ಬ್ರೇಕಿಂಗ್ ನ್ಯೂಸ್
06-11-20 01:34 pm Headline Karnataka News Network ದೇಶ - ವಿದೇಶ
ನವದೆಹಲಿ, ನವೆಂಬರ್ 06: ಕೊರೊನಾ ವೈರಸ್ ಪುನುಗು ಬೆಕ್ಕಿನ ಜಾತಿಯ ಪ್ರಾಣಿಗಳಿಂದ ಹರಡುತ್ತಿದೆ ಎನ್ನುವ ಗುಮಾನಿ ವಿಜ್ಞಾನಿಗಳಲ್ಲಿದೆ. ಈಗಾಗ್ಲೇ ಸ್ಪೇನ್, ನೆದರ್ಲೇಂಡ್ ದೇಶಗಳಲ್ಲಿ ಲಕ್ಷಾಂತರ ಮುಂಗುಸಿ ಅಥವಾ ಪುನುಗು ಜಾತಿಯ ಅಲ್ಲಿನ ಜನ ಇಂಗ್ಲಿಷ್ ಭಾಷೆಯಲ್ಲಿ ಮಿಂಕ್ ಎಂದು ಕರೆಯುವ ಪ್ರಾಣಿಗಳನ್ನು ಕೊಂದು ಹಾಕಿದ್ದಾರೆ.
ಇದೇ ವೇಳೆ, ಯುರೋಪ್ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಮಿಂಕ್ ಪ್ರಾಣಿಗಳನ್ನು ಹೊಂದಿರುವ ಡೆನ್ಮಾರ್ಕ್ ತನ್ನ ದೇಶದಲ್ಲಿರುವ ಎಲ್ಲ ಪ್ರಾಣಿಗಳನ್ನು ಕೊಲ್ಲುವಂತೆ ಆದೇಶ ಮಾಡಿದೆ. ಅಲ್ಲಿ ಸರಿಸುಮಾರು 17 ಮಿಲಿಯನ್ ಮುಂಗುಸಿ ಜಾತಿಯ ಮಿಂಕ್ ಪ್ರಾಣಿಗಳಿದ್ದು ಅವುಗಳನ್ನು ಪೂರ್ತಿ ಕೊಂದು ಹಾಕುವುದೇ ಅಲ್ಲಿನ ಸರಕಾರಕ್ಕೆ ಚಿಂತೆಯಾಗಿದೆ.
17 ಮಿಲಿಯನ್ ಅಂದರೆ, ಸಾಮಾನ್ಯ ಲೆಕ್ಕದಲ್ಲಿ ಲೆಕ್ಕ ಹಾಕುವುದಾದರೆ 1.70 ಕೋಟಿ ಮಿಂಕ್ ಪ್ರಾಣಿಗಳಿದ್ದು, ಅವುಗಳೆಲ್ಲವನ್ನೂ ಕೊಲ್ಲಲು ಡೆನ್ಮಾರ್ಕ್ ಪ್ರಧಾನಿ ಮೀಟ್ ಪ್ರೆಡರಿಕ್ಸನ್ ಆದೇಶ ಮಾಡಿದ್ದಾರೆ. ಪ್ರತಿ ದಿನವೂ ಮಿಂಕ್ ಫಾರ್ಮ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಅದರ ಮಾಲೀಕರಿಗೆ ಕೊರೊನಾ ಸೋಂಕು ಕಂಡುಬರುತ್ತಿರುವುದನ್ನು ಅಲ್ಲಿನ ಸರಕಾರ ಪತ್ತೆ ಮಾಡಿದೆ. ಆದರೆ, ಸೋಂಕು ಮಾನವನಿಂದ ಪ್ರಾಣಿಗಳಿಗೆ ಹರಡಿದೆಯೇ ಅಥವಾ ಪ್ರಾಣಿಗಳ ಮೂಲಕ ಮಾನವನಿಗೆ ಹರಡುತ್ತಿದೆಯೇ ಎನ್ನುವುದು ದೃಢಪಟ್ಟಿಲ್ಲ.
ಪ್ರಾಣಿಗಳನ್ನು ತಪಾಸಣೆ ಮಾಡುವಾಗ ಅದರಲ್ಲೂ ಕೊರೊನಾ ವೈರಸ್ ಇರುವುದು ಕಂಡುಬಂದಿದೆ. ಹೀಗಾಗಿ ನಮ್ಮ ಜನರ ಹಿತವನ್ನು ಕಾಪಾಡುವುದು ಮುಖ್ಯ. ಆದ್ದರಿಂದ ಈ ಪ್ರಾಣಿಗಳನ್ನು ಕೊಂದು ಇನ್ನಿಲ್ಲವಾಗಿಸುವುದೇ ಸದ್ಯದ ದೊಡ್ಡ ಜವಾಬ್ದಾರಿ ಎಂದಿದ್ದಾರೆ ಅಲ್ಲಿನ ಪ್ರಧಾನಿ.
ಈ ನಡುವೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪ್ಯಾರಿಸ್ ಮೂಲದ ವಿಜ್ಞಾನಿಗಳು ಮಿಂಕ್ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸೋಂಕು ಹರಡುತ್ತಿದೆಯೇ ಅನ್ನುವ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ.
The world’s largest mink producer, Denmark, says it plans to cull more than 15 million of the animals, due to fears that a Covid-19 mutation moving from mink to humans could jeopardise future vaccines.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 11:19 am
Mangalore Correspondent
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm