ಬ್ರೇಕಿಂಗ್ ನ್ಯೂಸ್
10-03-25 10:17 pm HK News Desk ದೇಶ - ವಿದೇಶ
ವಾಷಿಂಗ್ಟನ್, ಮಾ 10: ಅಮೆರಿಕದ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ 20 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿಯೋರ್ವಳು, ಪುಂಟಾ ಕಾನಾ ಬೀಚ್ನಲ್ಲಿ ನಾಪತ್ತೆಯಾಗಿದ್ದಾಳೆ. ಸ್ಪ್ರಿಂಗ್ ಬ್ರೇಕ್ ಪ್ರವಾಸಕ್ಕೆ ತೆರಳಿದ್ದ ವರ್ಜಿನಿಯಾದ ಆಶ್ಬರ್ನ್ನ ಸುದೀಕ್ಷಾ ಕೋಣಂಕಿ, ಪುಂಟಾ ಕಾನಾದ ಬೀಚ್ನಲ್ಲಿ ಕೊನೆಯ ಬಾರಿಗೆ ಕಂದು ಬಣ್ಣದ ಬಿಕನಿ ತೊಟ್ಟು ನಡೆಯುತ್ತಿದ್ದುದನ್ನು ಸ್ಥಳೀಯರು ನೋಡಿದ್ದಾಗಿ ಮೂಲಗಳು ಖಚಿತಪಡಿಸಿವೆ.
ಕಳೆದ ಮಾರ್ಚ್ 6 ಅಂದ್ರೆ ಗುರುವಾರ ಬೆಳಿಗ್ಗೆ 4:50ಕ್ಕೆ ರಿಯು ರಿಪಬ್ಲಿಕಾ ರೆಸಾರ್ಟ್ ಬೀಚ್ನಲ್ಲಿ, ಸುದೀಕ್ಷಾ ಕೊನೆಯದಾಗಿ ಕಾಣಿಸಿಕೊಂಡಿದ್ದಳು.ಆಕೆಯನ್ನು ಕಂದು ಬಣ್ಣದ ಬಿಕನಿ ತೊಟ್ಟು ಬೀಚ್ನಲ್ಲಿ ನಡೆದುಕೊಂಡು ಹೋಗಿದ್ದನ್ನು ಸ್ಥಳೀಯರು ನೋಡಿದ್ದರು. ಅದಾದ ಬಳಿಕ ಆಕೆ ನಾಪತ್ತೆಯಾಗಿದ್ದು, ಡೊಮಿನಿಕನ್ ರಿಪಬ್ಲಿಕ್ ಅಧಿಕಾರಿಗಳು ಸುದೀಕ್ಷಾಳಿಗಾಗಿ ಶೋಧ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ



"ಸುದೀಕ್ಷಾ ಸ್ಪ್ರಿಂಗ್ ಬ್ರೇಕ್ ಪ್ರವಾಸಕ್ಕೆಂದು ಪುಂಟಾ ಕಾನಾ ಬೀಚ್ಗೆ ತಮ್ಮ ಗೆಳೆಯರೊಂದಿಗೆ ಬಂದಿದ್ದರು. ಆದರೆ ಆಕೆ ಅಷ್ಟು ಬೆಳಗಿನ ಜಾವ ಏಕಾಂಗಿಯಾಗಿ ಬೀಚ್ಗೆ ಬಂದಿದ್ದೇಕೆ ಎಂಬುದು ಅಸ್ಪಷ್ಟವಾಗಿದ್ದು, ಆಕೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ.." ಎಂದು ಡೊಮೊನಿಕನ್ ರಿಪಬ್ಲಿಕನ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸುದೀಕ್ಷಾಳನ್ನ ಹುಡುಕಲು ಮತ್ತು ಸುರಕ್ಷಿತವಾಗಿ ಮನೆಗೆ ಕರೆತರಲು ನಾವು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಆಕೆಯ ಇರುವಿಕೆಯ ಬಗ್ಗೆ ಯಾರಿಗಾದರೂ ಮಾಹಿತಿ ಲಭ್ಯವಾದರೆ, ಲೌಡೌನ್ ಕೌಂಟಿ ಶೆರಿಫ್ ಕಚೇರಿಯನ್ನ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಅಮೆರಿಕದ ಪ್ರತಿಷ್ಠಿತ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ ಸುದೀಕ್ಷಾ, ಪುಂಟಾ ಕಾನಾದ ರೆಸಾರ್ಟ್ ಬೀಚ್ನಲ್ಲಿ ಪರಿಚಿತರಾದ ಹೊಸ ಗೆಳೆಯರೊಂದಿಗೆ ಬೆಳಗಿನ ಜಾವ 4 ಗಂಟೆಗೆ ಪಾರ್ಟಿ ಮಾಡಲೆಂದು ಬೀಚ್ಗೆ ತೆರಳಿದ್ದಳು ಎನ್ನಲಾಗಿದೆ.
ಸದ್ಯ ಮಗಳು ಕಾಣೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುದೀಕ್ಷಾಳ ತಂದೆ ಸುಬ್ಬರಾಯುಡು, "ವೈದ್ಯೆಯಾಗುವ ಕನಸು ಕಂಡಿದ್ದ ನನ್ನ ಮಗಳು ತುಂಬ ಒಳ್ಳೆಯವಳು. ಆಕೆ ಹೀಗೆ ದಿಢೀರ್ ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ನಲುಗಿಸಿದೆ. ಅಧಿಕಾರಿಗಳು ದಯವಿಟ್ಟು ನನ್ನ ಮಗಳನ್ನು ಹುಡುಕಿ ಕೊಡಬೇಕಾಗಿ ವಿನಂತಿಸುತ್ತೇನೆ.." ಎಂದು ಗದ್ಗದಿತರಾಗಿ ಹೇಳಿದ್ದಾರೆ.
A 20-year-old Indian-origin student, Sudiksha Konanki, has gone missing from a resort in the Dominican Republic. She was on a spring break trip with friends from the University of Pittsburgh, US, when she disappeared.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am