ಬ್ರೇಕಿಂಗ್ ನ್ಯೂಸ್
11-12-25 04:24 pm HK News Desk ದೇಶ - ವಿದೇಶ
ನವದೆಹಲಿ, ಡಿ.11 : ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಇದೇ 2025 ಸೆಪ್ಟಂಬರ್ 17ಕ್ಕೆ ಮೋದಿಯವರಿಗೆ 75 ವರ್ಷ ತುಂಬಿತ್ತು. ಈ ಬಗ್ಗೆ ಆರೆಸ್ಸೆಸ್ ನಿರ್ಧರಿಸುತ್ತದೆ ಎನ್ನುವ ಊಹಾಪೋಹಗಳ ನಡುವೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಆ ವಿಚಾರದಲ್ಲಿ ಆರೆಸ್ಸೆಸ್ ಪಾತ್ರವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಆರೆಸ್ಸೆಸ್ ದೃಷ್ಟಿಕೋನ ಮತ್ತು ಮುಂದಿನ ದಾರಿ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋಹನ್ ಭಾಗವತ್, ನರೇಂದ್ರ ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವುದನ್ನು ಖುದ್ದು ಮೋದಿಯವರು ಮತ್ತು ಬಿಜೆಪಿ ನಿರ್ಧರಿಸಬೇಕೇ ವಿನಾ ಇದರಲ್ಲಿ ಸಂಘದ ಪಾತ್ರವೇನೂ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ಮಾತೃ ಸಂಘಟನೆ ಎಂದೇ ಗುರುತಿಸಲ್ಪಡುವ ಆರ್ಎಸ್ಎಸ್, ಬಿಜೆಪಿಯ ಎಲ್ಲಾ ಪ್ರಮುಖ ನಿರ್ಣಯಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನರೇಂದ್ರ ಮೋದಿಗೆ ಉತ್ತರಾಧಿಕಾರಿ ವಿಚಾರ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರ, ಸಂಘದಲ್ಲಿ ಚರ್ಚೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು.
ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ, ಆರ್ಎಸ್ಎಸ್ ಮುಖ್ಯಸ್ಥರಿಗೆ ವಾರದಲ್ಲಿ ಇದು ಎರಡನೇ ಬಾರಿ ಎದುರಾಗಿತ್ತು. ಇದಕ್ಕೆ, ಬಹಿರಂಗವಾಗಿ ಮೋಹನ್ ಭಾಗವತ್ ಉತ್ತರ ನೀಡಲು ಹೋಗಿರಲಿಲ್ಲ. 75 ವರ್ಷ ತುಂಬಿದವರು, ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯಬೇಕು ಎನ್ನುವ ಆಂತರಿಕ ನಿಯಮ ಬಿಜೆಪಿಯಲ್ಲಿತ್ತು.
ನರೇಂದ್ರ ಮೋದಿಯವರ ನಂತರ ಯಾರು ಎನ್ನುವ ಪ್ರಶ್ನೆಗೆ, ನಾನು ಅಥವಾ ರಾಷ್ಟ್ರೀಯ ಸ್ವಯಂಸೇವಕ ಸಂಘ ಉತ್ತರಿಸಲು ಸಾಧ್ಯವಿಲ್ಲ. ಅದನ್ನು, ಖುದ್ದು ಮೋದಿ ಮತ್ತು ಬಿಜೆಪಿಯವರೇ ನಿರ್ಧರಿಸಬೇಕು. ನೂತನವಾಗಿ ಆಯ್ಕೆಯಾಗುವವರಿಗೆ ನಾನು ಕೇವಲ ಶುಭ ಹಾರೈಸಬಲ್ಲೆ ಎಂದು ಮೋಹನ್ ಭಾಗವತ್ ಉತ್ತರವನ್ನು ಕೊಟ್ಟಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ, 75 ವರ್ಷ ತುಂಬಿದವರು, ಇತರರಿಗೆ ಅವಕಾಶವನ್ನು ಮಾಡಿಕೊಡಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 75 ವರ್ಷ ತುಂಬಿದವರು ನಿವೃತ್ತಿ ಆಗಬೇಕೆಂದು ನಾನು ಎಂದೂ ಹೇಳಿರಲಿಲ್ಲ ಎಂದು ಮೋಹನ್ ಭಾಗವತ್ ಆಬಳಿಕ ಸ್ಪಷ್ಟ ಪಡಿಸಿದ್ದರು. ಭಾಗವತ್ ಮತ್ತು ಮೋದಿ ಇಬ್ಬರೂ ಒಂದೇ ವಯಸ್ಸಿನವರು ಎನ್ನುವುದು ವಿಶೇಷ.
Debate has resurfaced over who will succeed Prime Minister Narendra Modi, especially as he will turn 75 on September 17, 2025. Amid speculation that the Rashtriya Swayamsevak Sangh (RSS) would decide his successor, RSS chief Dr. Mohan Bhagwat has issued a clear clarification stating that the Sangh has no role in this matter.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 08:58 pm
HK News Staffer
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm