರ್ಬಾನು, ಬಲಿ ಕೊಡುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಸೌಹಾರ್ದವಾಗಿ ಹಬ್ಬವನ್ನು ಆಚರಿಸಲು ಏನಾಗಬೇಕು. ಅದಕ್ಕೆ ರಾಜ್ಯ ಸರಕಾರ ನಿರ್ದಿಷ್ಟ ಮಾರ್ಗಸೂಚಿ ಪ್ರಕಟಿಸಬೇಕು. ಗೋಹತ್ಯೆ ಕಾನೂನಿನಲ್ಲೇ 14 ವರ್ಷ ಮೀರಿದ ಕೋಣಗಳನ್ನು ವಧಿಸಬಹುದು ಎಂದಿದೆ. ಕಾನೂನು ಪ್ರಕಾರ, ಪ್ರಾಯ ಮೀರಿದ ಕೋಣಗಳನ್ನು ಆಹಾರಕ್ಕಾಗಿ ವಧಿಸಲು ಅವಕಾಶ ನೀಡಬೇಕು. ಬಕ್ರೀದ್ ಹಬ್ಬಕ್ಕೆ ಬಡವರಿಗೆ ಆಹಾರ ಹಂಚುವ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಗೋಹತ್ಯೆ ಕಾನೂನಿನಲ್ಲಿಯೇ ಕೆಲವೊಂದು ಸ್ಪಷ್ಟತೆಗಳಿಲ್ಲ. ಪ್ರಾಯ ಮೀರಿದ ಜಾನುವಾರುಗಳನ್ನು ಕಡಿಯಬಹುದು ಎಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ಕೆಲವೊಬ್ಬರು ಕಡಿಯಲು ಅವಕಾಶ ಇಲ್ಲ ಎನ್ನುತ್ತಾರೆ. ಇದರಿಂದ ಜನರಲ್ಲಿ ಗೊಂದಲ ಏಳುತ್ತದೆ. ಪೊಲೀಸರಲ್ಲಿಯೂ ಗೊಂದಲ ಇದೆ. ಕೆಲವೊಮ್ಮೆ ಸಾಕುವ ದನಗಳನ್ನು ಒತ್ತಡಕ್ಕೆ ಮಣಿದು ವಶಕ್ಕೆ ಪಡೆಯುವ ಕೆಲಸಗಳಾಗುತ್ತವೆ. ಇದಕ್ಕಾಗಿ ಕಾನೂನಿನಲ್ಲಿ ಸ್ಪಷ್ಟತೆ ತರಬೇಕಾದ್ದು ಸರಕಾರದ ಕರ್ತವ್ಯ ಎಂದು ಯುಟಿ ಖಾದರ್ ಹೇಳಿದರು.
"The Congress leaders had said that there is a scam in PSI recruitment. We have claimed that the government is protecting senior officials. After the high court slammed the government, a senior IPS officer was arrested. This is a complete failure of the BJP-led state government in probing the case. The case should be investigated in the right manner, " said MLA U T Khader.He was speaking to media persons at the circuit house here on Friday, July 8.
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
14-04-26 01:46 pm
HK News Staffer
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
ಹೊರ್ಮುಜ್ ಜಲಸಂಧಿಯನ್ನು ನಾವೇ ತಡೆಯುತ್ತೇವೆ, ಅಣ್ವಸ್...
12-04-26 10:59 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:52 am
HK News Staffer
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm