ಬ್ರೇಕಿಂಗ್ ನ್ಯೂಸ್
14-09-20 03:46 pm Headline Karnataka News Network ದೇಶ - ವಿದೇಶ
ಮುಂಬೈ, ಸೆಪ್ಟಂಬರ್ 14: ಶಿವಸೈನಿಕರ ಬೆದರಿಕೆ ಲೆಕ್ಕಿಸದೆ ಮುಂಬೈಗೆ ಬಂದು ಶಿವಸೇನೆ ಮತ್ತು ಮಹಾರಾಷ್ಟ್ರ ಸರಕಾರದ ಜೊತೆ ಜಟಾಪಟಿಗಿಳಿದಿದ್ದ ನಟಿ ಕಂಗನಾ ರಣೌತ್ ಮುಂಬೈ ಬಿಟ್ಟು ತೆರಳಿದ್ದಾರೆ. ತನ್ನ ಸ್ವಂತ ಊರು ಹಿಮಾಚಲ ಪ್ರದೇಶದ ಮನಾಲಿಗೆ ನಿರ್ಗಮಿಸುವ ಮಧ್ಯೆ ಕಂಗನಾ ಮತ್ತೆ ಟ್ವೀಟ್ ಮಾಡಿದ್ದು, ತನ್ನ ಮಾತುಗಳಿಗೆ ಬದ್ಧಳಿರುವುದಾಗಿ ಪುನರುಚ್ಚರಿಸಿದ್ದಾರೆ.
ಮುಂಬೈಯಿಂದ ಒಡೆದ ಹೃದಯದೊಂದಿಗೆ ಹಿಂತಿರುಗುತ್ತಿದ್ದೇನೆ. ಶಿವಸೈನಿಕರು ನಿರಂತರ ದಾಳಿಯಿಂದ ನನ್ನನ್ನು ಭೀತಿಗೊಳಿಸಿದ್ದರು. ಮುಂಬೈಯನ್ನು ನಾನು ಪಿಓಕೆಗೆ ಹೋಲಿಸಿದ್ದಕ್ಕೇ ಇಷ್ಟೆಲ್ಲಾ ಮಾಡಿದ್ದಾರೆ. ಆದರೆ ನನ್ನ ಮಾತುಗಳಿಗೆ ಬದ್ಧಳಿದ್ದೇನೆ ಎಂದಿದ್ದಾರೆ. ಇಂದು ಬೆಳಗ್ಗೆ ಮುಂಬೈನಿಂದ ತನ್ನೂರಿಗೆ ಹೊರಟ ಕಂಗನಾ ಚಂಡೀಗಢ ತಲುಪಿದಾಗ ಹಿಂದಿಯಲ್ಲಿ ಟ್ಟೀಟ್ ವಾರ್ ಮುಂದುವರಿಸಿದ್ದಾರೆ. ಒಂದು ವಾರದಲ್ಲಿ ಮುಂಬೈನಲ್ಲಿದ್ದು ನಾನು ಬದುಕಿ ಬಂದಿದ್ದೇ ಹೆಚ್ಚು. ತುಂಬ ಆತಂಕದಿಂದಲೇ ಒಂದು ವಾರವನ್ನು ಕಳೆದಿದ್ದೇನೆ. ನನ್ನ ಕಚೇರಿಯನ್ನು ಪುಡಿಗಟ್ಟಿದರು. ಒಂದು ಕಾಲದಲ್ಲಿ ಮುಂಬೈ ನನ್ನನ್ನು ತಾಯಿಯಂತೆ ಸಲಹಿತ್ತು. ತಾಯಿ ಪ್ರೀತಿ ಸಿಕ್ಕಿತ್ತು. ಆದರೆ, ಈಗಿನ ಸನ್ನಿವೇಶದಲ್ಲಿ ನಾನು ಅಲ್ಲಿಂದ ಬದುಕಿ ಬರುತ್ತಿರುವುದೇ ಅದೃಷ್ಟ ಅನ್ನುವಂತಾಗಿದೆ. ಶಿವಸೇನೆ ಈಗ ಸೋನಿಯಾ ಸೇನೆ ಆಗಿದೆ. ಅಲ್ಲಿನ ಆಡಳಿತದಲ್ಲಿ ಭಯೋತ್ಪಾದಕರು ತುಂಬಿಕೊಂಡಿದ್ದಾರೆ ಎಂದು ಬರೆದಿದ್ದಾರೆ. ಅಲ್ಲದೆ, ಚಂಡೀಗಢದಿಂದ ದೂರ ಹೋಗುತ್ತಿದ್ದಂತೆ ನನ್ನ ಭದ್ರತೆಯೂ ಕಡಿಮೆಯಾಗಲಿದೆ. ಅಭಿಮಾನಿಗಳ ಹಾರೈಕೆಯಿಂದ ಸಹಜ ಬದುಕಿಗೆ ತೆರೆದುಕೊಳ್ಳಲಿದ್ದೇನೆ ಎಂದಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ವಿಚಾರದಲ್ಲಿ ಟ್ವೀಟ್ ವಾರ್ ನಡೆಸಿದ್ದ ಕಂಗನಾ ರನೌತ್ ಗೆ ಶಿವಸೇನೆ ಬೆದರಿಕೆ ಹಾಕಿತ್ತು. ನೀನು ಮುಂಬೈಗೆ ಬಂದರೆ ನೋಡಿಕೊಳ್ತೀವಿ ಎಂದಿದ್ದ ಸವಾಲನ್ನು ಸ್ವೀಕರಿಸಿದ್ದ ನಟಿ ಕಂಗನಾ, ವೈ ಪ್ಲಸ್ ಭದ್ರತೆಯೊಂದಿಗೆ ಕಳೆದ ವಾರ ಮುಂಬೈಗೆ ಬಂದಿದ್ದರು. ಆದರೆ ಮುಂಬೈಗೆ ಬಂದು ತನ್ನ ಕಚೇರಿ ತಲುಪುವಷ್ಟರಲ್ಲಿ ಶಿವಸೇನೆ ಸರಕಾರ ಆಕೆಯ ಕಚೇರಿ ಇದ್ದ ಕಟ್ಟಡವನ್ನು ಅಕ್ರಮ ಎಂಬ ಕಾರಣಕ್ಕೆ ಕೆಡವಲು ಶುರು ಮಾಡಿತ್ತು. ಆಬಳಿಕ ಬಾಂಬೈ ಹೈಕೋರ್ಟ್ ಕಟ್ಟಡ ಕೆಡಹುವುದಕ್ಕೆ ತಡೆ ಹಾಕಿತ್ತು. ಆದರೆ ಅಷ್ಟರಲ್ಲಿ ಕಚೇರಿಯ ಆಸುಪಾಸು ಕೆಡವಿ ಆಗಿತ್ತು. ಇದೇ ವಿಚಾರ ಕಂಗನಾ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ಶಿವಸೇನೆ ವಿರುದ್ಧ ನಿರಂತರ ಟ್ವೀಟ್ ವಾರ್ ನಡೆಸಿದ್ದು ದೇಶದ ಗಮನ ಸೆಳೆದಿತ್ತು. ಮಹಾರಾಷ್ಟ್ರ ಸರಕಾರವನ್ನೇ ಎದುರು ಹಾಕ್ಕೊಂಡ ದಿಟ್ಟ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ಕಂಗನಾ ಪಡೆದಿದ್ದರು. ಐದು ದಿನ ಮುಂಬೈನಲ್ಲಿದ್ದ ಕಂಗನಾ, ಮಹಾರಾಷ್ಟ್ರ ಸರಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲರನ್ನು ಭೇಟಿಯಾಗಿದ್ದರು.
With a heavy heart leaving Mumbai, the way I was terrorised all these days constant attacks and abuses hurled at me attempts to break my house after my work place, alert security with lethal weapons around me, must say my analogy about POK was bang on. https://t.co/VXYUNM1UDF
— Kangana Ranaut (@KanganaTeam) September 14, 2020
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 04:25 pm
HK News Desk
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm