ಬ್ರೇಕಿಂಗ್ ನ್ಯೂಸ್
31-10-20 12:16 pm Headline Karnataka News Network ದೇಶ - ವಿದೇಶ
ಅಯೋಧ್ಯೆ, ಅಕ್ಟೋಬರ್ 30: ಸುದೀರ್ಘ 28 ವರ್ಷಗಳ ಬಳಿಕ ದೀಪಾವಳಿ ಹಬ್ಬಕ್ಕೆ ಅಯೋಧ್ಯೆ ಝಗಮಗಿಸಲಿದೆ. ಈವರೆಗೂ ಟೆಂಟ್ ಒಳಗಿದ್ದ ರಾಮನ ವಿಗ್ರಹಕ್ಕೆ ದೀಪಗಳ ಹಬ್ಬದ ಸಡಗರದ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರತಿ ಎತ್ತಲಿದ್ದಾರೆ.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ವಿವಾದಿತ ಪ್ರದೇಶವಾಗಿದ್ದ ಅಯೋಧ್ಯೆಯಲ್ಲಿ ಯಾವುದೇ ಹಬ್ಬಗಳ ಆಚರಣೆಗೂ ಅನುಮತಿ ಇರಲಿಲ್ಲ. ಈ ಬಾರಿ ಅಯೋಧ್ಯೆ ವಿವಾದ ಮುಕ್ತವಾಗಿದ್ದು, ಭವ್ಯ ರಾಮಮಂದಿರ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ಇದೇ ವೇಳೆ, ದೀಪಾವಳಿ ಹಬ್ಬವನ್ನು ಸಡಗರದಿಂದ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.


ಇಷ್ಟು ವರ್ಷಗಳ ಕಾಲ ಪುಟ್ಟ ಟೆಂಟ್ ನಲ್ಲಿದ್ದ ರಾಮನ ವಿಗ್ರಹವನ್ನು ಮಂದಿರ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಆವರಣಕ್ಕೆ ಸ್ಥಳಾಂತರಿಸಿ ಪೂಜಿಸಲಾಗುತ್ತಿದೆ. ದಿನವೂ ಅರ್ಚನೆ, ಪೂಜೆಗಳು ನಡೆಯುತ್ತಿವೆ. ಇದೇ ಜಾಗದಲ್ಲಿ ಈ ಬಾರಿ ದೀಪಾವಳಿ ಆಚರಿಸಲಾಗುತ್ತಿದೆ. ದೀಪಾವಳಿಗೆ ಇಡೀ ರಾಮಮಂದಿರ ಪರಿಸರದಲ್ಲಿ ಲಕ್ಷಾಂತರ ದೀಪಗಳನ್ನು ಹಚ್ಚಿ ಬೆಳಗಿಸಲು ಯೋಜನೆ ಹಾಕಲಾಗಿದೆ. ಮಂದಿರದ ಆವರಣದಲ್ಲಿ ಅಲ್ಲದೆ, ರಾಮ ನಿರ್ಯಾಣಗೊಂಡ ಸರಯೂ ನದಿ ತೀರದಲ್ಲಿಯೂ ಲಕ್ಷಾಂತರ ದೀಪಗಳನ್ನು ಬೆಳಗಿಸಿ ವಿಶಿಷ್ಟವಾಗಿ ದೀಪಗಳ ಹಬ್ಬವನ್ನು ಆಚರಿಸಲು ಯೋಜನೆ ಹಾಕುತ್ತಿದ್ದಾರೆ.
ಕಳೆದ ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿತ್ತು. ಅಂದು ಕೂಡ ಇಡೀ ಅಯೋಧ್ಯೆಯನ್ನು ಶೃಂಗರಿಸಿ ವಿಶಿಷ್ಟವಾಗಿ ಅಲಂಕರಿಸಲಾಗಿತ್ತು. ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸಿದ್ದರು. ಈ ಬಾರಿ ಮೋದಿ ದೀಪಾವಳಿಗೆ ಅಯೋಧ್ಯೆ ಅಥವಾ ವಾರಣಾಸಿಗೆ ಬರುವುದು ಇನ್ನೂ ಅಂತಿಮಗೊಂಡಿಲ್ಲ.
For the first time since 1992, Diwali will be celebrated in the earlier disputed area where the foundation stone for the Ram Temple construction was laid back in August.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am