ಬ್ರೇಕಿಂಗ್ ನ್ಯೂಸ್
04-07-22 08:55 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ಜಗತ್ತಿನಲ್ಲಿ ಅತಿ ದೊಡ್ಡ ಸರಕು ಹಡಗುಗಳ ಪೈಕಿ ಒಂದಾಗಿರುವ ಎಂಎಸ್ ಸಿ ಅರ್ಮೇನಿಯಾ ಹೆಸರಿನ ಹಡಗು ಇದೇ ಮೊದಲ ಬಾರಿಗೆ ನವಮಂಗಳೂರು ಬಂದರಿಗೆ ಆಗಮಿಸಿದೆ. 275 ಮೀಟರ್ ಉದ್ದದ ಹಡಗಿನಲ್ಲಿ 1265 ತೈಲದ ಕಂಟೇನರ್ ಗಳನ್ನು ಹೊತ್ತು ತರಲಾಗಿದೆ.
ಎಂಆರ್ ಪಿಎಲ್ ತೈಲ ಸಂಸ್ಕರಣಾ ಘಟಕಕ್ಕೆ ಕಚ್ಚಾ ತೈಲ, ಎಲ್ ಪಿಜಿ ಗ್ಯಾಸ್ ಹಡಗಿನ ಮೂಲಕ ಎನ್ಎಂಪಿಟಿ ಬಂದರಿಗೆ ಆಗಮಿಸುತ್ತಿದೆ. ಕೇಂದ್ರ ಸರಕಾರದ ಗತಿ ಶಕ್ತಿ ಯೋಜನೆಯಡಿ ತೈಲ ಉದ್ದೇಶಿತ ಸರಕು ಕಂಟೇನರ್ ಹಡಗುಗಳ ಆಗಮನ ಹೆಚ್ಚಿದ್ದು ಇದರಿಂದಾಗಿ ಮಂಗಳೂರು ಬಂದರನ್ನು ಜಾಗತಿಕ ಮಟ್ಟದ ಬಂದರನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಅರ್ಮೇನಿಯಾ ಸರಕು ಹಡಗನ್ನು ಎನ್ಎಂಪಿಟಿ ಬಂದರು ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಸ್ವಾಗತಿಸಿದರು.


ದೊಡ್ಡ ಮಟ್ಟದ ಹಡಗು ಬಂದರಿಗೆ ಆಗಮಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ವೆಂಕಟರಮಣ, ಜಾಗತಿಕ ಮಟ್ಟದಲ್ಲಿ ಸೂಕ್ತ ಮೂಲಸೌಲಭ್ಯ ಹೊಂದಿರುವುದನ್ನು ನಾವು ಖಾತರಿಪಡಿಸಿದ್ದೇವೆ ಎಂದು ಹೇಳಿದ್ದಾರೆ. ಕರ್ನಾಟಕದ ಏಕೈಕ ವಾಣಿಜ್ಯ ಬಂದರು ಇದಾಗಿದ್ದು, ಕೇಂದ್ರ ಸರಕಾರ ಬಂದರು ಅಭಿವೃದ್ಧಿಗೆ ತೊಡಗಿಸಿದ ಬಳಿಕ ಮೂಲ ಸೌಲಭ್ಯಗಳನ್ನು ಹೆಚ್ಚಿಸಿದೆ. ಈಗ ದೊಡ್ಡ ರೀತಿಯ ಸರಕು ಹಡಗುಗಳು ಲಂಗರು ಹಾಕಿರುವುದು ಬಂದರಿನ ಅಭಿವೃದ್ಧಿಯನ್ನು ಸೂಚಿಸುತ್ತದೆ ಎಂದು ರಮಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಡಗಿನ ಕ್ಯಾಪ್ಟನ್ ಆರ್.ಡಿ.ಪಾಯಸ್ ಮತ್ತು ಡೆಪ್ಯುಟಿ ಕ್ಯಾಪ್ಟನ್ ರಜನಿಕಾಂತ್ ಜೊತೆಗಿದ್ದರು. ಮಂಗಳವಾರದ ವೇಳೆಗೆ ಹಡಗು ಮಂಗಳೂರಿನಿಂದ ನಿರ್ಗಮಿಸಲಿದೆ ಎಂದವರು ತಿಳಿಸಿದ್ದಾರೆ.
The New Mangalore Port Authority achieved yet another milestone as the first mainline container vessel MSC Erminia made a port call here. A release from NMP here on Monday said ‘MSC Erminia’ is one of the largest container vessels in the world and its arrival here on Sunday heralded a new era. The ship has a length of 276.5 metres and a draft of 12.8 metres.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm