ಬ್ರೇಕಿಂಗ್ ನ್ಯೂಸ್
16-02-21 07:40 pm Headline Karnataka News Network ದೇಶ - ವಿದೇಶ
ನವದೆಹಲಿ, ಫೆ.16: ಭಾರತ- ಚೀನಾ ಗಡಿಯಲ್ಲಿ ಕಳೆದ ಹತ್ತು ತಿಂಗಳಲ್ಲಿ ಉದ್ಭವ ಆಗಿದ್ದ ಉದ್ವಿಗ್ನ ಸ್ಥಿತಿ ಸಂಪೂರ್ಣ ಶಮನಗೊಳ್ಳುವ ಮುನ್ಸೂಚನೆ ಕಂಡುಬಂದಿದೆ. ಕಾಶ್ಮೀರದ ಪೂರ್ವ ಲಡಾಖ್ ಪ್ರಾಂತ್ಯದ 150 ಕಿಮೀ ಉದ್ದಕ್ಕೆ ನಿಯೋಜನೆಗೊಂಡಿದ್ದ ಚೀನಾ ಪಡೆಗಳು ದಿಢೀರ್ ಆಗಿ ಕಾಲು ಹಿಂದಕ್ಕೆ ಇಟ್ಟಿರುವುದನ್ನು ಭಾರತೀಯ ಸೇನಾ ಪಡೆ ದೃಢಪಡಿಸಿದೆ.
ಕಳೆದ ಎಪ್ರಿಲ್ ತಿಂಗಳಿಂದ ಬೀಡುಬಿಟ್ಟಿದ್ದ ಚೀನಾ ಸೇನಾ ಪಡೆ ಪಾಂಗೋಂಗ್ ತ್ಸೋ ನದಿಯ ಬದಿಯಿಂದ ಹಿಂದಕ್ಕೆ ಸರಿದಿದೆ. ಅಲ್ಲದೆ, ಅಲ್ಲಿ ರೆಡಿ ಮಾಡಿದ್ದ ಹೆಲಿಪ್ಯಾಡ್, ಯುದ್ಧ ಟ್ಯಾಂಕರ್ ಗಳು, ಜೆಟ್ಟಿ, ಟೆಂಟ್ ಗಳನ್ನು ತೆರವು ಮಾಡಿದ್ದು, ಫಿಂಗರ್ ಪಾಯಿಂಟ್ 4 ಮತ್ತು 5ರಲ್ಲಿ ಸೇನಾ ಪಡೆಯನ್ನು ತೆರವು ಮಾಡಲಾಗಿದೆ.



ಪಾಂಗೊಂಗ್ ಸರೋವರದ 134 ಕಿಮೀ ಉದ್ದಕ್ಕೂ ಚೀನಾ ಪಡೆ ನಿಯೋಜನೆಗೊಂಡಿತ್ತು. ಎಂಟು ಗಂಟೆಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಚೀನಾ ಪಡೆ ತನ್ನ ಜಾಗ ತೆರವು ಮಾಡಿದೆ ಎಂದು ಅಧಿಕಾರಿಯೊಬ್ಬರು ನ್ಯೂಸ್ 18 ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ ವಾರ ಚೀನಾ- ಭಾರತ ನಡುವೆ ಏರ್ಪಟ್ಟ ಸಂಧಾನದ ಫಲವಾಗಿ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿದೆದ ಎನ್ನಲಾಗುತ್ತಿದೆ. ಕಳೆದ ಹತ್ತು ತಿಂಗಳಲ್ಲಿ ಗಡಿಭಾಗದಲ್ಲಿ ಮಾಡಿಕೊಂಡಿದ್ದ ಟೆಂಟ್, ಇನ್ನಿತರ ತಾತ್ಕಾಲಿಕ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ. ಲಾರಿಗಳಲ್ಲಿ ತುಂಬಿಸಿ ಹಿಂದಕ್ಕೆ ಒಯ್ಯುತ್ತಿರುವ ಫೋಟೋಗಳು ಲಭ್ಯವಾಗಿದೆ. ಕ್ರೇನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಂಟೇನರ್ ಲಾರಿಗಳಿಗೆ ತುಂಬಿಸುವುದು ಕಂಡುಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಉಭಯ ರಾಷ್ಟ್ರಗಳ ಮಾತುಕತೆ ಪ್ರಕಾರ, ಚೀನಾ ಸೇನೆ ಫಿಂಗರ್ ಪಾಯಿಂಟ್ 8ಕ್ಕೆ ಹಿಂದಿರುಗಬೇಕಿದ್ದರೆ, ಭಾರತದ ಸೇನೆ ಫಿಂಗರ್ ಪಾಯಿಂಟ್ 3ಕ್ಕೆ ಹಿಂದೆ ಬರಬೇಕಿದೆ. ಫೆ.10ರಂದು ಈ ಬಗ್ಗೆ ಒಪ್ಪಂದ ಏರ್ಪಟ್ಟಿದ್ದು, ಅದರಂತೆ ಎರಡೂ ಕಡೆಗಳಲ್ಲಿ ನಿಯೋಜನೆಗೊಂಡಿದ್ದ 100ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್ ಗಳನ್ನು ಹಿಂದಕ್ಕೆ ಕರೆಸಲಾಗುತ್ತಿದೆ. ಪರ್ವತ ಶಿಖರಗಳ ಪ್ರದೇಶ ಮಾನವ ರಹಿತವಾಗಿದ್ದು, ಅಲ್ಲೀಗ ರಾಡಾರ್ ಮತ್ತು ಡ್ರೋಣ್ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ.
Indian and Chinese tanks were seen disengaging from the south bank of Pangong lake area in eastern Ladakh where they were deployed amid a standoff areas along the Line of Actual Control.
22-08-26 03:01 pm
HK News Staffer
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm