ಬ್ರೇಕಿಂಗ್ ನ್ಯೂಸ್
04-03-26 11:51 am HK News Staffer ಕರ್ನಾಟಕ
ಚಿಕ್ಕಮಗಳೂರು,ಮಾ 04: ಇರಾನ್–ಇಸ್ರೇಲ್ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯುವಕನೊಬ್ಬ ಸಂಪರ್ಕಕ್ಕೆ ಸಿಗದಿರುವ ಘಟನೆ ಕುಟುಂಬವನ್ನು ಆತಂಕಕ್ಕೀಡಾಗಿಸಿದೆ. ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದ ನಿಶ್ಚಿತ್ ಎಂಬ ಯುವಕ ಪ್ರಸ್ತುತ ಯುದ್ಧ ಪೀಡಿತ ಇರಾನ್ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದ್ದು, ಕಳೆದ ಕೆಲವು ದಿನಗಳಿಂದ ಕುಟುಂಬಸ್ಥರೊಂದಿಗೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಕುಟುಂಬಸ್ಥರಿಗೆ ತೀವ್ರ ಚಿಂತೆ ಉಂಟು ಮಾಡಿದೆ.
ಮರ್ಚಂಟ್ ನೇವಿಯಲ್ಲಿ ವೃತ್ತಿ ಆರಂಭಿಸಿದ್ದ ನಿಶ್ಚಿತ್, ಕಳೆದ ಐದು ತಿಂಗಳ ಹಿಂದೆ ಉದ್ಯೋಗ ನಿಮಿತ್ತ ಇರಾನ್ಗೆ ತೆರಳಿದ್ದರು. ಆದರೆ ಅಮೆರಿಕ ಬೆಂಬಲಿತ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಪರಿಸ್ಥಿತಿ ಉಲ್ಬಣಗೊಂಡಿರುವ ಸಂದರ್ಭದಲ್ಲಿ ಕ್ಷಿಪಣಿ ದಾಳಿಗಳು ಮುಂದುವರಿಯುತ್ತಿರುವುದರಿಂದ ಆತನ ಸುರಕ್ಷತೆ ಬಗ್ಗೆ ಕುಟುಂಬಸ್ಥರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.
ನಿಶ್ಚಿತ್ ಅವರ ಮೊಬೈಲ್ ಫೋನ್ ಕಳೆದ ಕೆಲವು ದಿನಗಳಿಂದ ಸ್ವಿಚ್ ಆಫ್ ಆಗಿದ್ದು, ಅವರ ಸ್ಥಿತಿಗತಿ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಗನ ಕರೆಗಾಗಿ ದಿನನಿತ್ಯ ಕಾಯುತ್ತಿರುವ ಪೋಷಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೆರವಿಗಾಗಿ ಮನವಿ ಮಾಡಿದ್ದಾರೆ. ವಿದೇಶಾಂಗ ಇಲಾಖೆಯ ಮೂಲಕ ತಕ್ಷಣ ಮಾಹಿತಿ ಸಂಗ್ರಹಿಸಿ, ನಿಶ್ಚಿತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ ಈ ಬೆಳವಣಿಗೆ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದು, ಕುಟುಂಬದವರು ಕಣ್ಣೀರಿನ ಮನವಿ ಮಾಡಿದ್ದಾರೆ. ಪ್ರಸ್ತುತ ಜಿಲ್ಲಾಡಳಿತ ಅಥವಾ ಸ್ಥಳೀಯ ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದಷ್ಟು ಬೇಗ ತಮ್ಮ ಮಗನನ್ನು ವಾಪಸ್ ಕರೆತನ್ನಿ ಎಂದು ನಿಶ್ಚಿತ್ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಬದುಕು ಕಟ್ಟಿಕೊಳ್ಳಲು ಇರಾನ್ಗೆ ಹೋಗಿದ್ದ ನಿಶ್ಚಿತ್!
ಬದುಕು ಕಟ್ಟಿಕೊಳ್ಳಲು ನಿಶ್ಚಿತ್ ಇರಾನ್ಗೆ ತೆರಳಿದ್ದನಂತೆ. ಮರ್ಚೆಂಟ್ ನೇವಿ ಉದ್ಯೋಗಿಯಾಗಿದ್ದ ನಿಶ್ಚಿತ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದವರಾಗಿದ್ದಾರೆ. ಐದು ತಿಂಗಳ ಹಿಂದೆಷ್ಟೇ ಇರಾನ್ ನಲ್ಲಿ ಮರ್ಚೆಂಟ್ ನೇವಿಯಲ್ಲಿ ಕೆಲಸ ಶುರು ಮಾಡಿದ್ದರು.
ಒಂದು ವಾರದ ಹಿಂದೆ ಇರಾನ್ ನಿಂದ ಕುವೈಟ್ ಗೆ ತೆರಳುವುದಾಗಿ ಕೊನೆಯ ಕರೆಯಲ್ಲಿ ಹೇಳಿದ್ದ ನಿಶ್ಚಿತ್ ಬಗ್ಗೆ ಮಾಹಿತಿ ಸಿಗದೆ ಕುಟುಂಬ ಕಂಗಾಲಾಗಿದೆ. ಮಗನನ್ನು ವಾಪಸ್ ಕರೆಸಿ ಎಂದು ತಂದೆ ಮಹೇಶ್ ಕೇಳಿಕೊಳ್ತಿದ್ದಾರೆ. ನಿಶ್ಚಿತ್ ಇರಾನ್ನಲ್ಲೇ ಇದ್ದಾನಾ? ಅಥವಾ ಕುವೈಟ್ಗೆ ಹೋಗಿದ್ದಾನಾ? ಅನ್ನೋ ಯಾವ ಮಾಹಿತಿ ಇದುವರೆಗೆ ಸಿಕ್ಕಿಲ್ಲ ಎನ್ನಲಾಗ್ತಿದೆ.
25-04-26 10:56 pm
HK Staffer
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
‘ಪಿಯುಸಿ ಸೈನ್ಸ್’ ಗುಮ್ಮ ಮುಂದಿಟ್ಟು ದಂಧೆಗಿಳಿದ ಖಾಸ...
23-04-26 07:06 pm
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭರ್ಜರಿ ದಾಖಲೆ ; ಒಟ್...
23-04-26 01:36 pm
25-04-26 03:54 pm
HK News Staffer
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗ...
23-04-26 10:22 am
ಭಾರತಕ್ಕೆ ಬರುತ್ತಿದ್ದ ಮತ್ತೆ ಮೂರು ತೈಲ ಹಡಗು ಇರಾನ್...
22-04-26 09:10 pm
25-04-26 01:45 pm
HK News Staffer
Commissioner Sudheer Reddy, Mangalore: ಕಮಿಷನರ...
24-04-26 07:10 pm
ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ ಖಾಸಗಿ ತೆಕ್...
23-04-26 04:43 pm
ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಮಂಗಳೂರಿನಲ್ಲಿ ಬೃ...
22-04-26 10:58 am
ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ...
21-04-26 06:33 pm
25-04-26 10:43 pm
Mangalore Correspondent
ಉಡುಪಿ ; ಸಂಸ್ಕೃತ ಕಾಲೇಜಿನ ಉಪನ್ಯಾಸಕ ಬಾವಿಯಲ್ಲಿ ಶ...
25-04-26 03:57 pm
ಮಣಿಪಾಲದಲ್ಲಿ ಪಬ್ಲಿಕ್ನಲ್ಲೇ ವಿದ್ಯಾರ್ಥಿಗಳ ಓಪನ್ ರೋ...
25-04-26 02:05 pm
ಕಾರ್ಕಳ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಬೈಕ್ ಗೆ ಡಿಕ...
25-04-26 12:55 pm
ವೇಣೂರು ; ಬಳಂಜ ದೇವಸ್ಥಾನಕ್ಕೆ ನುಗ್ಗಿ ದೇವರ ಮೂರ್ತಿ...
24-04-26 04:37 pm