ಬ್ರೇಕಿಂಗ್ ನ್ಯೂಸ್
14-02-22 10:40 am HK Desk news ಕರ್ನಾಟಕ
ಧಾರವಾಡ, ಫೆ.14 : ಹಿಜಾಬ್ ಧರಿಸದೆ ಇರೋದರಿಂದ ದೇಶದಲ್ಲಿ ರೇಪ್ ಪ್ರಕರಣ ಹೆಚ್ಚುತ್ತಿದೆ. ಮುಸ್ಲಿಂ ಮಹಿಳೆಯರ ಬ್ಯೂಟಿ ಕಾಣಬಾರದು, ಅವರ ಮೇಲೆ ಯಾರೂ ಕಣ್ಣು ಹಾಕಬಾರದು ಅಂತ ಹಿಜಾಬ್ ಹಾಕ್ಕಳ್ಳೋದು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಹಿಜಾಬ್ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಜಮೀರ್, ಇಂಡಿಯಾದಲ್ಲಿ ರೇಪ್ ರೇಟ್ ಹೆಚ್ಚಾಗಿದೆ. ಅಂಕಿ ಅಂಶ ನೋಡಿದರೆ ಗೊತ್ತಾಗತ್ತೆ. ಆದರೆ ಮಹಿಳೆಯರು ಹಿಜಾಬ್ ಹಾಕಿಕ್ಕೊಂಡ್ರೆ ರೇಪ್ ಆಗಲ್ಲ. ತಮ್ಮ ಬ್ಯೂಟಿ ಕಾಣಿಸದ ರೀತಿ ದೇಹವನ್ನು ಮುಚ್ಚಿಕೊಂಡರೆ ರೇಪ್ ಆಗಲ್ಲ. ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ. ಬೇರೆಯವರ ಅಭಿಪ್ರಾಯ ನನಗೆ ಗೊತ್ತಿಲ್ಲ ಎಂದರು.

ಹಿಜಾಬ್ ನೂರಾರು ವರ್ಷದಿಂದ ಮಹಿಳೆಯರು ಹಾಕಿಕ್ಕೊಂಡು ಬಂದಿದ್ದಾರೆ. ನಮ್ಮಲ್ಲೂ ಮುಸಲ್ಮಾನರು ಬಹಳ ಜನ ಹಾಕಲ್ಲ. ಹಾಕಲೇ ಬೇಕು ಅಂತ ಏನಿಲ್ಲ, ಯಾರು ಹೆಚ್ಚಾಗಿ ಹಾಕಲ್ಲ. ಇಸ್ಲಾಂನಲ್ಲಿ ಐದು ಸಾರಿ ನಮಾಜ್ ಮಾಡಬೇಕು ಎಂದಿದೆ. ಎಷ್ಟು ಮಂದಿ ನಮಾಜ್ ಮಾಡುತ್ತಾರೆ. ಮುಸ್ಲಿಂ ಮಾತ್ರ ಅಲ್ಲ ಬೇರೆ ಜಾತಿಯಲ್ಲೂ ಮಹಿಳೆಯರು ಹಿಜಾಬ್ ಹಾಕುತ್ತಾರೆ. ಅದು ಅವರ ರಕ್ಷಣೆಗಾಗಿ ಹಾಕ್ಕೊಳ್ಳೋದು. ನಾನು ಕೂಡ ಮಹಿಳೆಯರ ರಕ್ಷಣೆಗೆ ಹಿಜಾಬ್ ಒಳ್ಳೆದು ಅಂತ ಹೇಳ್ತೇನೆ. ನನ್ನ ಅಭಿಪ್ರಾಯ ಹೇಳ್ತೀನಿ, ಈ ಬಗ್ಗೆ ವಿವಾದ ಸೃಷ್ಟಿಸೋದು ಮಾಧ್ಯಮದ ಮಂದಿ. ಬೇಕಾದರೆ ದೇಶದಲ್ಲಿ ರೇಪ್ ರೇಟ್ ಬಗ್ಗೆ ಮಾಹಿತಿ ತೆಗೆದುಕ್ಕೊಂಡು ಚರ್ಚೆಗೆ ಬನ್ನಿ ಎಂದು ಜಮೀರ್ ಸವಾಲು ಹಾಕಿದ್ದಾರೆ.
ನಮ್ಮ ಧರ್ಮದಲ್ಲಿ ಐದು ಬಾರಿ ನಮಾಜ್ ಮಾಡಬೇಕು ಎಂದಿದ್ರೂ ಯಾರೂ ಮಾಡಲ್ಲ. ಹಿಜಾಬ್ ಹಾಕಿದ್ರೆ ರೇಪ್ ಗಳ ಸಂಖ್ಯೆ ಕಡಿಮೆಯಾಗುತ್ತೆ ಅಂತ ಹೇಳ್ತೀನಿ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಧಾರವಾಡದಲ್ಲಿ ಹೇಳಿಕೆ ನೀಡಿದ್ದಾರೆ.
Congress leader and Karnataka MLA Zameer Ahmed kicked up a controversy after saying that women get raped when they don't wear Hijab. The statement comes amid the row over Muslim students' demand for wearing hijab on college campus and classrooms.
21-04-26 09:02 pm
HK News Staffer
ದಾವಣಗೆರೆ ಬಿಸಿ ಬೆನ್ನಲ್ಲೇ ಬಾಗಲಕೋಟ ಕ್ಷೇತ್ರದಲ್ಲು...
18-04-26 05:59 pm
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
21-04-26 06:33 pm
HK News Staffer
ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ -...
21-04-26 02:36 pm
ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ...
20-04-26 09:40 pm
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
21-04-26 10:02 pm
HK News Staffer
ಡಿಜಿಪಿ ಡಾ.ಎಂ.ಎ.ಸಲೀಂ ಮಂಗಳೂರಿಗೆ ; ವರ್ಗಾವಣೆ ಆಗಿದ...
21-04-26 03:13 pm
ನಂತೂರು ಜಂಕ್ಷನ್ನಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗ...
21-04-26 12:44 pm
ಬೀದರ್ ; ಬಿರು ಬಿಸಿಲಿನ ಝಳಕ್ಕೆ 20 ವರ್ಷದ ಯುವಕ ಕ...
20-04-26 09:35 pm
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm