ಬ್ರೇಕಿಂಗ್ ನ್ಯೂಸ್
02-09-20 07:15 pm Headline Karnataka News Network ದೇಶ - ವಿದೇಶ
ಹೈದರಾಬಾದ್, ಸೆಪ್ಟೆಂಬರ್. 2: ತೆಲಂಗಾಣ ಮೂಲದ ವ್ಯಕ್ತಿ ಪಾಸ್ಪೋರ್ಟ್ ಇಲ್ಲದೆಯೇ 16 ವರ್ಷಗಳ ಬಳಿಕ ದುಬೈನಿಂದ ವಾಪಾಸ್ಸಾಗಿದ್ದು, ಕಳೆದ 16 ವರ್ಷಗಳಲ್ಲಿ ದುಬೈನಲ್ಲಿ ಸಿಲುಕಿಕೊಂಡಿದ್ದ ಅವರಿಗೆ 29 ಲಕ್ಷ ರೂ ನಷ್ಟು ದಂಡ ವಿಧಿಸಲಾಗಿತ್ತು.
ನೀಲ ಯಲ್ಲಯ್ಯ ಚಿಂತಮಾನಪಳ್ಳಿಯವರು, 2004ರಲ್ಲಿ ಕೆಲಸಕ್ಕೆಂದು ದುಬೈಗೆ ಹೋಗಿದ್ದರು. ಬಳಿಕ ಕೆಲವು ಸನ್ನಿವೇಶಗಳು ಅವರನ್ನು ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿತು. ಜೈನ್ ಸೇವಾ ಮಿಷನ್ ಸ್ವಯಂಸೇವಕರಾದ ರೂಪೇಶ್ ಮೆಹ್ತಾ ಎಂಬುವವರು ಅವರಿಗೆ ಸಹಾಯ ಮಾಡಿದ್ದು, ದುಬೈನಲ್ಲಿರುವ ಭಾರತೀಯ ಕೌನ್ಸುಲೇಟ್ನಲ್ಲಿ ತಾತ್ಕಾಲಿಕ ಪಾಸ್ಪೋರ್ಟ್ ಪಡೆದು ಅವರನ್ನು ಕರೆತರಲಾಗಿದೆ.
ಯಲ್ಲಯ್ಯ ಅವರ ಪತ್ನಿ ಒತ್ತಾಯದ ಮೇರೆಗೆ ಹೈದರಾಬಾದ್ ಕಚೇರಿಯಲ್ಲಿ ಹಳೆಯ ಪಾಸ್ಪೋರ್ಟ್ ಪಡೆಯಲಾಯಿತು. ಅವರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಕರೆಸಿಕೊಳ್ಳಲಾಯಿತು.ಅವರ ವೀಸಾ ಅವಧಿ ಮುಗಿದು ಕೂಡ ಅಲ್ಲಿಯೇ ಇದ್ದ ಕಾರಣ ನಿತ್ಯ 500 ರೂ.ನಷ್ಟು ಇಲ್ಲಿಯವರೆಗೆ 29 ಲಕ್ಷದಷ್ಟು ದಂಡ ವಿಧಿಸಲಾಗಿತ್ತು. ದುಬೈ ಸರ್ಕಾರ ಆ ದಂಡವನ್ನು ಮನ್ನಾ ಮಾಡಿದೆ.
ಅವರು ಸೋಮವಾರ ಸಂಜೆ ತೆಲಂಗಾಣವನ್ನು ತಲುಪಿದ್ದು, ಸದ್ಯ ಹೋಂ ಕ್ವಾರಂಟೈನ್ನಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಯಲ್ಲಯ್ಯ ಅವರು ದುಬೈಗೆ ಹೊರಡುವ ಸಂದರ್ಭದಲ್ಲಿ ಮಗಳು ಇನ್ನೂ ಚಿಕ್ಕವಳು. ಈಗ ಆಕೆ ಒಂದು ಮಗುವಿನ ತಾಯಿಯಾಗಿದ್ದಾಳೆ.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am