ಬ್ರೇಕಿಂಗ್ ನ್ಯೂಸ್
07-09-21 11:15 am Source: News 18 Kannada ಡಾಕ್ಟರ್ಸ್ ನೋಟ್
ಓಂ ಕಾಳು ಪ್ರತಿಯೊಬ್ಬರಿಗೂ ಗೊತ್ತಿರುವ ಪದಾರ್ಥ. ಇದರಲ್ಲಿ ಹಲವಾರು ಔಷಧಿಯ ಗುಣಗಳಿವೆ. ಟ್ರ್ಯಾಕಿಸ್ಪರ್ಮಾಮ್ ಎನ್ನುವ ಗಿಡಮೂಲಿಕೆಗಳ ಜಾತಿಗೆ ಸೇರಿದ ಓಂ ಕಾಳುಗಳನ್ನು ಅಡುಗೆಯಲ್ಲಿ ಸಹ ಬಳಕೆ ಮಾಡಲಾಗುತ್ತದೆ. ಹೆಚ್ಛಾಗಿ ಉಪ್ಪಿನಕಾಯಿ, ಮತ್ತು ಗೊಜ್ಜು ಮಾಡುವಾಗ ಬಳಸುತ್ತಾರೆ. ಸಾಮಾನ್ಯವಾಗಿ ಜೀರ್ಣಕ್ರಿಯೆಯನ್ನು(Digestion) ಸುಧಾರಿಸಲು ಈ ಕಾಳು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇನ್ನು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಇದು ಅಡಗಿಸಿಕೊಂಡಿದೆ.
ಅಜ್ವೈನ್ನ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳು ಥೈಮೋಲ್ ಮತ್ತು ಕಾರ್ವಾಕ್ರೋಲ್ನ ಹೆಚ್ಚಳಕ್ಕೆ ಕಾರಣವಾಗಿದ್ದು, ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುತ್ತದೆ. ಅಜ್ವೈನ್ ಬೀಜಗಳು ಇ.ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸೂಕ್ತವಾಗಿದೆ. ಸೋಂಕುಗಳನ್ನು ಗುಣಪಡಿಸುವುದರ ಜೊತೆಗೆ ಇದು ಗಾಯಗಳಿಗೆ ಸಹ ಪರಿಹಾರ ನೀಡುತ್ತದೆ.

ಶೀತ ಮತ್ತು ಕೆಮ್ಮಿಗೆ ಒಳ್ಳೆಯ ಪರಿಹಾರ
ಓಂ ಕಾಳುಗಳು ಕೆಮ್ಮು ನಿವಾರಣೆ ಮಾಡುವುದರಲ್ಲಿ ಹೆಸರುವಾಸಿಯಾಗಿದೆ. ಇದು ಶ್ವಾಸಕೋಶಕ್ಕೆ ಗಾಳಿಯ ಹರಿವನ್ನು ಹೆಚ್ಚಿಸುವ ಮೂಲಕ ಕೆಮ್ಮಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಆಸ್ತಮಾ ಮತ್ತು ಬ್ರಾಂಕೈಟಿಸ್ ನಂತಹ ಉಸಿರಾಟದ ಬೆಲ್ಲದೊಂದಿಗೆ ಅಜ್ವೈನ್ ಪುಡಿಯನ್ನು ಸೇರಿಸಿ ಮಿಶ್ರಣವನ್ನು ದಿನಕ್ಕೆರಡು ಬಾರಿ ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ
ಉರಿಯೂತದ ಗುಣಪಡಿಸುವ ಅಂಶಗಳನ್ನು ಅಜ್ವೈನ್ ಹೊಂದಿದೆ. ಇದನ್ನು ಸೂರ್ಯನ ಕಿರಣಗಳಿಂದ ಉಂಟಾಗುವ ಆಕ್ಸಿಡೇಟಿವ್ ಫ್ರೀ ರಾಡಿಕಲ್ ಹಾನಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಸುಕ್ಕುಗಳು, ಸೂಕ್ಷ್ಮ ಗೆರೆ, ಕಲೆಗಳು, ಇತ್ಯಾದಿಗಳಿಗೆ ಚರ್ಮದ ಸಮಸ್ಯೆಗಳಿಗೆ ಇದು ಉತ್ತಮ. ಅಲ್ಲದೇ ಮೊಡವೆ, ಮೊಡವೆಗಳಿಂದ ಉಂಟಾಗುವ ಕಲೆಗಳನ್ನು ಹೋಗಲಾಡಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಅಜ್ವೈನ್ ಬೀಜಗಳನ್ನು ಪೇಸ್ಟ್ ಮಾಡಿ ನಿಯಮಿತವಾಗಿ ಮಖಕ್ಕೆ ಹಚ್ಚುವುದು ಒಳ್ಳೆಯ ಫಲಿತಾಂಶ ನೀಡುತ್ತದೆ.

ಅಜ್ವೈನ್ ನೀರು
ಓಂ ಕಾಳಿನ ನೀರು ಅಜೀರ್ಣ ಸಮಸ್ಯೆಗೆ ಉತ್ತಮ ಮನೆ ಮದ್ದು, ಇದು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. ಓಂ ಕಾಳಿನ ನೀರು ಅಜೀರ್ಣ ಗುಣಪಡಿಸಲು ಮಕ್ಕಳಿಗೆ ನೀಡಬಹುದಾದ ಆಹಾರ. 2 ಟೀ ಚಮಚ ಹುರಿದ ಓಂ ಬೀಜಗಳನ್ನು ನೀರಿನಲ್ಲಿ ನೆನೆಸಿ, ಕಷಾಯವನ್ನು ಸೋಸಿಕೊಂಡು ಕುಡಿಯಿರಿ. ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಕೊಬ್ಬನ್ನು ಸುಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕೂದಲಿನ ಸಮಸ್ಯೆಗೆ ಪರಿಹಾರ
ಓಂ ಕಾಳಿನಲ್ಲಿರುವ ಕೆಲ ಅಂಶಗಳು ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಅತ್ಯಂತ ಪ್ರಯೋಜನಕಾರಿ. ಬ್ಯಾಕ್ಟೀರಿಯಾ ವಿರೋಧಿ ಸ್ವಭಾವದಿಂದಾಗಿ, ಇದು ನೆತ್ತಿಯ ಮತ್ತು ಕೂದಲಿನ ಸೋಂಕುಗಳಾದ ಫೋಲಿಕ್ಯುಲೈಟಿಸ್, ತುರಿಕೆ ಮತ್ತು ತಲೆಹೊಟ್ಟು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ತೆಂಗಿನ ಎಣ್ಣೆಯಲ್ಲಿ ಈರುಳ್ಳಿ ಅಜ್ವೈನ್ ಬೀಜಗಳನ್ನು ಕುದಿಸಿ. ತಣಿಸಿ ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಹಚ್ಚಿ ಹಾಗೆಯೇ ಬಿಡಿ. ಮರುದಿನ ಕೂದಲು ತೊಳೆಯಲು ಸೌಮ್ಯವಾದ ಶಾಂಪೂ ಬಳಸಿ. ಕೂದಲಿನ ಆರೋಗ್ಯ ಪ್ರಯೋಜನಕ್ಕೆ ವಾರಕ್ಕೆ ಎರಡರಿಂದ ಮೂರು ಬಾರಿ ಪ್ರಯತ್ನಿಸಿ
01-06-26 09:44 pm
HK News Staffer
ಫೈನಲ್ ಸೋಲಿನ ಬೆನ್ನಲ್ಲೇ ಜಿಟಿಗೆ ಮತ್ತೊಂದು ಶಾಕ್...
01-06-26 11:31 am
ದೇಶದ ಸಿರಿವಂತ ಸಿಎಂ ಆಗಲಿದ್ದಾರೆ 'ಕನಕಪುರ ಬಂಡೆ' ಡಿ...
31-05-26 09:23 pm
ಜೂನ್ 3ರಂದು 24ನೇ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ...
30-05-26 06:45 pm
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
31-05-26 09:25 pm
HK News Staffer
ಸೌದಿ ಜೈಲಿನಲ್ಲಿ ಎರಡು ದಶಕಗಳ ಅಗ್ನಿಪರೀಕ್ಷೆ; 34 ಕೋ...
29-05-26 06:17 pm
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
01-06-26 07:05 pm
HK News Staffer
ಬೆಂಗಳೂರು–ಮಂಗಳೂರು ವಂದೇ ಭಾರತ್ ಟ್ರಯಲ್ಗೆ ಬ್ರೇಕ್...
01-06-26 02:22 pm
Bengaluru Mangaluru Vande Bharat: ಬೆಂಗಳೂರು–ಮಂ...
31-05-26 03:40 pm
ತಣ್ಣೀರುಬಾವಿ ಇಕೋ ಬೀಚ್ನಲ್ಲಿ ರಾಷ್ಟ್ರ ಮಟ್ಟದ ಸರ್ಫ...
30-05-26 09:52 pm
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
01-06-26 08:16 pm
HK News Staffer
ಪಿಲಾತಬೆಟ್ಟು ; ದೈವಕ್ಕೆ ತಂಬಿಲ ಮಾಡ್ತಿದ್ದಾಗಲೇ ಕುಡ...
01-06-26 12:40 pm
ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ...
31-05-26 08:25 pm
ಬೀದಿ ಬದಿ ವ್ಯಾಪಾರಿಗೆ ನಿಂದಿಸಿ ವಿಡಿಯೋ ವೈರಲ್ ; ಸಾ...
31-05-26 05:06 pm
ಸತ್ಯನಾರಾಯಣ ಪೂಜೆ ಮುಗಿಸಿ ನದಿಗೆ ಇಳಿದವರು ಜಲಸಮಾಧಿ...
31-05-26 02:24 pm