ಬ್ರೇಕಿಂಗ್ ನ್ಯೂಸ್
18-05-21 04:34 pm Headline Karnataka News Network ದೇಶ - ವಿದೇಶ
Photo credits : Representative Image
ನವದೆಹಲಿ, ಮೇ 18: ಕೊರೊನಾ ಸೋಂಕು ಏನೆಲ್ಲಾ ವಿಚಿತ್ರಗಳಿಗೆ ಸಾಕ್ಷಿಯಾಗುತ್ತಿದೆ ಅನ್ನೋದನ್ನು ಊಹಿಸುವಂತಿಲ್ಲ. ಉತ್ತರ ಪ್ರದೇಶದ ಬಾರಾಮತಿ ಜಿಲ್ಲೆಯಲ್ಲಿ ಕುಟುಂಬವೊಂದು 76 ವರ್ಷದ ಅಜ್ಜಿ ಕೊರೊನಾ ಸೋಂಕಿನಿಂದ ಸತ್ತಿದ್ದಾರೆಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿತ್ತು. ಆದರೆ, ಇನ್ನೇನು ಅಂತ್ಯವಿಧಿ ಮುಗಿಸಬೇಕು ಎನ್ನುವಷ್ಟರಲ್ಲಿ ಅಜ್ಜಿ ಕಣ್ಣು ಬಿಟ್ಟುಕೊಂಡು ಅಳಲು ಆರಂಭಿಸಿದ್ದಾರೆ. ಅಲ್ಲಿ ಸೇರಿದ್ದ ಕುಟುಂಬಸ್ಥರು ಅಚ್ಚರಿಯಿಂದ ಗಲಿಬಿಲಿಗೊಂಡಿದ್ದಾರೆ.
ಬಾರಾಮತಿ ಜಿಲ್ಲೆಯ ಮುಧಾಳೆ ಎಂಬ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದೆ. ಹೀಗೆ ಸತ್ತು ಬದುಕಿದ ವೃದ್ಧ ಮಹಿಳೆಯನ್ನು 76 ವರ್ಷದ ಶಕುಂತಳಾ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಕೋವಿಡ್ ಪಾಸಿಟಿವ್ ಆಗಿದ್ದ ಮಹಿಳೆಯನ್ನು ಮನೆಯಲ್ಲೇ ಐಸೋಲೇಶನ್ ಮಾಡಲಾಗಿತ್ತು. ಆದರೆ, ವೃದ್ಧೆಯಾಗಿದ್ದರಿಂದ ಮಹಿಳೆಯ ದೇಹಸ್ಥಿತಿ ಬಿಗಡಾಯಿಸಿತ್ತು. ಹೀಗಾಗಿ ವೃದ್ಧೆಯನ್ನು ಮೇ 10ರಂದು ಬಾರಾಮತಿಯ ಖಾಸಗಿ ಆಸ್ಪತ್ರೆ ಒಂದಕ್ಕೆ ಒಯ್ಯಲಾಯಿತು.
ಕುಟುಂಬಸ್ಥರು ಆಸ್ಪತ್ರೆಯಲ್ಲಿ ವಿಚಾರಿಸಿದಾಗ, ಬೆಡ್ ಸಿಗಲಿಲ್ಲ. ಹೊರಗೆ ಕಾರಿನಲ್ಲಿ ಮಲಗಿದ್ದ ಅಜ್ಜಿ ಕೋಮಾಕ್ಕೆ ಜಾರಿದ್ದಲ್ಲದೆ, ನಿಶ್ಚಲವಾಗಿ ಬಿದ್ದುಕೊಂಡಿದ್ದರು. ಇದನ್ನು ಕಂಡ ಕುಟುಂಬಸ್ಥರು ಅಜ್ಜಿ ಮೃತಪಟ್ಟಿದ್ದಾಗಿ ನಂಬಿ ನೇರವಾಗಿ ಮನೆಗೆ ತಂದಿದ್ದಾರೆ. ಇತರೇ ಕುಟುಂಬಸ್ಥರಿಗೂ ಈ ಬಗ್ಗೆ ತಿಳಿಸಿದ್ದು, ಎಲ್ಲರೂ ಅಜ್ಜಿಯನ್ನು ಕೊನೆಯ ಬಾರಿಗೆ ನೋಡಲು ಮನೆಗೆ ಆಗಮಿಸಿದ್ದರು. ಜೊತೆಗೆ ಅಂತ್ಯಕ್ರಿಯೆ ನಡೆಸುವುದಕ್ಕೂ ತಯಾರಿ ನಡೆಸಿದ್ದರು.
ಅತ್ತ ಅಂತ್ಯವಿಧಿಗಳನ್ನು ನಡೆಸಲು ಮನೆಯಲ್ಲಿ ಸಿದ್ಥತೆ ನಡೆಸುತ್ತಿರುವಾಗಲೇ ಅಜ್ಜಿ ಬಾಯಿ ತೆರೆದುಕೊಂಡಿದ್ದು, ಅಳುವುದನ್ನು ಆರಂಭಿಸಿದ್ದಾಳೆ. ಕಣ್ಣು ಬಿಟ್ಟುಕೊಂಡು ಎಲ್ಲರೂ ಸೇರಿದ್ದನ್ನು ನೋಡಿ, ದಂಗಾಗಿದ್ದಾರೆ. ಕೂಡಲೇ ಮನೆಯವರು ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ಒಯ್ದಿದ್ದು, ದಾಖಲು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಸುದ್ದಿ ಮುಟ್ಟಿದ್ದು ಮನೆಗೆ ತೆರಳಿ ಎಡವಟ್ಟು ಆಗಿರುವುದನ್ನು ದೃಢಪಡಿಸಿದ್ದಾರೆ. ಅಜ್ಜಿಗೇನೋ ಆಯುಷ್ಯ ಇತ್ತು. ಸ್ವಲ್ಪ ಹೊತ್ತು ಕಳೆಯುತ್ತಿದ್ದರೆ, ದೇಹ ಚಿತೆಗೆ ಬಿದ್ದು ಅಂತಿಮ ಯಾನ ಕೈಗೊಳ್ಳುತ್ತಿದ್ದರು.
In a bizarre incident, a 76-year-old woman who was believed to be dead came to life moments before she was to be cremated as her family members prepared for her last rites, at Mudhale village in Baramati.
07-10-25 11:20 pm
Bangalore Correspondent
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
ದಸರಾ ರಜಾ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ; 10 ದಿ...
07-10-25 05:23 pm
07-10-25 11:16 pm
HK News Desk
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
07-10-25 10:13 pm
Mangalore Correspondent
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm