ಬ್ರೇಕಿಂಗ್ ನ್ಯೂಸ್
26-06-21 12:18 pm Meghashree Devaraju, BoldSky Kannada ಡಾಕ್ಟರ್ಸ್ ನೋಟ್
ಸಿಹಿಖಾದ್ಯಗಳು ಯಾರಿಗೆ ತಾನೆ ಇಷ್ಟ ಇಲ್ಲ. ಎಂಥವರೂ ಸಹ ರುಚಿಕರ ಸಿಹಿತಿಂಡಿಗಳನ್ನು ಚಪ್ಪರಿಸಿ ಸವಿಯುತ್ತಾರೆ, ಆದರೆ ಆರೋಗ್ಯದ ವಿಷಯಕ್ಕೆ ಬಂದರೆ ಮಧುಮೇಹ, ಇತರೆ ಕಾಯಿಲೆಗಳ ಭಯದಿಂದ ಸಕ್ಕರೆಯನ್ನು ಕಡಿಮೆ ಸೇವಿಸಿ ಎಂದು ವೈದ್ಯರು ಹೇಳುವುದುಂಟು.
ನಾವು ಸಹ ನಮ್ಮ ಆರೋಗ್ಯಕ್ಕೆ ಉತ್ತಮವಾದದನ್ನು ಆರಿಸಿಕೊಳ್ಳಲು ಬಯಸುತ್ತೇವೆ. ನಿಮ್ಮ ಆರೋಗ್ಯವೂ ಉತ್ತಮವಾಗಿರಲೆಂದು ಭಾವಿಸಿ ನೀವು ಸಹ ಬಿಳಿ ಸಕ್ಕರೆಯಿಂದ ಕಂದು ಸಕ್ಕರೆಗೆ ಬದಲಾಯಿಸಿದ್ದರೆ, ಇದರ ಬಗ್ಗೆ ಇನ್ನಷ್ಟು ಈ ಲೇಖನವನ್ನು ಓದಬೇಕು.
ಕಂದು ಸಕ್ಕರೆ ಬಿಳಿ ಸಕ್ಕರೆಗಿಂತ ನಿಜವಾಗಿಯೂ ಉತ್ತಮವೇ ಅಥವಾ ಕಂದು ಸಕ್ಕರೆಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಬಿಳಿ ಸಕ್ಕರೆಗಿಂತ ಅದು ಎಷ್ಟು ಭಿನ್ನವಾಗಿದೆ ಎಂದು ತಿಳಿಯಲು ಮುಂದೆ ಓದಿ.
ಕಂದು ಸಕ್ಕರೆಯನ್ನು ಹೇಗೆ ತಯಾರಿಸುತ್ತಾರೆ?
ಬಿಳಿ ಸಕ್ಕರೆಯಂತೆಯೇ ಕಂದು ಸಕ್ಕರೆಯನ್ನು ತಯಾರಿಸುವ ಪ್ರಕ್ರಿಯೆ ಇರುತ್ತದೆ. ಆದ್ದರಿಂದ, ಕಂದು ಸಕ್ಕರೆ ಬಿಳಿ ಬಣ್ಣಕ್ಕಿಂತ ಉತ್ತಮವಾಗಿದೆ ಎಂಬುದು ಸುಳ್ಳು. ಸಂಸ್ಕರಿಸಿದ ಸಕ್ಕರೆ ಹರಳುಗಳನ್ನು ಕಬ್ಬಿನ ಮೊಲಾಸ್ಗಳೊಂದಿಗೆ ಬೆರೆಸಿ ಬ್ರೌನ್ ಸಕ್ಕರೆಯನ್ನು ತಯಾರಿಸಲಾಗುತ್ತದೆ. ಶೇಕಡಾ 95ರಷ್ಟು ಸಂಸ್ಕರಿಸಿದ ಸಕ್ಕರೆಯನ್ನು 5ರಷ್ಟು ಮೊಲಾಸ್ಗಳೊಂದಿಗೆ ಬೆರೆಸಲಾಗುತ್ತದೆ. ಕಬ್ಬಿನ ಮೊಲಾಸಸ್ ಸಕ್ಕರೆಗೆ ವಿಶಿಷ್ಟ ಕಂದು ಬಣ್ಣ ಮತ್ತು ಮೃದುತ್ವವನ್ನು ನೀಡುತ್ತದೆ.
ಕಂದು ಸಕ್ಕರೆ v/s ಬಿಳಿ ಸಕ್ಕರೆ
ಕಂದು ಸಕ್ಕರೆ ಮತ್ತು ಬಿಳಿ ಸಕ್ಕರೆ ಎರಡರಲ್ಲೂ ಕ್ಯಾಲೋರಿ ಹೋಲಿಕೆ ಬಂದಾಗ, ಕಂದು ಸಕ್ಕರೆಯು ಬಿಳಿ ಸಕ್ಕರೆಗಿಂತ ಶೇಕಡಾ 0.25 ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಸರಳವಾಗಿ ಹೇಳುವುದಾದರೆ, ಕಂದು ಸಕ್ಕರೆ ಮೊಲಾಸಸ್ ಸಿರಪ್ನಿಂದ ಲೇಪಿತವಾದ ಬಿಳಿ ಸಕ್ಕರೆಯಾಗಿದೆ. ಕಂದು ಸಕ್ಕರೆಯು ಬಿಳಿ ಸಕ್ಕರೆಗಿಂತ ಹೆಚ್ಚಿನ ಖನಿಜಗಳನ್ನು ಹೊಂದಿದ್ದರೂ, ಈ ಖನಿಜಗಳ ಪ್ರಮಾಣವು ತುಂಬಾ ಕಡಿಮೆಯಾಗಿದ್ದು, ಇದರಿಂದ ನೀವು ಯಾವುದೇ ಆರೋಗ್ಯ ಪ್ರಯೋಜನಗಳನ್ನು ಪಡೆಯುವುದಿಲ್ಲ. ಕಂದು ಸಕ್ಕರೆಯಲ್ಲಿ ಮೊಲಾಸಸ್ ಇರುವುದರಿಂದ, ಇದು ಸ್ವಲ್ಪ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ಬೇಯಿಸಿದ ಸಿಹಿತಿಂಡಿಗಳಿಗೆ ಇದು ಸೂಕ್ತವಾಗಿರುತ್ತದೆ.
ಆರೋಗ್ಯಕರ ಸಿಹಿಕಾರಕಗಳು
ನಿಮ್ಮ ಆಹಾರ ಪದ್ಧತಿಯಿಂದ ಸಕ್ಕರೆಯನ್ನು ಬಿಡುವ ಅಥವಾ ತಿನ್ನದೇ ಇರುವ ಬಗ್ಗೆ ಯೋಜಿಸುತ್ತಿದ್ದರೆ ಇದು ಉತ್ತಮ ಅಭ್ಯಾಸ. ಸಕ್ಕರೆಯ ಬದಲಿಗೆ ಮಾರುಕಟ್ಟೆಯಲ್ಲಿ ಹಲವಾರು ಆರೋಗ್ಯಕರ ಪದಾರ್ಥಗಳಿವೆ. ನೀವು ಸ್ಟೀವಿಯಾ ಅಥವಾ ತೆಂಗಿನಕಾಯಿ ಸಕ್ಕರೆಯನ್ನು ಆರಿಸಿಕೊಳ್ಳಬಹುದು. ಇದು ರುಚಿಕರ ಮತ್ತು ನೋಡಲು ಸಹ ಸಕ್ಕರೆಯಂತೆ ಕಾಣುತ್ತದೆ. ಅಲ್ಲದೇ, ಮ್ಯಾಪಲ್ ಸಿರಪ್, ಜೇನುತುಪ್ಪ ಮತ್ತು ಭೂತಾಳೆ ಮಕರಂದ ನಿಮ್ಮ ಆಹಾರದಲ್ಲಿ ಸಕ್ಕರೆಯನ್ನು ಬದಲಿಸುವ ಕೆಲವು ಆಯ್ಕೆಗಳಾಗಿವೆ. ಬಿಳಿ ಸಕ್ಕರೆಯಿಂದ ಬದಲಾಯಿಸುವಾಗ ತೆಗೆದುಕೊಳ್ಳಲು ಉತ್ತಮ ಆಯ್ಕೆ ಶಕ್ಕರ್. ಆರ್ಗಾನಿಕ್ ಸಕ್ಕರೆ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು ಮತ್ತು ಕಬ್ಬಿಣದಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸಿಹಿತಿಂಡಿ ಅಥವಾ ಪಾನೀಯಗಳನ್ನು ಸಿಹಿಗೊಳಿಸಲು ಬೆಲ್ಲವನ್ನು ಸಹ ಬಳಸಬಹುದು.
ನೆನಪಿಡಿ
ನೀವು ಯಾವುದೇ ಆಹಾರ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಹಾನಿ, ಸ್ವಲ್ಪ ಸೇವಿಸಿದರೆ ಹಾನಿ ಇಲ್ಲ ಎಂಬುದು ಸುಳ್ಳು. ಇನ್ನೊಂದು ಮೂಲದ ಪ್ರಕಾರ ಯಾವುದೇ ಆಹಾರವನ್ನು ಮಿತವಾಗಿ, ಮನಸ್ಸಿನಿಂದ ಬಳಸುವುದು ಉತ್ತಮ. ಸಾಧ್ಯವಾದಷ್ಟು ಸಕ್ಕರೆ ಬದಲಿಗೆ, ಜೇನುತುಪ್ಪ, ಬೆಲ್ಲ, ಆರ್ಗಾನಿಕ್ ಸಕ್ಕರೆ, ಮೇಪಲ್ ಸಿರಪ್ ಬಳಸಿ. ಆಗಿರಲಿ ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ನಿಮ್ಮ ಬಳಕೆ ಮಧ್ಯಮವಾಗಿ ಇರುವವರೆಗೆ, ನಿಮ್ಮ ಆಯ್ಕೆಯ ಸಿಹಿಕಾರಕದೊಂದಿಗೆ ಹೋಗುವುದು ಒಳ್ಳೆಯದು.'
(Kannada Copy of Boldsky Kannada)
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 03:02 pm
HK News Desk
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm