ಬ್ರೇಕಿಂಗ್ ನ್ಯೂಸ್
02-09-20 07:15 pm Headline Karnataka News Network ದೇಶ - ವಿದೇಶ
ಹೈದರಾಬಾದ್, ಸೆಪ್ಟೆಂಬರ್. 2: ತೆಲಂಗಾಣ ಮೂಲದ ವ್ಯಕ್ತಿ ಪಾಸ್ಪೋರ್ಟ್ ಇಲ್ಲದೆಯೇ 16 ವರ್ಷಗಳ ಬಳಿಕ ದುಬೈನಿಂದ ವಾಪಾಸ್ಸಾಗಿದ್ದು, ಕಳೆದ 16 ವರ್ಷಗಳಲ್ಲಿ ದುಬೈನಲ್ಲಿ ಸಿಲುಕಿಕೊಂಡಿದ್ದ ಅವರಿಗೆ 29 ಲಕ್ಷ ರೂ ನಷ್ಟು ದಂಡ ವಿಧಿಸಲಾಗಿತ್ತು.
ನೀಲ ಯಲ್ಲಯ್ಯ ಚಿಂತಮಾನಪಳ್ಳಿಯವರು, 2004ರಲ್ಲಿ ಕೆಲಸಕ್ಕೆಂದು ದುಬೈಗೆ ಹೋಗಿದ್ದರು. ಬಳಿಕ ಕೆಲವು ಸನ್ನಿವೇಶಗಳು ಅವರನ್ನು ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿತು. ಜೈನ್ ಸೇವಾ ಮಿಷನ್ ಸ್ವಯಂಸೇವಕರಾದ ರೂಪೇಶ್ ಮೆಹ್ತಾ ಎಂಬುವವರು ಅವರಿಗೆ ಸಹಾಯ ಮಾಡಿದ್ದು, ದುಬೈನಲ್ಲಿರುವ ಭಾರತೀಯ ಕೌನ್ಸುಲೇಟ್ನಲ್ಲಿ ತಾತ್ಕಾಲಿಕ ಪಾಸ್ಪೋರ್ಟ್ ಪಡೆದು ಅವರನ್ನು ಕರೆತರಲಾಗಿದೆ.
ಯಲ್ಲಯ್ಯ ಅವರ ಪತ್ನಿ ಒತ್ತಾಯದ ಮೇರೆಗೆ ಹೈದರಾಬಾದ್ ಕಚೇರಿಯಲ್ಲಿ ಹಳೆಯ ಪಾಸ್ಪೋರ್ಟ್ ಪಡೆಯಲಾಯಿತು. ಅವರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಕರೆಸಿಕೊಳ್ಳಲಾಯಿತು.ಅವರ ವೀಸಾ ಅವಧಿ ಮುಗಿದು ಕೂಡ ಅಲ್ಲಿಯೇ ಇದ್ದ ಕಾರಣ ನಿತ್ಯ 500 ರೂ.ನಷ್ಟು ಇಲ್ಲಿಯವರೆಗೆ 29 ಲಕ್ಷದಷ್ಟು ದಂಡ ವಿಧಿಸಲಾಗಿತ್ತು. ದುಬೈ ಸರ್ಕಾರ ಆ ದಂಡವನ್ನು ಮನ್ನಾ ಮಾಡಿದೆ.
ಅವರು ಸೋಮವಾರ ಸಂಜೆ ತೆಲಂಗಾಣವನ್ನು ತಲುಪಿದ್ದು, ಸದ್ಯ ಹೋಂ ಕ್ವಾರಂಟೈನ್ನಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಯಲ್ಲಯ್ಯ ಅವರು ದುಬೈಗೆ ಹೊರಡುವ ಸಂದರ್ಭದಲ್ಲಿ ಮಗಳು ಇನ್ನೂ ಚಿಕ್ಕವಳು. ಈಗ ಆಕೆ ಒಂದು ಮಗುವಿನ ತಾಯಿಯಾಗಿದ್ದಾಳೆ.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm