ಬ್ರೇಕಿಂಗ್ ನ್ಯೂಸ್
14-12-25 03:19 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.14: ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಪತ್ರ ಬರೆದಿದ್ದ ಕಿರಣ್ ಹೆಬ್ಬಾರ್ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಈ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಇದೀಗ ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
"ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು ಸಾಮಾನ್ಯ ಜನರಿಗ ಧಮ್ಕಿ ಹಾಕಿದ್ದಾರೆ" ಎಂದು ಆರೋಪಿಸಿರುವ ಬಿಜೆಪಿ, ರೌಡಿಯಂತೆ ವರ್ತಿಸುವುದನ್ನು ಬಿಡುವಂತೆ ಉಪಮುಖ್ಯಮಂತ್ರಿಗಳಿಗೆ ಸಲಹೆ ನೀಡಿದೆ. ಈ ಕುರಿತು ತನ್ನ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ ಘಟಕ, "ಸಾರ್ವಜನಿಕರೆದುರು ತಮ್ಮ ಚರಿತ್ರೆಯನ್ನು ಬಯಲು ಮಾಡಿಕೊಳ್ಳದಿರಿ" ಎಂದು ವ್ಯಂಗ್ಯವಾಡಿದೆ.
"ನಾನ್ಯಾರು ಗೊತ್ತಾ ಎಂದು ಕೇಳುತ್ತಿರುವ ಡಿಕೆ ಶಿವಕುಮಾರ್ ಅವರೇ, ನೀವು ಈಗ ರಾಜ್ಯದ ಡಿಸಿಎಂ ಆ ದಿನಗಳ ಕೊತ್ವಾಲ್ ಶಿಷ್ಯ ಅಲ್ಲ ಎಂಬುದನ್ನು ಮರೆಯದಿರಿ. ಜನಸಾಮಾನ್ಯರೊಬ್ಬರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪತ್ರ ಬರೆದರೆ, ನಾನು ಯಾರು ಗೊತ್ತಾ? ಜೈಲಿಗೆ ಹೋಗಿ ಬಂದವನು ಎನ್ನುವ ಮೂಲಕ ತಮ್ಮ ಚರಿತ್ರೆಯನ್ನು ತಾವೇ ಬಯಲು ಮಾಡಿಕೊಳ್ಳುತ್ತಿದ್ದಾರೆ" ಎಂದು ಬಿಜೆಪಿ ಡಿಸಿಎಂ ಕಾಲೆಳೆದಿದೆ.
ಮುಂದುವರೆದು, "ಅಂದಹಾಗೆ ನೀವು ಜೈಲಿಗೆ ಹೋಗಿದ್ದು ಯಾವುದೇ ಒಳ್ಳೆ ಕಾರ್ಯ ಮಾಡಿ ಅಲ್ಲ ಭ್ರಷ್ಟಾಚಾರ ಮತ್ತು ಅವ್ಯವಹಾರ ಆರೋಪದಡಿ ಎಂಬುದನ್ನ ನೆನಪಿಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣದ ಬಿಲ್ ಜಾರಿಗೆ ತರುತ್ತಿರುವುದು ಇದೇ ಕಾರಣಕ್ಕೆ. ಡಿಕೆ ಶಿವಕುಮಾರ್ ಅವರೇ, ನಿಮ್ಮನ್ನು ನೀವು ಪಾಳೆಗಾರ ಎಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ!" ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಶನಿವಾರ (ಡಿ.13) ನಡೆರದ ಸಭೆಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಕಿರಣ್ ಹೆಬ್ಬಾರ್ ಅವರು ಬರೆದಿದ್ದ ಪತ್ರದ ಧಾಟಿಗೆ ಅಸಮಧಾನ ವ್ಯಕ್ತಪಡಿಸಿದ್ದರು. "ನಾನು ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹಸಚಿವರಿಗೂ ಹೆದರದೇ ಜೈಲಿಗೆ ಹೋಗಿ ಬಂದವನು. ಹೀಗಾಗಿ ಇಂತಹ ಎಚ್ಚರಿಕೆಗಳೆಲ್ಲ ನನ್ನ ಮುಂದೆ ನಡೆಯುವುದಿಲ್ಲ" ಎಂದು ಉಪಮುಖ್ಯಮಂತ್ರಿಗಳು ಗುಡುಗಿದ್ದರು.
ನಾನ್ಯಾರು ಗೊತ್ತಾ ಎಂದು ಕೇಳುತ್ತಿರುವ @DKShivakumar ಅವರೇ, ನೀವು ಈಗ ರಾಜ್ಯದ ಡಿಸಿಎಂ ಆ ದಿನಗಳ ಕೊತ್ವಾಲ್ ಶಿಷ್ಯ ಅಲ್ಲ ಎಂಬುದನ್ನು ಮರೆಯದಿರಿ.
— BJP Karnataka (@BJP4Karnataka) December 13, 2025
ಜನಸಾಮಾನ್ಯರೊಬ್ಬರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪತ್ರ ಬರೆದರೆ, ನಾನು ಯಾರು ಗೊತ್ತಾ? ಜೈಲಿಗೆ ಹೋಗಿ ಬಂದವನು ಎನ್ನುವ ಮೂಲಕ ತಮ್ಮ ಚರಿತ್ರೆಯನ್ನು ತಾವೇ ಬಯಲು… pic.twitter.com/TSlkuUq98B
A sharp political war of words has erupted in Karnataka after Deputy Chief Minister D.K. Shivakumar’s remarks at a public consultation meeting triggered outrage across party lines, with the opposition BJP accusing him of threatening citizens and behaving like a “strongman” rather than a constitutional authority.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am