ಬ್ರೇಕಿಂಗ್ ನ್ಯೂಸ್
19-10-20 01:23 pm Headline Karnataka News Network ದೇಶ - ವಿದೇಶ
ಲಕ್ನೋ, ಅಕ್ಟೋಬರ್ 19 : ಪ್ರತಿದಿನ ಮಹಿಳೆಯರ ಮೇಲಿನ ಲೈಂಗಿಕ ಪ್ರಕರಣ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆ ಕಾಪಾಡುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ವಿಶೇಷ ಪೊಲೀಸ್ ಘಟಕವನ್ನು ರಚಿಸಿದೆ. ದಿನದ 24 ಗಂಟೆಯೂ ಕೆಲಸ ಮಾಡುವ ಈ ಗಸ್ತು ಪಡೆಗೆ 'ಪಿಂಕ್ ಪ್ಯಾಟ್ರೋಲ್' ಎಂದು ಹೆಸರಿಟ್ಟಿದ್ದಾರೆ. ಮಿಶನ್ ಶಕ್ತಿ ಅಭಿಯಾನದ ಭಾಗವಾಗಿ ನವರಾತ್ರಿಯ ಆರಂಭದಂದು ಈ ಪಡೆಗೆ ಚಾಲನೆ ದೊರಕಿದೆ. ಕಠಿಣ ತರಬೇತಿ ಪಡೆದ 250 ಮಹಿಳಾ ಪೊಲೀಸರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ.
ಉತ್ತರ ಪ್ರದೇಶದ ಕಾನ್ಪುರ, ಆಗ್ರಾ, ಗೋರಖ್ಪುರ, ವಾರಣಾಸಿ, ಪ್ರಯಾಗ್ರಾಜ್, ಮೀರತ್, ನೋಯಿಡಾ, ಘಾಜಿಯಾಬಾದ್ ಹಾಗೂ ಮೊರಾದಾಬಾದ್ನಲ್ಲಿ ಈ ಪಿಂಕ್ ಪ್ಯಾಟ್ರೋಲ್ ಪಡೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಯೋಗಿ ಆದಿತ್ಯನಾಥ್ ಸರ್ಕಾರ ಹೊಂದಿದೆ.
ರಾಜ್ಯದಲ್ಲಿ ಸುಮಾರು 100 ಸ್ಕೂಟಿ ಮತ್ತು 10 ಎಸ್ಯುವಿಗಳನ್ನು ಸೇವೆಗೆ ತರಲಾಗಿದ್ದು, ಮಹಿಳೆಯರ ಮೇಲಿನ ಕಿರುಕುಳ ಮತ್ತು ಅಪರಾಧ ಪ್ರಕರಣಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು 'ಪಿಂಕ್- ಪೆಟ್ರೋಲ್' ಅನ್ನು ವಿನ್ಯಾಸಗೊಳಿಸಲಾಗಿದೆ. ಸೇಫ್ ಸಿಟಿ ಯೋಜನೆಯಡಿ ಲಕ್ನೋ ಪೊಲೀಸರು ಹಾಟ್ಸ್ಪಾಟ್ಗಳಾಗಿ ಗುರುತಿಸಿರುವ ಸ್ಥಳಗಳಲ್ಲಿ 'ಪಿಂಕ್ ಪೆಟ್ರೋಲ್' ಕಾರ್ಯ ನಿರ್ವಹಿಸಲಿದೆ.
ಆರಂಭದಲ್ಲಿ ಬಾಲಕಿಯರ ಕಾಲೇಜುಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಸ್ಥಳಗಳನ್ನು ಹಾಗೂ ಕಿರುಕುಳ ಪ್ರಕರಣಗಳು ಹೆಚ್ಚಾಗಿ ನಡೆಯುವ ಸ್ಥಳಗಳಲ್ಲಿ ಈ ಗಸ್ತು ಪಡೆಯನ್ನು ನೇಮಕ ಮಾಡಲಾಗುತ್ತದೆ.
Launching the Mission Shakti to battle crimes against women, the state of Uttar Pradesh has introduced 'Pink Patrol' which comprises of women patrolling officers in the state capital, Lucknow. This new project, which marks the auspicious festival of Navratri, is aimed at strengthening the protection and safety of women in Uttar Pradesh.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm