ಬ್ರೇಕಿಂಗ್ ನ್ಯೂಸ್
28-10-25 10:23 pm HK News Desk ದೇಶ - ವಿದೇಶ
ನವದೆಹಲಿ, ಅ.28 : ಅಬುಧಾಬಿಯಲ್ಲಿ ನೆಲೆಸಿರುವ ಭಾರತ ಮೂಲದ 29 ವರ್ಷದ ಯುವಕ ಅನಿಲಕುಮಾರ್ ಬೊಲ್ಲ ಅವರು 100 ಮಿಲಿಯನ್ ದಿರ್ಹಾಮ್ಗಳ (ಸುಮಾರು 240 ಕೋ.ರೂ.) ಯುಎಇಯ ಈವರೆಗಿನ ಅತ್ಯಂತ ದೊಡ್ಡ ಮೊತ್ತದ ಲಾಟರಿ ಗೆಲ್ಲುವ ಮೂಲಕ ಒಂದೇ ಬಾರಿಗೆ ಶತ ಕೋಟಿಪತಿಗಳ ಸಾಲಿಗೆ ಸೇರಿದ್ದಾರೆ.
ಬೊಲ್ಲ ಕಳೆದ ವಾರ ನಡೆದ 23ನೇ ಅದೃಷ್ಟ ಡ್ರಾದಲ್ಲಿ ಎಲ್ಲ ಏಳೂ ಅಂಕಿಗಳನ್ನು ಸರಿಯಾಗಿ ಊಹಿಸುವ ಮೂಲಕ 88 ಲಕ್ಷ ಟಿಕೆಟ್ಗಳ ಪೈಕಿ ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದಾರೆ ಎಂದು ದುಬೈನ ಖಲೀಜ್ ಟೈಮ್ಸ್ ವರದಿ ಮಾಡಿದೆ.
ತಾನು ಸ್ವಯಂಚಾಲಿತವಾಗಿ ಅಂಕಿಗಳ ಸಂಯೋಜನೆಯನ್ನು ಸೃಷ್ಟಿಸುವ ಈಜಿ ಪಿಕ್ ಆಯ್ಕೆಯನ್ನು ಬಳಸಿಕೊಂಡು ಬಹುಮಾನಿತ ಟಿಕೆಟ್ ಖರೀದಿಸಿದ್ದೆ. ಆದಾಗ್ಯೂ ತನ್ನ ತಾಯಿಯ ಹುಟ್ಟುಹಬ್ಬವನ್ನು ಗೌರವಿಸಲು ಉದ್ದೇಶಪೂರ್ವಕವಾಗಿ ಅವರ ಜನ್ಮದಿನಾಂಕದ 11ರ ಸಂಖ್ಯೆಯನ್ನು ಕೊನೆಯ ನಂಬರ್ ಆಗಿ ಆಯ್ಕೆ ಮಾಡಿಕೊಂಡಿದ್ದೆ ಎಂದು ಅನಿಕ್ ಕುಮಾರ್ ಹೇಳಿದ್ದಾರೆ. ಗೆಲುವಿನ ಬಳಿಕ ಬೊಲ್ಲ ತನ್ನ ಹೆತ್ತವರ ಕನಸುಗಳನ್ನು ನನಸಾಗಿಸಲು, ಅವರನ್ನು ಯುಎಇಗೆ ಕರೆತರಲು ಮತ್ತು ಗೆದ್ದ ಹಣದಲ್ಲಿ ಒಂದು ಭಾಗವನ್ನು ದಾನ ಮಾಡಲು ಯೋಜಿಸಿರುವುದಾಗಿ ತಿಳಿಸಿದರು.
ಯುಎಇಯ ಲಾಟರಿ ಇತಿಹಾಸದಲ್ಲಿಯೇ 100 ಮಿಲಿಯನ್ ದಿರ್ಹಾಮ್ಗಳ ಬಹುಮಾನವನ್ನು ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬೊಲ್ಲ ಪಾತ್ರರಾಗಿದ್ದಾರೆ. ಯುಎಇ ಲಾಟರಿ ತಂಡದಿಂದ ತನ್ನ ಜೀವನವನ್ನೇ ಬದಲಿಸುವ ಕರೆಯನ್ನು ಸ್ವೀಕರಿಸಿದಾಗ ಬೊಲ್ಲ ತನ್ನ ಮನೆಯಲ್ಲಿದ್ದು, ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಲಾಟರಿ ಆರಂಭಗೊಂಡಾಗಿನಿಂದಲೂ ನಿಷ್ಠೆಯಿಂದ ಟಿಕೆಟ್ ಖರೀದಿಸುತ್ತಿದ್ದ ಬೊಲ್ಲ, ಸುದ್ದಿಯನ್ನು ಕೇಳಿದಾಗ ತಾನು ಸಂಪೂರ್ಣ ಆಘಾತಗೊಂಡಿದ್ದೆ, ಇಷ್ಟೊಂದು ಹಣವನ್ನು ಏನು ಮಾಡುವುದೆಂದು ಅಚ್ಚರಿಯಾಗಿದೆ ಎಂದಿದ್ದಾರೆ.
Anil Kumar Bolla, a 29-year-old Indian-origin man living in Abu Dhabi, has become an instant multimillionaire after winning the UAE’s largest-ever lottery jackpot — a whopping 100 million dirhams (approximately ₹240 crore).
09-01-26 04:42 pm
Bangalore Correspondent
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ...
09-01-26 02:05 pm
ಕನಕಪುರ ತಾಲೂಕಿನಲ್ಲಿ 63 ಅಕ್ರಮ ಲೇಔಟ್, 28 ಪಿಜಿಗಳ...
08-01-26 11:06 pm
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
09-01-26 08:30 pm
HK News Desk
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
ಅಧಿಕಾರಕ್ಕಾಗಿ ಶಿವಸೇನೆ ಹೊರಗಿಟ್ಟು ಬಿಜೆಪಿ - ಕಾಂಗ್...
07-01-26 09:37 pm
09-01-26 09:18 pm
Mangalore Correspondent
ಉದ್ಯೋಗ ಖಾತ್ರಿ ಯೋಜನೆಯನ್ನೇ ಮೋದಿ ಕೊಂದಾಕಿದ್ದಾರೆ,...
09-01-26 05:47 pm
ಪಿಎಂ ಕೇರ್ ಫಂಡ್ ಹೆಸರಲ್ಲಿ ಖಾಸಗಿ ಟ್ರಸ್ಟಿಗೆ ಸಾವಿರ...
09-01-26 03:21 pm
ಮಾನವ –ಪ್ರಾಣಿ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್, 1926...
09-01-26 01:15 pm
ಜ.11 ರಂದು ಕೊಡಿಯಾಲದಲ್ಲಿ ಸುಧೀಂದ್ರ ತೀರ್ಥ ಜನ್ಮಶತಮ...
08-01-26 08:48 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm