ಬ್ರೇಕಿಂಗ್ ನ್ಯೂಸ್
07-02-26 10:53 pm HK News Desk ದೇಶ - ವಿದೇಶ
ಮುಂಬೈ, ಫೆ.7: ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಬಿಜೆಪಿ ಸದಸ್ಯೆ ರಿತು ತಾವ್ಡೆ ಅವರು ಮುಂಬೈನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 25 ವರ್ಷಗಳ ಶಿವಸೇನೆ ಅಧಿಪತ್ಯ ಬದಿಗಿಟ್ಟು ಮೊದಲ ಬಾರಿಗೆ ಬಿಜೆಪಿ ಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಘಾಟ್ಕೋಪರ್ ವಾರ್ಡ್ ಕಾರ್ಪೊರೇಟರ್ ಆಗಿರುವ ರಿತು ತಾವ್ಡೆ ಈ ಹಿಂದೆ ಮುಂಬೈ ಪಾಲಿಕೆಯಲ್ಲಿ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಿವಸೇನೆಯ (ಶಿಂಧೆ ಬಣ) ಸಂಜಯ್ ಶಂಕರ್ ಘಾಡಿ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇವರು ವಾರ್ಡ್ ಸಂಖ್ಯೆ 5 ರಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು.
ಉಪ ಮೇಯರ್ ಸ್ಥಾನವನ್ನು ಶಿವಸೇನೆ ಶಿಂಧೆ ಬಣವು ತನ್ನ ನಾಲ್ವರು ಕಾರ್ಪೊರೇಟರ್ಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿದೆ. ಸಂಜಯ್ ಘಾಡಿ ಮೊದಲ 15 ತಿಂಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ.
2022ರಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಾಗ, ಮುಂಬೈನಲ್ಲಿ ಏಕನಾಥ್ ಶಿಂಧೆ ಪರವಾಗಿ ನಿಂತ ಪ್ರಮುಖ ನಾಯಕರಲ್ಲಿ ಸಂಜಯ್ ಘಾಡಿ ಒಬ್ಬರಾಗಿದ್ದರು. ಮೈತ್ರಿ ಒಪ್ಪಂದದಂತೆ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) ಅಧಿಕಾರ ಹಂಚಿಕೊಂಡಿವೆ.
227 ಸದಸ್ಯ ಬಲದ ಮುಂಬೈ ಪಾಲಿಕೆಗೆ ಜನವರಿ 15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶಿವಸೇನೆ ಶಿಂಧೆ ಬಣವು 29 ಸ್ಥಾನಗಳನ್ನು ಪಡೆದಿದ್ದು ಮೈತ್ರಿಕೂಟ 118 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿತ್ತು. 1997ರಿಂದ ನಿರಂತರ ಅಧಿಕಾರದಲ್ಲಿದ್ದ ಶಿವಸೇನೆ 65 ಸ್ಥಾನಗಳನ್ನು ಪಡೆದಿತ್ತು. ಇವರ ಮೈತ್ರಿ ಪಕ್ಷಗಳಾದ ಎಂಎನ್ಎಸ್ 6 ಮತ್ತು ಎನ್ ಸಿಪಿ ಒಂದು ಸ್ಥಾನ ಪಡೆದಿತ್ತು. ಕಾಂಗ್ರೆಸ್ 24, ಎಐಎಂಐಎಂ ಎಂಟು, ಎನ್ ಸಿಪಿ (ಅಜಿತ್ ಬಣ) ಮೂರು ಹಾಗೂ ಸಮಾಜವಾದಿ ಪಾರ್ಟಿ ಎರಡು ಸ್ಥಾನ ಗಳಿಸಿದ್ದವು.
ಬೃಹನ್ಮುಂಬಯಿ ಮಹಾನಗರ ಪಾಲಿಕೆ ದೇಶದ ಶ್ರೀಮಂತ ಪಾಲಿಕೆಗಳಲ್ಲಿ ಒಂದಾಗಿದ್ದು ಏಳು ವರ್ಷಗಳ ಬಳಿಕ ಚುನಾವಣೆ ಆಗಿತ್ತು. 2022ರಲ್ಲಿ ಅವಧಿ ಮುಗಿದ ಬಳಿಕ ಪಾಲಿಕೆಗೆ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಪಾಲಿಕೆಯ 2025-26ರ ಬಜೆಟ್ ಮೊತ್ತ 74 ಸಾವಿರ ಕೋಟಿಯಾಗಿತ್ತು.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am