ಬ್ರೇಕಿಂಗ್ ನ್ಯೂಸ್
31-10-20 09:44 pm Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 31: ನಾಯಿ ಮನುಷ್ಯನ ನಂಬಿಕಸ್ಥ ಪ್ರಾಣಿ ಅಂತಾರೆ. ಕೆಲವರಿಗಂತೂ ನಾಯಿಯೇ ಪ್ರಾಣ ಸ್ನೇಹಿತ. ಇಂಥಾ ನಾಯಿ ಮುಂಬೈನಲ್ಲೊಂದು ಮಹಿಳೆಯನ್ನು ಲೈಂಗಿಕ ಕಿರುಕುಳ ನೀಡಲು ಬಂದಿದ್ದ ಆಗಂತುಕನಿಂದ ಪಾರು ಮಾಡಿದ ಸುದ್ದಿ ಬಂದಿದೆ.
ಆಕೆ 33 ವರ್ಷದ ಮಹಿಳೆ. ಗಂಡ ಇತ್ತೀಚೆಗೆ ತೀರಿಕೊಂಡಿದ್ದರಿಂದ ಏಳು ವರ್ಷದ ಪುತ್ರಿಯ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಎರಡು ದಿನಗಳ ಹಿಂದೆ 25 ವರ್ಷದ ಯುವಕನೊಬ್ಬ ತನ್ನ ಅಂಗಿ ತೆಗೆದು ಬರೀಯ ಚಡ್ಡಿಯಲ್ಲಿ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದ. ರಾತ್ರಿ ವೇಳೆ, ಕಿಟಕಿ ಹಾರಿ ಕಳ್ಳದಾರಿಯಿಂದ ಮನೆಯ ಒಳಗೆ ಬಂದಿದ್ದ. ಆದರೆ, ಯುವಕ ಕಳ್ಳದಾರಿಯಿಂದ ಎಂಟ್ರಿ ಕೊಟ್ಟಿದ್ದು ಮನೆ ಒಳಗಿದ್ದ ನಾಯಿಗೆ ಗೊತ್ತಾಗಿದೆ. ಕೂಡಲೇ ನಾಯಿ ಬೌ ಬೌ ಎಂದಿದ್ದು, ಮಹಿಳೆಯನ್ನು ಎಚ್ಚರಿಸಿದೆ.
ಮಹಿಳೆ ಕೂಡಲೇ ಪೊಲೀಸರಿಗೆ ಫೋನಾಯಿಸಿ, ದೂರು ನೀಡಿದ್ದಾಳೆ. ಅಷ್ಟೊತ್ತಿಗೆ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೆ, ಪೊಲೀಸರು ಆಗಮಿಸಿ ಅಲ್ಲಿನ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು 25 ವರ್ಷದ ಸಾದಾರ್ ಆಲಂ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪುರುಷರಿಲ್ಲದ ವಿಚಾರ ತಿಳಿದಿದ್ದ ಆಲಂ, ಮಹಿಳೆಯ ಬೆನ್ನು ಬಿದ್ದಿದ್ದ. ಬೆನ್ನ ಹಿಂದೆ ತಿರುಗಾಡುತ್ತಾ ಆಸೆ ತೀರಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದ. ಆದರೆ, ಮಹಿಳೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಮಹಿಳೆಯ ಮನೆಗೆ ನುಗ್ಗಿ ರಿವೇಂಜ್ ತೀರಿಸಿಕೊಳ್ಳಲು ಕಳ್ಳದಾರಿಯಲ್ಲಿ ಎಂಟ್ರಿ ಕೊಟ್ಟಿದ್ದ. ಆದರೆ, ಮಹಿಳೆಯ ನಂಬಿಕಸ್ಥ ನಾಯಿ ಕಳ್ಳನ ಬಗ್ಗೆ ಎಚ್ಚರಿಸಿ, ಆರೋಪಿಯನ್ನು ಜೈಲು ಕಂಬಿ ಎಣಿಸುವಂತೆ ಮಾಡಿದೆ. ಅಂದಹಾಗೆ, ಈ ಘಟನೆ ನಡೆದಿರೋದು ಮುಂಬೈನ ಪೊವಾಯಿ ಏರಿಯಾದಲ್ಲಿ.
25-06-26 09:10 pm
HK News Staffer
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 10:56 pm
HK News Staffer
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತು...
25-06-26 02:39 pm
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
25-06-26 09:40 pm
HK News Staffer
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm