ಬ್ರೇಕಿಂಗ್ ನ್ಯೂಸ್
21-07-21 05:21 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಮಕ್ಕಳಿಗೆ ಪೌಷ್ಟಿಕಾಂಶಭರಿತ ಆಹಾರವ ತಿನ್ನುವಂತೆ ಮಾಡುವುದೇ ಪೋಷಕರಿಗೆ ದೊಡ್ಡ ತಲೆನೋವಿನ ಸಂಗತಿಯಾಗಿದೆ. ಅದರಲ್ಲೂ ಈಗಿನ ಕೊರೊನಾ ಕಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕಾದ ಅವಶ್ಯಕತೆಯಿದೆ. ಅದರ ಜೊತೆಗೆ ಮಳೆಗಾಲ ಬೇರೆ, ಮಕ್ಕಳು ಹೆಚ್ಚು ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಅದಕ್ಕಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ನಿಮ್ಮ ಮಕ್ಕಳಿಗೆ ನೀಡಬೇಕು.
ತಜ್ಞರ ಪ್ರಕಾರ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯಾವ ಆಹಾರಗಳನ್ನು ನೀಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಮೊಟ್ಟೆ:
ಮೊಟ್ಟೆಗಳು ಪೋಷಕಾಂಶಗಳ ಕೇಂದ್ರವಾಗಿದ್ದು, ಹೃದಯ, ಸ್ನಾಯು ಮತ್ತು ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಮೊಟ್ಟೆಗಳಲ್ಲಿನ ವಿಟಮಿನ್ ಎ ಮತ್ತು ಬಿ 2, ಮಕ್ಕಳ ಬೆಳವಣಿಗೆ ಮತ್ತು ಬೆಳವಣಿಗೆಗೆ ಅವಶ್ಯಕ. ಅದರಲ್ಲಿರುವ ವಿಟಮಿನ್ ಡಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಮತ್ತು ಮೂಳೆಯ ಬೆಳವಣಿಗೆಯನ್ನು ಉತ್ತೇಜಿಸುವುದು. ಆದ್ದರಿಂದ ನಿಮ್ಮ ಮಕ್ಕಳಿಗೆ ಬೆಳಗಿನ ಉಪಹಾರ, ಊಟದ ನಡುವೆ ಮೊಟ್ಟೆಗಳನ್ನು ನೀಡಿ. ಮಕ್ಕಳ ಆಸಕ್ತಿಯನ್ನು ಸೆಳೆಯಲು ಅವುಗಳನ್ನು ವಿವಿಧ ಆಕಾರಗಳಾಗಿ ಕತ್ತರಿಸಿ, ವಿಭಿನ್ನವಾಗಿ ಕಾಣುವಂತೆ ಅಲಂಕರಿಸಿ.
ತರಕಾರಿಗಳು:
ಹಸಿರು ಸೊಪ್ಪು ತರಕಾರಿಗಳಾದ ಕರಿಬೇವಿನ ಎಲೆಗಳು, ನುಗ್ಗೆಕಾಯಿ, ಕೊತ್ತಂಬರಿ ಮತ್ತು ಪಾಲಾಕ್ ಅನ್ನು ನಿಮ್ಮ ಮಗುವಿನ ತಟ್ಟೆಯಲ್ಲಿ ಸೇರಿಸಬೇಕು. ಇವುಗಳಲ್ಲಿ ಫೈಬರ್, ಖನಿಜಗಳು, ಕಬ್ಬಿಣ ಮತ್ತು ಸತುವು ಸಮೃದ್ಧವಾಗಿದೆ. ಈ ತರಕಾರಿಗಳನ್ನು ವಿವಿಧ ಆಕಾರಗಳಲ್ಲಿ ಕತ್ತರಿಸಿ ನಿಮ್ಮ ಮಕ್ಕಳಿಗೆ ಬಡಿಸಬಹುದು. ಮಕ್ಕಳು ನಿಮ್ಮ ನೋಡಿ ಕಲಿಯುತ್ತಾರೆ, ಆದ್ದರಿಂದ ನಿಮ್ಮ ತಟ್ಟೆಯಲ್ಲಿ ಈ ಎಲ್ಲಾ ತರಕಾರಿಗಳಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ಮೊಸರು:
ಪ್ರೋಬಯಾಟಿಕ್ಗಳು ಮತ್ತು ವಿಟಮಿನ್ ಬಿ 12 ಯಲ್ಲಿ ಸಮೃದ್ಧವಾಗಿರುವ ಮೊಸರು ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯವನ್ನು ನಾಶಮಾಡಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ನಿಮ್ಮ ಮಕ್ಕಳಿಗೆ ಕೇವಲ ಮೊಸರು ನೀಡುವ ಬದಲು, ನಿಮ್ಮ ಮಕ್ಕಳಿಗೆ ಹಣ್ಣಿಗಳನ್ನು ಮಿಶ್ರಣ ಮಾಡಿ, ತರಕಾರಿಗಳ ರೈಟಾ ಅಥವಾ ಬೂಂಡಿ ರೈಟಾವನ್ನು ನೀಡಿ. ಇದು ರುಚಿಯ ಜತೆಗೆ ಮತ್ತಷ್ಟು ಪೌಷ್ಟಿಕಾಂಶಭರಿತವಾಗಿರುವುದು.
ಅರಿಶಿನ:
ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತದ ಗುಣಗಳನ್ನು ಹೊಂದಿದೆ. ಅರಿಶಿನ, ಅಲರ್ಜಿ ಮತ್ತು ಇತರ ಹಲವಾರು ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇದರ ದೈನಂದಿನ ಬಳಕೆಯಿ ಪ್ರಯೋಜನಕಾರಿ ಎಂದು ಅಧ್ಯಯನಗಳು ತೋರಿಸಿವೆ. ಅದರಲ್ಲೂ ಈ ಕೊರೊನಾ ಕಾಲದಲ್ಲಿ ಸೋಂಕಿನಿಂದ ದೂರವಿರಲು ಅರಶಿನ ಬಹಳ ಸಹಕಾರಿಯಾಗಿದೆ. ನಿಮ್ಮ ಮಕ್ಕಳಿಗೆ ಅರಶಿನ ಹಾಲು, ಪಲ್ಯ ಅಥವಾ ಇನ್ನಾವುದೇ ಪದಾರ್ಥದಲ್ಲಿ ಮಿಶ್ರಣ ಮಾಡಿ ಕೊಡಿ.
ಡ್ರೈ ಫ್ರೂಟ್ಸ್:
ಗೋಡಂಬಿ, ಬಾದಾಮಿ, ಅಂಜೂರ, ಒಣದ್ರಾಕ್ಷಿ, ವಾಲ್್ನಟ್ಸ್ ಮತ್ತು ಏಪ್ರಿಕಾಟ್ಗಳಲ್ಲಿ ಅಗತ್ಯವಾದ ಕೊಬ್ಬಿನಾಮ್ಲಗಳು ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇವುಗಳನ್ನು ಹಾಗೇ ತಿನ್ನಲು ಅಥವಾ ಯಾವುದಾದರೂ ಸೂಪ್ ತಯಾರಿಸಿ ಕೊಡಬಹುದು.
ತಜ್ಞರ ಇತರ ಸಲಹೆಗಳು:
ನಿಮ್ಮ ಮಕ್ಕಳಿಗೆ ಹೆಚ್ಚು ಸಕ್ಕರೆಯನ್ನು ನೀಡಬೇಡಿ ಏಕೆಂದರೆ ಅದು ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಸಕ್ಕರೆ ಆಧಾರಿತ ಆಹಾರಗಳಾದ ಸಿಹಿತಿಂಡಿಗಳು, ಸಾಸ್, ಹಣ್ಣಿನ ರಸಗಳು, ಪ್ಯಾಕೇಜ್ ಮಾಡಿದ ತಿಂಡಿಗಳು ಮತ್ತು ಚಾಕೊಲೇಟ್ಗಳನ್ನು ಸೇವಿಸಬೇಡಿ. ಉತ್ತಮ ನಿದ್ರೆಯನ್ನು ಕಾಪಾಡಿಕೊಳ್ಳಿ ಮತ್ತು ಆಗಾಗ ಸೂರ್ಯನ ಬೆಳಕಿಗೆ ಅದರಲ್ಲೂ ಬೆಳಗ್ಗಿನ ಸೂರ್ಯನ ಬೆಳಕಿಗೆ ಹೋಗಿ.
(Kannada Copy of Boldsky Kannada)
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am