ಬ್ರೇಕಿಂಗ್ ನ್ಯೂಸ್
07-12-20 08:59 pm Headline Karnataka News Network ದೇಶ - ವಿದೇಶ
ಪಣಜಿ, ಡಿ.7: ಹತ್ತು ದಿನಗಳ ಹಿಂದೆ ಪತನಗೊಂಡಿದ್ದ ಮಿಗ್ 29-ಕೆ ಜೆಟ್ ವಿಮಾನದ ಪೈಲಟ್ ಶವ ಗೋವಾ ಕರಾವಳಿಯಿಂದ 30 ಮೈಲ್ ದೂರದಲ್ಲಿ ಸಮುದ್ರದಾಳದಲ್ಲಿ ಪತ್ತೆಯಾಗಿದೆ.
ನಿರಂತರ ಕಾರ್ಯಾಚರಣೆಯ ಬಳಿಕ ಸಮುದ್ರ ಮಧ್ಯೆ 70 ಮೀಟರ್ ಆಳದಲ್ಲಿ ಪೈಲಟ್ ನಿಶಾಂತ್ ಸಿಂಗ್ ಶವ ಪತ್ತೆಯಾಗಿದೆ ಎಂದು ನೇವಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಷ್ಯಾ ಮೂಲದ ಮಿಗ್ -29 ಜೆಟ್ ವಿಮಾನ ಅರಬ್ಬೀ ಸಮುದ್ರದಲ್ಲಿ ಪ್ರಯೋಗಾರ್ಥ ಹಾರಾಟದ ವೇಳೆ ನ.26ರಂದು ಸಂಜೆ 5 ಗಂಟೆಗೆ ಪತನಗೊಂಡಿತ್ತು. ಐಎನ್ಎಸ್ ವಿಕ್ರಮಾದಿತ್ಯ ಹಡಗಿನಿಂದ ಮೇಲೇರಿದ್ದ ಜೆಟ್ ಪತನದಿಂದಾಗಿ ಕೂಡಲೇ ನೌಕಾಪಡೆಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು. ಒಬ್ಬ ಪೈಲಟ್ ಜೀವಂತ ಪತ್ತೆಯಾಗಿದ್ದರೆ, ಇನ್ನೊಬ್ಬ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ನಾಪತ್ತೆಯಾಗಿದ್ದರು. ನಿರಂತರ ಹುಡುಕಾಟದ ಹತ್ತು ದಿನಗಳ ಬಳಿಕ ನಿಶಾಂತ್ ಶವ ನೀರಿನ ಆಳದಲ್ಲಿ ಪತ್ತೆಯಾಗಿದ್ದು, ಗುರುತು ಸಿಗದ ಸ್ಥಿತಿಯಲ್ಲಿದೆ. ಹೀಗಾಗಿ ನಿಶಾಂತ್ ಸಿಂಗ್ ಕುಟುಂಬ ಡಿಎನ್ಎ ಪರೀಕ್ಷೆ ನಡೆಸಲು ಕೋರಿಕೊಂಡಿದೆ.
ಮಿಗ್ -29 ಜೆಟ್ ಎಲ್ಲ ಹವಾಮಾನಗಳಿಗೂ ಹೊಂದಿಕೊಳ್ಳುವ ಶಕ್ತಿಯಿರುವ ಫೈಟರ್ ವಿಮಾನ ಆಗಿದ್ದು ಹತ್ತು ವರ್ಷಗಳ ಹಿಂದೆ 42 ಮಿಗ್ ವಿಮಾನಗಳನ್ನು ರಷ್ಯಾದಿಂದ ತರಿಸಲಾಗಿತ್ತು. ಇವನ್ನು ನೌಕಾಪಡೆಯ ಐಎನ್ಎಸ್ ವಿಕ್ರಮಾದಿತ್ಯದ ಮೂಲಕ ಕಾರ್ಯಾಚರಣೆಗೆ ತೊಡಗಿಸಲಾಗಿದೆ. ಸದ್ಯ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ನಡುವಿನ ಜಂಟಿ ನೌಕಾ ಸಮರಾಭ್ಯಾಸದಲ್ಲಿ ವಿಕ್ರಮಾದಿತ್ಯ ಕಾರ್ಯಾಚರಣೆಯಲ್ಲಿದೆ.
Almost 12 days after the tragic crash of MiG-29K aircraft crash in the Arabian Sea, Indian Navy on Monday recovered the body of missing pilot Commander Nishant Singh on the seabed. The body was found 70 metres below water and 30 miles off the Goa coast.
06-10-25 05:27 pm
HK News Desk
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
06-10-25 07:21 pm
HK News Desk
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
06-10-25 07:19 pm
Mangalore Correspondent
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm