ಬ್ರೇಕಿಂಗ್ ನ್ಯೂಸ್
08-07-21 02:28 pm Shreeraksha, BoldSky Kannada ಡಾಕ್ಟರ್ಸ್ ನೋಟ್
ನಮ್ಮ ಹಳ್ಳಿ ಕಡೆಗಳಲ್ಲಿ ಊಟವಾದ ಬಳಿಕ ವೀಲ್ಯದೆಲೆ ತಿನ್ನುವ ಅಭ್ಯಾಸ ಇದೆ. ಹಳ್ಳಿ ಮಾತ್ರವಲ್ಲದೇ ನಗರಗಳಲ್ಲಿ ಪಾನ್ ಬೀಡಾದ ರೂಪದಲ್ಲೂ ಸೇವಿಸುವವರಿದ್ದಾರೆ. ಕೆಲವರಿಗೆ ಇದು ಅಸಹ್ಯಕರ ಅಭ್ಯಾಸದಂತೆ ಕಾಣಿಸಬಹುದು, ಆದರೆ ವೀಳ್ಯದೆಲೆಗೆ ತಂಬಾಕು ಸೇರಿಸದಿದ್ದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
ಹಸಿರು ಬಂಗಾರ ಎಂದೇ ಪ್ರಸಿದ್ಧಿಯಾದ ಈ ವೀಳ್ಯದೆಲೆಯಲ್ಲಿ ಎಂತಹ ಸೌಂದರ್ಯ ಪ್ರಯೋಜನಗಳಿದೆ ಗೊತ್ತಾ?. ಹೌದು, ಈ ಎಲೆಗಳು ನಿಮ್ಮನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುವ ಕೆಲವು ವಿಧಾನಗಳನ್ನು ಇಲ್ಲಿ ನೀಡಲಾಗಿದೆ.
ವೀಳ್ಯದೆಲೆಯ ಸೌಂದರ್ಯ ಲಾಭಗಳನ್ನು ಈ ಕೆಳಗೆ ನೀಡಲಾಗಿದೆ:

ಮೊಡವೆಗಳ ನಿವಾರಣೆ:
ಮೊಡವೆಗಳಿಗೆ ಚಿಕಿತ್ಸೆ ನೀಡಲು ವೀಳ್ಯದೆಲೆಗಳಲ್ಲಿನ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅದ್ಭುತವಾಗಿ ಕೆಲಸಮಾಡುತ್ತವೆ. ನಿಮ್ಮ ಮುಖವನ್ನು ಈ ಎಲೆಯ ಕಷಾಯದಿಂದ ತೊಳೆಯಿರಿ ಅಥವಾ ನಿಮ್ಮ ಮುಖಕ್ಕೆ ವೀಳ್ಯದೆಲೆ ಮತ್ತು ಅರಿಶಿನ ಪೇಸ್ಟ್ ಮಾಡಿ, ಮೊಡವೆ ಇರುವ ಜಾಗದಲ್ಲಿ ಹಚ್ಚಿ ಮತ್ತು ತೊಳೆಯಿರಿ. ದಿನಕ್ಕೆ ಎರಡು ಬಾರಿ ಇದನ್ನು ಮಾಡಿ, ವಿಶೇಷವಾಗಿ ನೀವು ಮನೆಗೆ ಹಿಂದಿರುಗಿದ ನಂತರ ಮಾಡುವುದು ಉತ್ತಮ.

ಕಜ್ಜಿ ನಿವಾರಕ:
ನೀವು ದದ್ದು ಮತ್ತು ಅಲರ್ಜಿಗೆ ಗುರಿಯಾಗಿದ್ದರೆ ಈ ಎಲೆಗಳ ಹಿತವಾದ ಗುಣವು ಉತ್ತಮ ಪರಿಹಾರವನ್ನು ನೀಡುತ್ತದೆ. 10 ಎಲೆಗಳನ್ನು ಕುದಿಸಿ ಮತ್ತು ಎಲೆಗಳನ್ನು ತೆಗೆದುಹಾಕಿ. ಈ ನೀರನ್ನು ನಿಮ್ಮ ಸ್ನಾನದ ನೀರಿನಲ್ಲಿ ಬೆರೆಸಿ ಅಥವಾ ತುರಿಕೆ ಇರುವ ಜಾಗಗಳನ್ನು ಅದ್ದಿ ಇಡಿ. ಈ ಎಲೆಯ ಉರಿಯೂತದ ಗುಣಲಕ್ಷಣಗಳು ತುರಿಕೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.

ಕೇಶ ಸ್ನೇಹಿ:
ಆಯುರ್ವೇದವು ಕೂದಲು ಉದುರುವಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ವೀಳ್ಯದೆಲೆಗಳನ್ನು ಬಳಸಲು ಶಿಫಾರಸು ಮಾಡುತ್ತದೆ. ಇದನ್ನು ಲೋಷನ್ ರೀತಿಯಲ್ಲಿ ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಬಹುದು. ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ಜೊತೆಗೆ ಈ ಎಲೆಗಳನ್ನು ಪುಡಿಮಾಡಿ, ಪೇಸ್ಟ್ ನೆತ್ತಿಯ ಎಲ್ಲಾ ವಿಭಾಗಗಳಿಗೆ ಹಚ್ಚಿ. ನೀವು ಅದನ್ನು ತೊಳೆಯುವ ಮಾಡುವ ಮೊದಲು ಕನಿಷ್ಠ ಒಂದು ಗಂಟೆಯಾದರೂ ಬಿಡಿ.

ಬಾಯಿಯ ನೈರ್ಮಲ್ಯ:
ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಊಟದ ನಂತರ ವೀಳ್ಯದೆಲೆಯನ್ನು ಅಗಿಯಲು ಪ್ರಾರಂಭಿಸಿ. ಇದು ನಿಮ್ಮ ಉಸಿರನ್ನು ರಿಫ್ರೆಶ್ ಮಾಡುತ್ತದೆ ಮತ್ತು ರೋಗಾಣುಗಳನ್ನು ಕೊಲ್ಲುತ್ತದೆ. ಹಲ್ಲು ಹುಳ ತಿನ್ನುವುದನ್ನು ತಡೆಯಲು ಮತ್ತು ಒಸಡುಗಳನ್ನು ಬಲಪಡಿಸಲು ಈ ಎಲೆಯನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಮತ್ತು ಅದರ ಕಷಾಯವನ್ನು ಬಳಸಿ ನಿಮ್ಮ ಬಾಯಿಯನ್ನು ತೊಳೆಯಿರಿ.

ದೇಹದ ದುರ್ನಾತ:
ನೀವು ಮಾಡುವ ಸ್ನಾನದ ನೀರಿಗೆ ವೀಳ್ಯದೆಲೆಗಳನ್ನು ಸೇರಿಸಿದರೆ ನಿಮಗೆ ತಾಜಾ ಭಾವನೆಯನ್ನು ನೀಡುತ್ತದೆ ಮತ್ತು ನಿಮ್ಮ ದೇಹದಲ್ಲಿ ವಾಸನೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಅಷ್ಟೇಅಲ್ಲ, ವೀಳ್ಯದೆಲೆ ಕುದಿಸಿ ತಯಾರಿಸಿದ ನೀರಿನ್ನು ಸೇವಿಸುವುದರಿಂದ, ದೇಹವನ್ನು ನಿರ್ವಿಷಗೊಳ್ಳುವುದು ಮತ್ತು ಎಲ್ಲಾ ರೀತಿಯ ಅಹಿತಕರ ದೇಹದ ವಾಸನೆಯನ್ನು ಕೊಲ್ಲುತ್ತದೆ.
(Kannada Copy of Boldsky Kannada)
30-08-26 10:09 pm
HK News Desk
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
30-08-26 02:41 pm
HK News Staffer
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
31-08-26 12:01 pm
HK News Staffer
ವೈಟ್ ಫೀಲ್ಡ್ ಬೇಡ, ಡಾರ್ಕ್ ಫೀಲ್ಡ್ ಮಾಡ್ರೀ..! ಎತ್ತ...
31-08-26 09:51 am
ಸರ್ಕಾರಿ ನಿವೇಶನ ಸಿಗದ ನೋವು, ವಿವಾದದ ಕಾವು ; ಇಬ್ಬರ...
29-08-26 01:02 pm
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm