ಬ್ರೇಕಿಂಗ್ ನ್ಯೂಸ್
16-02-21 07:40 pm Headline Karnataka News Network ದೇಶ - ವಿದೇಶ
ನವದೆಹಲಿ, ಫೆ.16: ಭಾರತ- ಚೀನಾ ಗಡಿಯಲ್ಲಿ ಕಳೆದ ಹತ್ತು ತಿಂಗಳಲ್ಲಿ ಉದ್ಭವ ಆಗಿದ್ದ ಉದ್ವಿಗ್ನ ಸ್ಥಿತಿ ಸಂಪೂರ್ಣ ಶಮನಗೊಳ್ಳುವ ಮುನ್ಸೂಚನೆ ಕಂಡುಬಂದಿದೆ. ಕಾಶ್ಮೀರದ ಪೂರ್ವ ಲಡಾಖ್ ಪ್ರಾಂತ್ಯದ 150 ಕಿಮೀ ಉದ್ದಕ್ಕೆ ನಿಯೋಜನೆಗೊಂಡಿದ್ದ ಚೀನಾ ಪಡೆಗಳು ದಿಢೀರ್ ಆಗಿ ಕಾಲು ಹಿಂದಕ್ಕೆ ಇಟ್ಟಿರುವುದನ್ನು ಭಾರತೀಯ ಸೇನಾ ಪಡೆ ದೃಢಪಡಿಸಿದೆ.
ಕಳೆದ ಎಪ್ರಿಲ್ ತಿಂಗಳಿಂದ ಬೀಡುಬಿಟ್ಟಿದ್ದ ಚೀನಾ ಸೇನಾ ಪಡೆ ಪಾಂಗೋಂಗ್ ತ್ಸೋ ನದಿಯ ಬದಿಯಿಂದ ಹಿಂದಕ್ಕೆ ಸರಿದಿದೆ. ಅಲ್ಲದೆ, ಅಲ್ಲಿ ರೆಡಿ ಮಾಡಿದ್ದ ಹೆಲಿಪ್ಯಾಡ್, ಯುದ್ಧ ಟ್ಯಾಂಕರ್ ಗಳು, ಜೆಟ್ಟಿ, ಟೆಂಟ್ ಗಳನ್ನು ತೆರವು ಮಾಡಿದ್ದು, ಫಿಂಗರ್ ಪಾಯಿಂಟ್ 4 ಮತ್ತು 5ರಲ್ಲಿ ಸೇನಾ ಪಡೆಯನ್ನು ತೆರವು ಮಾಡಲಾಗಿದೆ.



ಪಾಂಗೊಂಗ್ ಸರೋವರದ 134 ಕಿಮೀ ಉದ್ದಕ್ಕೂ ಚೀನಾ ಪಡೆ ನಿಯೋಜನೆಗೊಂಡಿತ್ತು. ಎಂಟು ಗಂಟೆಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಚೀನಾ ಪಡೆ ತನ್ನ ಜಾಗ ತೆರವು ಮಾಡಿದೆ ಎಂದು ಅಧಿಕಾರಿಯೊಬ್ಬರು ನ್ಯೂಸ್ 18 ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ ವಾರ ಚೀನಾ- ಭಾರತ ನಡುವೆ ಏರ್ಪಟ್ಟ ಸಂಧಾನದ ಫಲವಾಗಿ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿದೆದ ಎನ್ನಲಾಗುತ್ತಿದೆ. ಕಳೆದ ಹತ್ತು ತಿಂಗಳಲ್ಲಿ ಗಡಿಭಾಗದಲ್ಲಿ ಮಾಡಿಕೊಂಡಿದ್ದ ಟೆಂಟ್, ಇನ್ನಿತರ ತಾತ್ಕಾಲಿಕ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ. ಲಾರಿಗಳಲ್ಲಿ ತುಂಬಿಸಿ ಹಿಂದಕ್ಕೆ ಒಯ್ಯುತ್ತಿರುವ ಫೋಟೋಗಳು ಲಭ್ಯವಾಗಿದೆ. ಕ್ರೇನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಂಟೇನರ್ ಲಾರಿಗಳಿಗೆ ತುಂಬಿಸುವುದು ಕಂಡುಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಉಭಯ ರಾಷ್ಟ್ರಗಳ ಮಾತುಕತೆ ಪ್ರಕಾರ, ಚೀನಾ ಸೇನೆ ಫಿಂಗರ್ ಪಾಯಿಂಟ್ 8ಕ್ಕೆ ಹಿಂದಿರುಗಬೇಕಿದ್ದರೆ, ಭಾರತದ ಸೇನೆ ಫಿಂಗರ್ ಪಾಯಿಂಟ್ 3ಕ್ಕೆ ಹಿಂದೆ ಬರಬೇಕಿದೆ. ಫೆ.10ರಂದು ಈ ಬಗ್ಗೆ ಒಪ್ಪಂದ ಏರ್ಪಟ್ಟಿದ್ದು, ಅದರಂತೆ ಎರಡೂ ಕಡೆಗಳಲ್ಲಿ ನಿಯೋಜನೆಗೊಂಡಿದ್ದ 100ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್ ಗಳನ್ನು ಹಿಂದಕ್ಕೆ ಕರೆಸಲಾಗುತ್ತಿದೆ. ಪರ್ವತ ಶಿಖರಗಳ ಪ್ರದೇಶ ಮಾನವ ರಹಿತವಾಗಿದ್ದು, ಅಲ್ಲೀಗ ರಾಡಾರ್ ಮತ್ತು ಡ್ರೋಣ್ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ.
Indian and Chinese tanks were seen disengaging from the south bank of Pangong lake area in eastern Ladakh where they were deployed amid a standoff areas along the Line of Actual Control.
13-01-26 12:57 pm
Bangalore Correspondent
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm