ಬ್ರೇಕಿಂಗ್ ನ್ಯೂಸ್
17-06-26 06:59 pm HK News Desk ಕರ್ನಾಟಕ
ಶಿವಮೊಗ್ಗ, ಜೂ 17: ಕಾನೂನು ಜ್ಞಾನ ಇಲ್ಲದ ಗೃಹಮಂತ್ರಿ ಕರ್ನಾಟಕದಲ್ಲಿದ್ದಾರೆ. ಆರ್ಎಸ್ಎಸ್ ಲೆಕ್ಕ ಕೇಳಲು ಪ್ರಿಯಾಂಕ್ ಖರ್ಗೆ ಯಾರು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಎಂಬ ಕಸವನ್ನು ಸೈಡ್ಗೆ ಹಾಕಬೇಕು. ಪ್ರಿಯಾಂಕ್ ಖರ್ಗೆ ಪ್ರಚಾರಕ್ಕೋಸ್ಕರ ಆರ್ಎಸ್ಎಸ್ ಇಟ್ಟುಕೊಂಡು ಹೊರಟಿದ್ದಾರೆ. ತಾಕತ್ತು ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳಿ, ಅದನ್ನು ಬಿಟ್ಟು ಪ್ರಚಾರಕ್ಕಾಗಿ ಹೀಗೆ ಮಾಡುವುದು ಸರಿ ಅಲ್ಲ. ಮಂತ್ರಿಯಾಗಿ ಏನು ಬೇಕಾದರೂ ಕ್ರಮ ತೆಗೆದುಕೊಳ್ಳಬಹುದು. ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಹೋದರೆ ವಿಫಲರಾಗ್ತಾರೆ ಅಂತ ಗೊತ್ತಿದೆ. ಆರ್ಎಸ್ಎಸ್ ಬಗ್ಗೆ ಮಾತಾಡಿದರೆ ಪ್ರಚಾರ ಸಿಗುತ್ತೆ ಅಂತ ಮಾತಾಡುತ್ತಿದ್ದಾರೆ, ನಿಂಗೆ ತಾಕತ್ತಿದ್ರೆ RSS ಮೇಲೆ ಕ್ರಮ ತೆಗೆದುಕೋ ಎಂದು ಕಿಡಿಕಾರಿದರು
ಆರ್ಎಸ್ಎಸ್ ಅಂದವರು ಎಲ್ಲಾ ನೆಲಕಚ್ಚಿ ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆ ಸಹ ನೆಲ ಕಚ್ಚಿ ಹೋಗುತ್ತಾರೆ. ನೀವು ಯಾರು ಲೆಕ್ಕ ಕೇಳೋಕೆ? ನೀವು ಎಷ್ಟು ಕೊಟ್ಟಿದ್ದೀರಿ? ಇವರೊಬ್ಬ ಮಂತ್ರಿಯಾಗಿ ಹೇಳೋಕೆ ಅಧಿಕಾರ ಕೊಟ್ಟವರ್ಯಾರು? ಎಂದು ಏಕ ವಚನದಲ್ಲಿಯೇ ಪ್ರಶ್ನಿಸಿದರು.
ಆರ್ಎಸ್ಎಸ್ನ ಹಿರಿಯರಾದ ಮೋಹನ್ ಭಾಗವತ್ ಅವರು ಈ ಚಿಲ್ಲರೆಗೆ ಉತ್ತರ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸಾವಿರಾರು ಕಡೆ ಆರ್ಎಸ್ಎಸ್ ಪಥಸಂಚಲನ ನಡೆಯಿತು. ಸಣ್ಣ ಗಲಾಟೆ ಸಹ ಆಗಲಿಲ್ಲ. ನಿಮ್ಮ ಎದುರಿಗೇನೇ ನಿಮ್ಮ ರಾಜ್ಯಸಭಾ ಸದಸ್ಯರು ಪಾಕಿಸ್ತಾನ ಜಿಂದಾಬಾದ್ ಎಂದರು. ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಇಂತಹ ಚಿಲ್ಲರೆಗೆ ಉತ್ತರ ಕೊಡಬೇಡಿ ಅಂತ ಮೋಹನ್ ಭಾಗವತ್ ಅವರಿಗೆ ಕೇಳಿಕೊಳ್ಳುತ್ತೇನೆ. ನಮ್ಮ ದೇಶದಲ್ಲಿ ಭಯೋತ್ಪಾದಕ ಶಕ್ತಿಗಳು ಜಾಸ್ತಿ ಇದೆ. ಹಾಗಾಗಿ ಮೋಹನ್ ಭಾಗವತ್ ಅವರಿಗೆ ಝೆಡ್ ಪ್ಲಸ್ ಭದ್ರತೆ ಕೊಟ್ಟಿದ್ದಾರೆ. ಇವನ್ಯಾರು ಇವನ್ನೆಲ್ಲ ಕೇಳೋಕೆ ಎಂದರು.
ಪ್ರಚಾರಕ್ಕಾಗಿ ಪ್ರಿಯಾಂಕ್ ಖರ್ಗೆ ಹುಚ್ಚು ಹುಚ್ಚು ಹೇಳಿಕೆ ಕೊಡುತ್ತಿದ್ದಾರೆ. ಮೋಹನ್ ಭಾಗವತ್ ಅಮೆರಿಕಾಗೆ ಹೋಗಿರೋದನ್ನ ಕೇಳೋಕೆ ಇವರ ಅಪ್ಪನ ಮನೆಯಿಂದ ಹಣ ಕೊಟ್ಟಿದ್ದಾರಾ? ಎಂದು ಏಕವಚನದಲ್ಲಿ ಪ್ರಶ್ನಿಸಿದರು.
ಆರ್ಎಸ್ಎಸ್ ಬಗ್ಗೆ ಹೀಗೆ ಮಾತನಾಡಿ ದೊಡ್ಡ ಮನುಷ್ಯ ಆಗೋಗೆ ಹೊರಟಿದ್ದಾರೆ. ಕಸದಂತಿರುವ ಇವರಿಗೆ ಉತ್ತರ ಕೊಡಬೇಡಿ. ಕಸದ ಬುಟ್ಟಿಗೆ ತಳ್ಳಿ. ಇಂತಹ ಚಿಲ್ಲರೆ ನಮ್ಮ ಆರ್ಎಸ್ಎಸ್ ಬಗ್ಗೆ ಮಾತಾಡುತ್ತಿದ್ದಾರೆ ಎನ್ನುವ ನೋವು ಇದೆ ಎಂದರು.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
25-08-26 12:46 pm
HK News Staffer
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm