ಬ್ರೇಕಿಂಗ್ ನ್ಯೂಸ್
30-07-20 06:56 pm Health News ಡಾಕ್ಟರ್ಸ್ ನೋಟ್
ಐಬಿಎಸ್ನ ಸಾಮಾನ್ಯ ಕಾರಣಗಳಲ್ಲಿ ಒತ್ತಡವೂ ಒಂದು. ನರಮಂಡಲವನ್ನು ಶಾಂತಗೊಳಿಸುವ ಮೂಲಕ ಒತ್ತಡವನ್ನು ಮುಚ್ಚಲು ಆಯ್ದ ಯೋಗಾಸನಗಳು ಸಹಾಯ ಮಾಡುತ್ತವೆ ಹಾಗೂ ಕಿರಿಕಿರಿ ಉಂಟುಮಾಡುವ ಜೀರ್ಣಾಂಗವ್ಯವಸ್ಥೆಯನ್ನೂ ಶಾಂತಗೊಳಿಸಿ, ಅದರ ಸುಸ್ಥಿತಿಗೆ ಸಹಾಯ ಮಾಡುತ್ತವೆ. ನಾಡೀಶುದ್ಧಿ, ಪ್ರಾಣಾಯಾಮ ಹಾಗೂ ಧ್ಯಾನದಿಂದ ಒತ್ತಡ ನಿಯಂತ್ರಣವಾಗುತ್ತದೆ. ದಿನಕ್ಕೆ ಮೂರು ಬಾರಿ ವಿಶ್ರಾಂತಿ ಭಂಗಿ ಶವಾಸನ, ಮಕರಾಸನವನ್ನು ಮಾಡಿ.
ಸೂಚಿತ ಆಸನಗಳು: ಪರಿಘಾಸನ, ತಾಡಾಸನ, ಪಶ್ಚಿಮೋತ್ಥಾಸನ, ವಕ್ರಾಸನ, ಜಠರ ಪರಿವರ್ತನಾಸನ, ನಾವಾಸನ, ಶಶಾಂಕಾಸನ, ಮಂಡೂಕಾಸನ, ಹಲಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಪವನಮುಕ್ತಾಸನ, ಶವಾಸನ ಮಾಡಿ. ಮೂರು ತಿಂಗಳ ಯೋಗಾಭ್ಯಾಸದಲ್ಲಿ ಸರಿಹೋಗುತ್ತದೆ. ಯೋಗದ ಪ್ರಕಾರ ಮುಖ್ಯ ಅಂಶಗಳಾದ ಆಹಾರ, ವಿಹಾರ ಮತ್ತು ನಿದ್ರೆಗಳ ಮೇಲೆ ಮನುಷ್ಯನ ಆರೋಗ್ಯವು ಅವಲಂಬಿಸಿದೆ.
ಆಹಾರ ಹೇಗಿರಬೇಕು?: ಕಾಶ್ಯಪ ಸಂಹಿತೆಯಲ್ಲಿ ‘ಆರೋಗ್ಯಂ ಭೋಜನಾಧೀನಂ’ ಎಂದು ಹೇಳಿದೆ. ಅಂದರೆ ‘ಊಟ ಬಲ್ಲವನಿಗೆ ರೋಗ ಇಲ್ಲ’. ನಮ್ಮ ದೇಹದ ಸಮಸ್ತ ಚಟುವಟಿಕೆಗಳಿಗೆ ಆಹಾರವೇ ಮೂಲ ಶಕ್ತಿಯಾಗಿದೆ. ಒಳ್ಳೆಯ ಆಹಾರವು ಆರೋಗ್ಯವನ್ನು ಪುನಃ ಪ್ರತಿಷ್ಠಾಪಿಸುತ್ತದೆ ಮತ್ತು ಆರೋಗ್ಯವಂತ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡುತ್ತದೆ. ಸತ್ವಯುವಾದ ಸಾತ್ವಿಕ ಆಹಾರವನ್ನು ಸೇವಿಸಬೇಕು. ಅತಿ ಹುಳಿ, ಅತಿ ಖಾರ, ಅತಿ ಮಸಾಲೆ ಬೇಡ.
ಆಹಾರವನ್ನು ತುಟಿ ಮುಚ್ಚಿ ಚೆನ್ನಾಗಿ ಜಗಿದು ಸೇವಿಸಿ. ಬಾಯಿ ತೆರೆದು ಆಹಾರವನ್ನು ಜಗಿಯಬಾರದು. ಯಾಕೆಂದರೆ ಬಾಯಿಯಲ್ಲಿರುವ ಲಾಲಾರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ (ಬಾಯಿ ತೆರೆದಾಗ ಗಾಳಿಯ ಸ್ಪರ್ಶದಿಂದ ಜೊಲ್ಲುರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ). ನಾವು ತುಟಿ ಮುಚ್ಚಿ ಆಹಾರವನ್ನು ಜಗಿದು ನುಂಗಿದಾಗ ಆಹಾರದಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಸುಲಭವಾಗಿ ಸೇರುತ್ತವೆ. ಆಹಾರ ಸೇವನೆಯ ಸಂದರ್ಭದಲ್ಲಿ ನೀರನ್ನು ಕುಡಿಯಬಾರದು (ಅತ್ಯಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಕುಡಿಯಬಹುದು). ಇಂದು ಸಾಮಾನ್ಯವಾಗಿ ವೇಗವಾಗಿ ಅಥವಾ ತುಂಬ ತಣ್ಣನೆಯ ಆಹಾರ / ಪಾನೀಯಗಳನ್ನು ತಿನ್ನುವ ಜನರಲ್ಲಿ ಕಂಡುಬರುತ್ತದೆ. ಹಾಗಿದ್ದಲ್ಲಿ, ನಿಮ್ಮ ತಿನ್ನುವ ಮಾದರಿಯನ್ನು ಬದಲಾವಣೆ ಮಾಡಬೇಕಾಗಬಹುದು. ಅದು ಮುಂದುವರಿದರೆ ತಜ್ಞರನ್ನು ಸಂಪರ್ಕಿಸಿ.
17-04-26 01:39 pm
HK News Staffer
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ...
16-04-26 10:30 pm
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
ಆದಿಚುಂಚನಗಿರಿಯಲ್ಲಿ 80 ಕೋಟಿ ವೆಚ್ಚದ ಮಂದಿರ ಉದ್ಘಾಟ...
15-04-26 07:05 pm
17-04-26 11:27 am
HK News Staffer
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
17-04-26 03:02 pm
HK News Staffer
ಬೆಳ್ತಂಗಡಿಯಲ್ಲಿ ಎರಡು ಕಡೆ ಭೂಕಬಳಿಕೆ ; ವೀರೇಂದ್ರ ಹ...
17-04-26 12:33 pm
ಎಚ್ಐವಿ ಪೀಡಿತ ಮಕ್ಕಳ ಬಾಳಿಗೆ ಆಸರೆಯಾದ ಮಂಗಳೂರಿನ ತ...
17-04-26 11:25 am
ಆಟೋದಲ್ಲಿ ಒಡವೆಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ಮಹಿ...
13-04-26 11:39 pm
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
16-04-26 10:36 pm
HK News Staffer
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am
ಯೋಗೀಶಗೌಡ ಕೊಲೆ ಕೇಸಲ್ಲಿ ಕಾಂಗ್ರೆಸ್ ಶಾಸಕ ಅಪರಾಧಿ ;...
15-04-26 11:40 pm