ಬ್ರೇಕಿಂಗ್ ನ್ಯೂಸ್
30-09-25 04:08 pm HK News Desk ದೇಶ - ವಿದೇಶ
ಅಜ್ಮೀರ್, ಸೆ.30 : ಫಸ್ಟ್ ನೈಟ್ ದಿನ ಹೆಂಡತಿ ಜೊತೆಗೆ ಹಾಸಿಗೆ ಹಂಚಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಮದುಮಗನಿಗೆ ಆಘಾತ ಆಗಿದೆ. ಅದೇ ರಾತ್ರಿ ನವವಧು, ಗಂಡನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣದ ಜೊತೆ ಪರಾರಿ ಆಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ವಿಷಯ ತಿಳಿದು ಮನೆಯವರೆಲ್ಲ ಆಘಾತಕ್ಕೆ ಒಳಗಾಗಿದ್ದು, ಪೊಲೀಸ್ ದೂರು ನೀಡಿದ್ದಾರೆ.
ರಾಜಸ್ಥಾನದ ಅಜ್ಮೀರ್ ಬಳಿಯ ಕಿಶನ್ಗಂಜ್ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯುವಕನೊಬ್ಬ ಆಗ್ರಾ ಮೂಲದ ಯುವತಿ ಜೊತೆ ಮದುವೆ ಆಗಿದ್ದ. ಮದುವೆಯಾದ ರಾತ್ರಿ ಫಸ್ಟ್ನೈಟ್ಗೆ ಕೊಠಡಿ ಸಿಂಗಾರಗೊಂಡಿತ್ತು. ಕೊಠಡಿ ಶೃಂಗರಿಸಿದ್ದನ್ನು ನೋಡಿದ ಯುವತಿ, ನಮ್ಮ ಕಡೆ ಈ ರೀತಿಯ ಫಸ್ಟ್ ನೈಟ್ ಸಂಪ್ರದಾಯವಿಲ್ಲ, ಇಷ್ಟೊಂದು ಅರ್ಜೆಂಟ್ ಮಾಡಲ್ಲ ಎಂದಿದ್ದಾಳೆ. ಇದನ್ನು ಮದುಮಗ ಮನೆಯವರಿಗೂ ತಿಳಿಸಿದ್ದು ಸಂಪ್ರದಾಯ ಇಲ್ಲ ಎಂದಿದ್ದಕ್ಕೆ ಸರಿ ಎಂದು ಸುಮ್ಮನಿದ್ದರು. ಸರಿ ರಾತ್ರಿ ಆಗಿದ್ದರಿಂದ ಎಲ್ಲರೂ ಮಲಗಿದ್ದರು. ಆದರೆ ನಸುಕಿನ ಮೂರು ಗಂಟೆ ಸುಮಾರಿಗೆ ಮದುಮಗ ಬಾಯಾರಿಕೆಯಿಂದ ಎಚ್ಚರಗೊಂಡಾಗ ಮದುಮಗಳು ಇರಲಿಲ್ಲ. ಇದರಿಂದ ಅನುಮಾನಗೊಂಡ ಮದುಮಗ, ಎಲ್ಲರನ್ನೂ ಎಬ್ಬಿಸಿ ಹುಡುಕಾಡಿದ್ದಾನೆ. ಕೊನೆಗೆ ಆಕೆ ಅಲ್ಲಿಂದ ಪರಾರಿ ಆಗಿರೋದು ತಿಳಿದುಬಂದಿದೆ. ಮನೆಯಿಂದ ತೆರಳುವಾಗ, ಬೀರುವಿನಲ್ಲಿದ್ದ ಬಂಗಾರ ಮತ್ತು ಹಣವನ್ನೆಲ್ಲ ಕದ್ದು ಓಡಿದ್ದಾಳೆ.
ಇದರಿಂದ ಮತ್ತಷ್ಟು ಗಾಬರಿಯಾದ ಮದುಮಗ ಹಾಗೂ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ರೀತಿಯ ಪ್ರಕರಣ ಉತ್ತರ ಭಾರತದಲ್ಲಿ ಬಹಳಷ್ಟು ನಡೆಯುತ್ತಿದ್ದು ಜನರನ್ನು ಮೋಸ ಮಾಡುತ್ತಿದ್ದಾರೆ. ಇವರ ಮದುವೆಗೂ ಬ್ರೋಕರ್ ಒಬ್ಬ ಬಂದಿದ್ದು ಆತನಿಗೆ ಮದುಮಗ 2 ಲಕ್ಷ ಹಣ ನೀಡಿದ್ದ. ಮೋಸದ ಜಾಲದಲ್ಲಿ ಈತನೂ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.
In a bizarre incident from Kishanganj near Ajmer, Rajasthan, a newlywed bride fled her husband’s house on the wedding night, stealing gold ornaments and cash. The groom, who discovered her missing around 3 a.m., raised alarm only to find she had escaped. The bride had earlier remarked that in her community, “first night” traditions were not urgent, which aroused no suspicion.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm