ಬ್ರೇಕಿಂಗ್ ನ್ಯೂಸ್
19-09-25 02:16 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.19 : ಜಾತಿ ಗಣತಿ ವಿಚಾರದಲ್ಲಿ ರಾಜ್ಯದ ಪ್ರಮುಖ ಸಚಿವರೇ ಅಸಮಾಧಾನ ಹೇಳಿಕೊಂಡಿದ್ದು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಬಿರುಸಿನ ಚರ್ಚೆಯಾಗಿದೆ. ಕೆಲವು ಲಿಂಗಾಯತ ಸಚಿವರು ಸಿಟ್ಟಿಗೆದ್ದು ಮಾತನಾಡಿದ್ದು ಈ ರೀತಿ ಗೊಂದಲ ಮಾಡಿಕೊಂಡು ಸಮೀಕ್ಷೆ ನಡೆಸುವುದೇ ಬೇಡ. ಗೊಂದಲ ಬಗೆಹರಿಯೋ ವರೆಗೂ ಮುಂದೂಡಿ ಎಂದು ಒತ್ತಡ ಹೇರಿದ್ದಾರೆ.
ಚರ್ಚೆಯ ಸಂದರ್ಭದಲ್ಲಿ ಸಿಟ್ಟಿಗೆದ್ದ ಸಚಿವ ಎಂ.ಬಿ.ಪಾಟೀಲ್, ಜಾತಿ ಗಣತಿ ಮೂಲಕ ಲಿಂಗಾಯತರನ್ನು ತುಂಡು ತುಂಡು ಮಾಡುತ್ತಿದ್ದೀರಿ. ಕುಲಶಾಸ್ತ್ರೀಯ ಅಧ್ಯಯನವನ್ನು ಯಾರು ಮಾಡೋದು. ಇದರಿಂದ ಪಕ್ಷ ಮತ್ತು ಸರ್ಕಾರದ ಇಮೇಜಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಿ ಟೇಬಲ್ ಗುದ್ದಿ ಧ್ವನಿ ಏರಿಸಿದ್ದಾರೆ. ಈ ವೇಳೆ, ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರೂ ತಮ್ಮ ಆಸನಗಳಿಂದ ಎದ್ದು ನಿಂತು ದನಿಗೂಡಿಸಿದ್ದಲ್ಲದೆ, ಏರಿದ ಧ್ವನಿಯಲ್ಲಿ ಮಾತನಾಡಿದ್ದಾರೆ. ''ಯಾವ ಆಧಾರದ ಮೇಲೆ ಈ ಸಮೀಕ್ಷೆ ಆಗುತ್ತಿದೆ? ಹೊಸ ಜಾತಿಗಳನ್ನು ಏಕೆ ಸೇರಿಸಿದ್ದೀರಿ? ಎಂದು ಖಂಡ್ರೆ ಪ್ರಶ್ನಿಸಿದರೆ, ''ನಮ್ಮ ಜಾತಿ ಯಾವುದು ಗೊತ್ತಾ?,'' ಎಂದು ಮಲ್ಲಿಕಾರ್ಜುನ್ ಕೋಪದಿಂದ ಪ್ರಶ್ನಿಸಿದ್ದಾರೆ. ಈ ಮೂವರು ಸಚಿವರ ವಾದವನ್ನು ಎಚ್.ಕೆ ಪಾಟೀಲ್ ಅವರೂ ಸಮರ್ಥಿಸಿ ಸಮೀಕ್ಷೆಯ ರೂಪುರೇಷೆ ಮತ್ತು ಮಾನದಂಡ ಒಪ್ಪುವಂತದ್ದಲ್ಲ ಎಂದು ಹೇಳಿದರು ಎನ್ನಲಾಗಿದೆ.
ಸಮೀಕ್ಷೆಗೆ 331 ಹೊಸ ಜಾತಿಗಳನ್ನು ಸೃಷ್ಟಿಸಿದ್ದು ಯಾರು? ಏಕೆ? ಹೊಸ ಜಾತಿಗಳನ್ನು ಸೃಷ್ಟಿಸಲು ಅಧಿಕಾರ ಇದೆಯೇ? ಇದರಿಂದ ಲಿಂಗಾಯತ ಮಾತ್ರವಲ್ಲ. ಬೇರೆ ಬೇರೆ ಜಾತಿಗಳಲ್ಲೂ ಗೊಂದಲ ಸೃಷ್ಟಿಯಾಗಿವೆ. ಇದರಿಂದ ಪಕ್ಷ ಮತ್ತು ಸರಕಾರಕ್ಕೆ ತೊಂದರೆಯಾಗಲಿದೆ ಎಂದು ಕೆಲವು ಸಚಿವರು ವಾದಿಸಿದ್ದು, ಈ ಸಮೀಕ್ಷೆಯ ಉಸಾಬರಿಯೇ ಬೇಡ. ಮುಂದೂಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರೂ ಇದೇ ರೀತಿ ಮಾತನಾಡಿದ್ದು ಗೊಂದಲ ಸೃಷ್ಟಿಸಿದರೆ ಅದರಿಂದ ಸರ್ಕಾರಕ್ಕೆ ತೊಂದರೆಯಾಗುತ್ತದೆ. ಜನರಲ್ಲಿ ಅಪನಂಬಿಕೆ ಬರುವಂತೆ ಆಗಬಾರದು ಎಂದು ಹೇಳಿದ್ದಾರೆ. ಕೊನೆಗೆ, ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಮೇಲ್ಜಾತಿ ವಿರೋಧಿ ಎಂದು ಹಣೆಪಟ್ಟಿ ಕಟ್ಟುವಂತೆ ಆಗಿದೆ. ಎಲ್ಲ ಹಿಂದುಳಿದ ಸಮುದಾಯಗಳಿಗೆ ನ್ಯಾಯ ದೊರಕಿಸಲು ಈ ಸಮೀಕ್ಷೆ ಮಾಡಲಾಗುತ್ತಿದೆ. ಸರ್ಕಾರದ ನಡೆಯನ್ನು ಸಚಿವರು ಸಮರ್ಥನೆ ಮಾಡಬೇಕು ಎಂದು ಹೇಳಿದರು. ಕೊನೆಗೆ, ಈ ಕುರಿತ ನಿರ್ಧಾರವನ್ನು ಸಿದ್ದರಾಮಯ್ಯ ತೀರ್ಮಾನಕ್ಕೆ ಬಿಡಲಾಯಿತು.
ಈ ಹಿಂದೆ ಕಾಂತರಾಜ್ ಅಧ್ಯಕ್ಷತೆಯ ಆಯೋಗದ 2015ರ ಸಮೀಕ್ಷಾ ವರದಿ ಮತ್ತು ಈ ವರದಿಯ ದತ್ತಾಂಶ ಆಧರಿಸಿದ ಜಯಪ್ರಕಾಶ್ ಹೆಗ್ಡೆ ವರದಿ ಅಂಗೀಕಾರ ಹಾಗೂ ಜಾರಿ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ಸಚಿವರಿಂದಲೇ ಅಪಸ್ವರ ಬಂದು ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಹೊಸ ಸಮೀಕ್ಷೆ ವಿಚಾರದಲ್ಲೂ ಇದೇ ಸ್ಥಿತಿ ಪುನಾವರ್ತನೆಯಾಗಿದೆ.
The proposed caste census in Karnataka has triggered strong discontent within the state cabinet, with some senior ministers openly questioning the methodology and demanding its postponement. Heated exchanges marked Thursday’s cabinet meeting, as several Lingayat ministers strongly opposed the inclusion of new caste categories.
19-09-25 02:16 pm
Bangalore Correspondent
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
19-09-25 02:24 pm
HK News Desk
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm