ಬ್ರೇಕಿಂಗ್ ನ್ಯೂಸ್
14-11-24 11:11 pm HK News Desk ದೇಶ - ವಿದೇಶ
ನವದೆಹಲಿ, ನ.15: ಭಾರತೀಯ ರೈಲ್ವೇ ಹೊಸ ಇತಿಹಾಸ ನಿರ್ಮಿಸಲು ಹೊರಟಿದೆ. ಇಲೆಕ್ಟ್ರಿಸಿಟಿ ಬೇಡ, ಡೀಸೆಲ್ ಕೂಡ ಬೇಡ. ಕೇವಲ ನೀರಿನಿಂದಲೇ ಸಂಚರಿಸಬಲ್ಲ ರೈಲನ್ನು ಚಾಲ್ತಿಗೆ ತರಲಿದೆ. ಹೌದು, ಭಾರತೀಯ ರೈಲ್ವೇಯಿಂದ ಮೊದಲ ಹೈಡ್ರೋಜನ್ ಟ್ರೈನ್ ಸೇವೆ ಆರಂಭಿಸಲಿದೆ. ಎಲ್ಲವೂ ಅಂದ್ಕೊಂಡ ರೀತಿಯಲ್ಲೇ ಆದಲ್ಲಿ ಇದೇ ಡಿಸೆಂಬರ್ ನಲ್ಲಿ ಹೊಸ ರೈಲು ಟ್ರಯಲ್ ರನ್ ಆರಂಭಿಸಲಿದೆ.
ಈ ರೈಲಿಗೆ ನೀರೇ ಇಂಧನ. ಇದು ಹೈಡ್ರೋಜನ್ ಪವರ್ ನಲ್ಲಿ ಸಾಗಬಲ್ಲ ಎಂಜಿನ್ ರೈಲಾಗಿದ್ದು ನೀರು ಹಾಗೂ ಬಿಸಿ ಹವೆ ಮೂಲಕ ಮುಂದೆ ಸಾಗಲಿದೆ. ವಿಶೇಷ ಅಂದರೆ ಇದರಿಂದ ಮಾಲಿನ್ಯ ಶೂನ್ಯವಾಗಿರುತ್ತದೆ. ಪರಿಸರ ಸ್ನೇಹಿ ಅಷ್ಟೇ ಅಲ್ಲ, ಡೀಸೆಲ್ ಎಂಜಿನ್ಗೆ ಹೋಲಿಸಿದರೆ ಶೇಕಡಾ 60 ರಷ್ಟು ಶಬ್ದವೂ ಕಡಿಮೆ. ಮೊದಲ ಹಂತದಲ್ಲಿ ದೇಶಾದ್ಯಂತ 35 ಹೈಡ್ರೋಜನ್ ರೈಲು ಸೇವೆ ಆರಂಭಿಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.
ನೀರಿನಲ್ಲಿ ಚಲಿಸುವ ರೈಲು ಅನ್ನೋ ಕಾರಣ ಇದರ ವೇಗದಲ್ಲಿ ರಾಜಿಯಿಲ್ಲ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಹೈಡ್ರೋಜನ್ ರೈಲು ಓಡಲಿದೆಯಂತೆ. ಒಂದು ಬಾರಿ ನೀರು ತುಂಬಿಸಿ ಪ್ರಯಾಣ ಆರಂಭಿಸಿದರೆ 1,000 ಕಿ.ಮೀ. ದೂರ ಕ್ರಮಿಸಲಿದೆ ಎನ್ನುವುದು ಲೆಕ್ಕಾಚಾರ. ನೀರು ತುಂಬಿಸುವುದು ಸವಾಲೇ ಅಲ್ಲ. ಹಾಗಾಗಿ ಅತಿ ಕಡಿಮೆ ವೆಚ್ಚದಲ್ಲಿ ರೈಲು ಓಡಲಿದ್ದು ಎಲ್ಲಾ ದೃಷ್ಟಿಯಿಂದಲೂ ಭಾರತೀಯ ಸಾರಿಗೆಯಲ್ಲಿ ಹೊಸ ಕ್ರಾಂತಿ ಮಾಡಲಿದೆ.
ಮೊದಲ ಹಂತದಲ್ಲಿ ಹೈಡ್ರೋಜನ್ ರೈಲು ಹರ್ಯಾಣದ ಜಿಂದ್-ಸೋನಿಪತ್ ನಡುವಿನ ಮಾರ್ಗದಲ್ಲಿ ಸಂಚರಿಸಲಿದೆ. 90 ಕಿಲೋಮೀಟರ್ ಉದ್ದಕ್ಕೆ ಸಂಚಾರ ಮಾಡಲಿದೆ. ಆರಂಭದಲ್ಲಿ ಡಾರ್ಜಲಿಂಗ್ ಹಿಮಾಲಯನ್ ರೈಲ್ವೇ, ನೀಲಗಿರಿ ಮೌಂಟೈನ್ ರೈಲ್ವೇ, ಕಾಲ್ಕಾ ಶಿಮ್ಲಾ ರೈಲ್ವೇ ಸೇರಿದಂತೆ ಹಲವು ಇಕೋ ಸೆನ್ಸೀಟೀವ್ ವಲಯದಲ್ಲಿ ರೈಲು ಸಂಚರಿಸಲಿದೆ. ಮಳೆ, ಬಿಸಿಲು ಸೇರಿದಂತೆ ಎಲ್ಲ ರೀತಿಯ ಹವಾಮಾನಗಳಲ್ಲೂ ಈ ರೈಲು ಓಡಿದರೆ, ಭಾರತದಲ್ಲಿ ಹೊಸ ಕ್ರಾಂತಿಯೇ ಆಗಲಿದೆ.
Indian Railways, one of the largest rail networks in the world, is all set to transform travel with a new, eco-friendly train that won’t need diesel or electricity.This upcoming “water-powered" hydrogen train will soon be hitting the tracks, showcasing the next step in rail transport for India.
22-08-26 03:01 pm
HK News Staffer
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm