ಬ್ರೇಕಿಂಗ್ ನ್ಯೂಸ್
28-02-26 10:54 pm HK News Desk ದೇಶ - ವಿದೇಶ
ನವದೆಹಲಿ, ಫೆ.28: ಇರಾನ್ – ಇಸ್ರೇಲ್ – ಅಮೆರಿಕ ಸಂಘರ್ಷ ಹಿನ್ನೆಲೆಯಲ್ಲಿ ದುಬೈನತ್ತಲೂ ಮಿಸೈಲ್ ದಾಳಿ ಆಗುತ್ತಿರುವುದರಿಂದ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಎಲ್ಲ ಜನರು ತೆರವಾಗುವಂತೆ ಸೂಚಿಸಲಾಗಿದೆ.
ಇರಾನ್ ಪಡೆಗಳು ಅಲ್ ದಫ್ರಾದಲ್ಲಿರುವ ಅಮೆರಿಕದ ಮಿಲಿಟರಿ ಬೇಸನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಅಬುಧಾಬಿ ಮತ್ತು ದುಬೈನಲ್ಲೂ ಸ್ಫೋಟದ ಘಟನೆಗಳು ನಡೆದಿವೆ. ದುಬೈನ ಬುರ್ಜ್ ಖಲೀಫಾ ಕಟ್ಟಡದ ಬಳಿಯಲ್ಲೂ ಸ್ಫೋಟದ ಸದ್ದು ಕೇಳಿದ್ದು ಜನರು ಆತಂಕಗೊಂಡಿದ್ದಾರೆ. ದುಬೈನಲ್ಲಿ ಕೇರಳ, ಕರ್ನಾಟಕದ ಅತಿ ಹೆಚ್ಚು ಜನರಿದ್ದಾರೆ. ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸ್ಫೋಟದ ಸದ್ದು ಕೇಳಿದ್ದು ಹೊಗೆ ಎದ್ದಿರುವ ದೃಶ್ಯವನ್ನು ಸಿಎನ್ಎನ್ ಟಿವಿ ವರದಿ ಮಾಡಿದೆ.
ಅಬುಧಾಬಿಯ ವಸತಿ ಪ್ರದೇಶಕ್ಕೂ ಇರಾನ್ ಕ್ಷಿಪಣಿ ದಾಳಿಯಾಗಿದ್ದರಿಂದ ಅಲ್ಲಿನ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ. ಇದರ ನಂತರ, ದುಬೈನಲ್ಲಿ ವಿಮಾನ ಸಂಚಾರ ರದ್ದುಪಡಿಸಿದ್ದು ಏರ್ ಡಿಫೆನ್ಸ್ ಸಿಸ್ಟಮ್ ಸಿದ್ಧವಾಗಿಸಲಾಗಿದೆ. ಇರಾನ್ ದಾಳಿಯನ್ನು ಯುಎಇ ಸಚಿವಾಲಯ, ಹೇಡಿತನದ್ದು ಮತ್ತು ಅಪಾಯಕಾರಿ ನಡೆ ಎಂದು ಹೇಳಿದೆ. ದುಬೈ ಬಳಿಯ ಪ್ರಸಿದ್ಧ ಪ್ರವಾಸಿ ತಾಣ ಪಾಮ್ ಐಲ್ಯಾಂಡ್ ಬಳಿಯೂ ಬೆಂಕಿ ಮತ್ತು ಹೊಗೆ ಎದ್ದಿದ್ದು ಕ್ಷಿಪಣಿ ದಾಳಿಯಾದ ಬಗ್ಗೆ ಹೇಳಲಾಗುತ್ತಿದೆ.
ಅಮೆರಿಕ ಮತ್ತು ಇಸ್ರೇಲಿ ಪಡೆಗಳ ದಾಳಿಯು ಇರಾನ್ ನಾಯಕ ಅಲಿ ಖಮೇನಿ ಮತ್ತು ಅಧ್ಯಕ್ಷ ಮಸೂದ್ ಪಜೆಶ್ಕಿಯಾನ್ ಅವರನ್ನು ಗುರಿಯಾಗಿಸಿದ್ದು ಇರಾನ್ ದೇಶದ ಉತ್ತರ ದಕ್ಷಿಣವೆಂದು ಎಲ್ಲ ಕಡೆಯೂ ದಾಳಿಯಾಗಿದೆ. ಬಾಲಕಿಯರ ಶಾಲೆಗೂ ಬಾಂಬ್ ದಾಳಿಯಾಗಿದ್ದು, ಅಲ್ಲಿ 57 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಒಟ್ಟು 85 ಮಂದಿ ಇರಾನ್ ಕಡೆಯಲ್ಲಿ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ಶನಿವಾರದ ಇಸ್ರೇಲ್ ದಾಳಿಯಿಂದ ಅಲಿ ಖಮೇನಿ ಸಾವಾಗಿದೆ ಎಂದು ಹೇಳಲಾಗುತ್ತಿದ್ದರೂ ಇರಾನ್ ಇದನ್ನು ದೃಢಪಡಿಸಿಲ್ಲ. ಇರಾನ್ ವಿದೇಶ ಮಂತ್ರಿ ಅಬ್ಬಾಸ್ ಅರಾಗ್ಚಿ, ಖಮೇನಿ ಇನ್ನೂ ಜೀವಂತ ಇದ್ದಾರೆ ಎಂದಿದ್ದಾರೆ. ಇರಾನ್ ಮೇಲಿನ ದಾಳಿಯನ್ನು ರಷ್ಯಾ ಮತ್ತು ಚೀನಾ ಖಂಡಿಸಿವೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm