ಬ್ರೇಕಿಂಗ್ ನ್ಯೂಸ್
14-04-25 05:38 pm HK News Desk ದೇಶ - ವಿದೇಶ
ನವದೆಹಲಿ, ಎ.14 : ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 1400 ಕೋಟಿ ರೂ. ವಂಚನೆ ಎಸಗಿ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಭಾರತದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ಬೆಲ್ಜಿಯಂ ಪೊಲೀಸರು ಚೋಕ್ಸಿ ಅವರನ್ನು ಬಂಧಿಸಿದ್ದಾರೆ.
ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಗೀತಾಂಜಲಿ ಗ್ರೂಪ್ನ ಮಾಲೀಕರಾಗಿದ್ದು 2011ರಿಂದ ಸಾಲದ ಹೆಸರಿನಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿಂದ ನಿರಂತರ ಸಾಲ ಪಡೆದು ವಂಚನೆ ಎಸಗಿದ್ದರು. 2018ರಲ್ಲಿ 13 ಸಾವಿರ ಕೋಟಿ ಸಾಲದ ವಿಚಾರ ಹಗರಣದ ರೂಪ ಪಡೆಯುತ್ತಿದ್ದಂತೆ ದೇಶದಿಂದ ಪಲಾಯನ ಮಾಡಿದ್ದರು. ಅವರನ್ನು ಬಂಧನ ಮಾಡಬೇಕೆಂದು ಬಹಳಷ್ಟು ಪ್ರಯತ್ನಗಳು ನಡೆದಿದ್ದವು. ಇದೀಗ ಮುಂಬೈ ನ್ಯಾಯಾಲಯವು 2018 ಮೇ 23 ಮತ್ತು 2021 ಜೂನ್ 15 ರಂದು ಹೊರಡಿಸಿದ ಎರಡು ಅರೆಸ್ಟ್ ವಾರಂಟ್ ಆಧಾರದಲ್ಲಿ ಬೆಲ್ಜಿಯಂ ಪೊಲೀಸರು ಚೋಕ್ಸಿಯನ್ನು ಬಂಧಿಸಿದ್ದಾರೆ.
ವಿದೇಶಕ್ಕೆ ಹಾರಿದ್ದ 65 ವರ್ಷದ ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾ ದೇಶಕ್ಕೆ ತೆರಳಿ, ಅಲ್ಲಿನ ಪೌರತ್ವವನ್ನು ಪಡೆದಿದ್ದರು. ಭಾರತದಲ್ಲಿ ನಡೆದ ಬ್ಯಾಂಕ್ ಹಗರಣದಲ್ಲಿ ಚೋಕ್ಸಿ ಜೊತೆಗೆ ನೀರವ್ ಮೋದಿ ಕೂಡ ಆರೋಪಿಯಾಗಿದ್ದ. ಆತ ಲಂಡನ್ನಲ್ಲಿ ತಲೆಮರೆಸಿಕೊಂಡಿದ್ದಾನೆ. ಚೋಕ್ಸಿ ಬೆಲ್ಜಿಯಂ ತಲುಪುತ್ತಲೇ ಸಿಬಿಐ ಮತ್ತು ಇಡಿ ಅಧಿಕಾರಿಗಳು ಚೋಕ್ಸಿ ಗಡೀಪಾರು ಕೋರಿ 3 ತಿಂಗಳ ಹಿಂದೆ ಬೆಲ್ಜಿಯಂ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಬೆಲ್ಜಿಯಂನಲ್ಲಿ ಕುಣಿಕೆ ಬಿಗಿಯಾಗುತ್ತಿರುವುದನ್ನು ತಿಳಿದ ಚೋಕ್ಸಿ ಇದರ ನಡುವೆ ಸ್ವಿಟ್ಜರ್ಲೆಂಡ್ಗೆ ಪಲಾಯನ ಮಾಡಲು ಯೋಜಿಸುತ್ತಿದ್ದ. ಆದರೆ ಭಾರತೀಯ ಸಂಸ್ಥೆಗಳ ಕೋರಿಕೆ ಮೇರೆಗೆ, ಬೆಲ್ಜಿಯಂ ಆಡಳಿತವು ಅವರನ್ನು ಬಂಧಿಸಿತು.
ಬೆಲ್ಜಿಯಂನಲ್ಲಿ ಬಂಧನಕ್ಕೆ ನಂತರ ಮೆಹುಲ್ ಚೋಕ್ಸಿ ಅನಾರೋಗ್ಯದ ಕಾರಣ ಅಲ್ಲಿನ ಕೋರ್ಟಿನಲ್ಲಿ ಜಾಮೀನು ಕೋರಿದ್ದಾರೆ. ಚೋಕ್ಸಿ ಚಿಕಿತ್ಸೆಗಾಗಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ಬೆಲ್ಜಿಯಂಗೆ ಬಂದಿದ್ದರು. ಪತ್ನಿ ಪ್ರೀತಿ ಚೋಕ್ಸಿ ಜೊತೆಗೆ ವಾಸಿಸುತ್ತಿದ್ದರು ಎಂದು ಚೋಕ್ಸಿ ಪರ ವಕೀಲರು ತಿಳಿಸಿದ್ದಾರೆ.
Fugitive diamond trader Mehul Choksi, wanted in connection with the Punjab National Bank (PNB) loan fraud case, has been arrested by Belgian authorities. The arrest, made at the request of Indian agencies including the Central Bureau of Investigation (CBI) and the Enforcement Directorate (ED), follows non-bailable
15-06-25 09:29 pm
Bangalore Correspondent
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
15-06-25 10:29 pm
HK News Desk
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
15-06-25 11:04 pm
Mangalore Correspondent
Kadri Kaibattal, Mangalore Rain, Landslide: ಕ...
15-06-25 09:50 pm
Mangalore Rain, School Holiday: ರೆಡ್ ಅಲರ್ಟ್ ಮ...
15-06-25 09:35 pm
Mangalore Heavy Rains, Dinesh Gundu Rao: ಮಳೆ...
15-06-25 03:20 pm
Mangalore Rain, Compound Wall Collapsed Video...
15-06-25 12:12 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm