ಬ್ರೇಕಿಂಗ್ ನ್ಯೂಸ್
30-09-25 04:08 pm HK News Desk ದೇಶ - ವಿದೇಶ
ಅಜ್ಮೀರ್, ಸೆ.30 : ಫಸ್ಟ್ ನೈಟ್ ದಿನ ಹೆಂಡತಿ ಜೊತೆಗೆ ಹಾಸಿಗೆ ಹಂಚಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಮದುಮಗನಿಗೆ ಆಘಾತ ಆಗಿದೆ. ಅದೇ ರಾತ್ರಿ ನವವಧು, ಗಂಡನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣದ ಜೊತೆ ಪರಾರಿ ಆಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ವಿಷಯ ತಿಳಿದು ಮನೆಯವರೆಲ್ಲ ಆಘಾತಕ್ಕೆ ಒಳಗಾಗಿದ್ದು, ಪೊಲೀಸ್ ದೂರು ನೀಡಿದ್ದಾರೆ.
ರಾಜಸ್ಥಾನದ ಅಜ್ಮೀರ್ ಬಳಿಯ ಕಿಶನ್ಗಂಜ್ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯುವಕನೊಬ್ಬ ಆಗ್ರಾ ಮೂಲದ ಯುವತಿ ಜೊತೆ ಮದುವೆ ಆಗಿದ್ದ. ಮದುವೆಯಾದ ರಾತ್ರಿ ಫಸ್ಟ್ನೈಟ್ಗೆ ಕೊಠಡಿ ಸಿಂಗಾರಗೊಂಡಿತ್ತು. ಕೊಠಡಿ ಶೃಂಗರಿಸಿದ್ದನ್ನು ನೋಡಿದ ಯುವತಿ, ನಮ್ಮ ಕಡೆ ಈ ರೀತಿಯ ಫಸ್ಟ್ ನೈಟ್ ಸಂಪ್ರದಾಯವಿಲ್ಲ, ಇಷ್ಟೊಂದು ಅರ್ಜೆಂಟ್ ಮಾಡಲ್ಲ ಎಂದಿದ್ದಾಳೆ. ಇದನ್ನು ಮದುಮಗ ಮನೆಯವರಿಗೂ ತಿಳಿಸಿದ್ದು ಸಂಪ್ರದಾಯ ಇಲ್ಲ ಎಂದಿದ್ದಕ್ಕೆ ಸರಿ ಎಂದು ಸುಮ್ಮನಿದ್ದರು. ಸರಿ ರಾತ್ರಿ ಆಗಿದ್ದರಿಂದ ಎಲ್ಲರೂ ಮಲಗಿದ್ದರು. ಆದರೆ ನಸುಕಿನ ಮೂರು ಗಂಟೆ ಸುಮಾರಿಗೆ ಮದುಮಗ ಬಾಯಾರಿಕೆಯಿಂದ ಎಚ್ಚರಗೊಂಡಾಗ ಮದುಮಗಳು ಇರಲಿಲ್ಲ. ಇದರಿಂದ ಅನುಮಾನಗೊಂಡ ಮದುಮಗ, ಎಲ್ಲರನ್ನೂ ಎಬ್ಬಿಸಿ ಹುಡುಕಾಡಿದ್ದಾನೆ. ಕೊನೆಗೆ ಆಕೆ ಅಲ್ಲಿಂದ ಪರಾರಿ ಆಗಿರೋದು ತಿಳಿದುಬಂದಿದೆ. ಮನೆಯಿಂದ ತೆರಳುವಾಗ, ಬೀರುವಿನಲ್ಲಿದ್ದ ಬಂಗಾರ ಮತ್ತು ಹಣವನ್ನೆಲ್ಲ ಕದ್ದು ಓಡಿದ್ದಾಳೆ.
ಇದರಿಂದ ಮತ್ತಷ್ಟು ಗಾಬರಿಯಾದ ಮದುಮಗ ಹಾಗೂ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ರೀತಿಯ ಪ್ರಕರಣ ಉತ್ತರ ಭಾರತದಲ್ಲಿ ಬಹಳಷ್ಟು ನಡೆಯುತ್ತಿದ್ದು ಜನರನ್ನು ಮೋಸ ಮಾಡುತ್ತಿದ್ದಾರೆ. ಇವರ ಮದುವೆಗೂ ಬ್ರೋಕರ್ ಒಬ್ಬ ಬಂದಿದ್ದು ಆತನಿಗೆ ಮದುಮಗ 2 ಲಕ್ಷ ಹಣ ನೀಡಿದ್ದ. ಮೋಸದ ಜಾಲದಲ್ಲಿ ಈತನೂ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.
In a bizarre incident from Kishanganj near Ajmer, Rajasthan, a newlywed bride fled her husband’s house on the wedding night, stealing gold ornaments and cash. The groom, who discovered her missing around 3 a.m., raised alarm only to find she had escaped. The bride had earlier remarked that in her community, “first night” traditions were not urgent, which aroused no suspicion.
02-10-25 03:50 pm
Bangalore Correspondent
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
02-10-25 03:45 pm
HK News Desk
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
02-10-25 11:05 pm
Mangalore Correspondent
Illegal Slaughterhouse in Mangalore: ಬೆನ್ನು ಬ...
02-10-25 10:43 pm
D.K. Shivakumar, Mangaluru Dasara: ದೇವರೇ ನನ್ನ...
02-10-25 11:43 am
Mangalore, Pilinalike 2025: ಪಿಲಿನಲಿಕೆ ಉತ್ಸವಕ್...
01-10-25 11:00 pm
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm