ಬ್ರೇಕಿಂಗ್ ನ್ಯೂಸ್
31-10-23 01:09 pm Bengaluru Correspondent ಕರ್ನಾಟಕ
ಬೆಂಗಳೂರು, ಅ.31: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಎಇಸಿಎಸ್ ಲೇಔಟ್ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಐದು ತಂಡಗಳನ್ನು ನಿಯೋಜಿಸಿದ್ದಾರೆ.
ಸೋಮವಾರವೂ ಚಿರತೆಯನ್ನು ಸೆರೆ ಹಿಡಿಯಲು ಆಯಕಟ್ಟಿನ ಸ್ಥಳಗಳಲ್ಲಿ ನಾಲ್ಕು ಬೋನುಗಳನ್ನು ಇಡಲಾಗಿತ್ತು.
ಅಕ್ಟೋಬರ್ 27 ರಂದು ರಾತ್ರಿ ಚಿರತೆ ಅಪಾರ್ಟ್ಮೆಂಟ್ ಸಮುಚ್ಚಯದ ಬಳಿ ತಿರುಗಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅಂದಿನಿಂದ ಚಿರತೆ ಕಾಣಿಸಿಕೊಂಡಿಲ್ಲ.

ಇದೀಗ ಅಪಾರ್ಟ್ ಮೆಂಟ್ ನ ಸುತ್ತಮುತ್ತ ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿದ ಅರಣ್ಯಾಧಿಕಾರಿಗಳು ಖಾಲಿ ಕಟ್ಟಡದ ಒಳ ಭಾಗದಲ್ಲಿ ಚಿರತೆ ಇರೋದು ಖಚಿತಪಡಿಸಿದ್ದಾದ್ದಾರೆ. ಹೀಗಾಗಿ ಅದನ್ನು ಸೆರೆ ಹಿಡಿಯಲು ಮೈಸೂರಿನಿಂದ ತಜ್ಞರ ತಂಡವೊಂದು ಆಗಮಿಸಿದೆ.
ಎರಡು ಮೂರು ದಿನದಿಂದ ಬೆಂಗಳೂರು ಆಗ್ನೇಯ ಭಾಗದ ಸಿಂಗಸಂದ್ರ, ಎಚ್ಎಸ್ಆರ್ ಲೇಔಟ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು ನಿವಾಸಿಗಳು ಆತಂಕ ಹೊರ ಹಾಕಿದ್ದರು. ಕೂಡ್ಲು ಗೇಟ್ನ ಎಂ.ಎಸ್.ಧೋನಿ ಅಂತರಾಷ್ಟ್ರೀಯ ಶಾಲೆ ಸಮೀಪದಲ್ಲಿಯೇ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.
ಸೋಮವಾರ ರಾತ್ರಿಯೂ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಚಿರತೆ ಕಾಣಿಸಿಕೊಂಡಿದೆ. ಕೂಡ್ಲು ಗೇಟ್ ಸಮೀಪದ ಖಾಲಿ ಕಟ್ಟಡವೊಂದರತ್ತ ಚಿರತೆ ಓಡಿ ಹೋಗಿದೆ. ಕೂಡಲೇ ಅರಣ್ಯ ಇಲಾಖೆಯವರಿಗೆ ಪೊಲೀಸರು ಮಾಹಿತಿ ನೀಡಿದ್ದರು. ಈಗಾಗಲೇ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಕ್ರಮ ವಹಿಸಿತ್ತಾದರೂ ಮಂಗಳವಾರ ಬೆಳಿಗ್ಗೆಯಿಂದಲೇ ಸೆರೆ ಕಾರ್ಯಾಚರಣೆ ಶುರು ಮಾಡಿತು.
ಅಪಾರ್ಟ್ ಮೆಂಟ್ ನೊಳಕ್ಕೆ ನುಗ್ಗಿದ ಚಿರತೆ; ಫಸ್ಟ್ ಫ್ಲೋರ್ ವರೆಗೂ ಹೋಗಿ ತಿರುಗಾಟ :
ಆನೇಕಲ್ ತಾಲೂಕಿನ ಕೂಡ್ಲುಗೇಟ್ ಬಳಿ ಅ. 29ರಂದು ರಾತ್ರಿ ಕಾಣಿಸಿಕೊಂಡಿದ್ದ ಚಿರತೆ ಅಲ್ಲಿನ ನಾಗರಿಕರನ್ನು ಆತಂಕಗೊಳಿಸಿದ್ದರ ಬೆನ್ನಿಗೇ ಅ. 30ರಂದು ಅದೇ ಪ್ರಾಂತ್ಯದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಅದೇ ಚಿರತೆ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಕೂಡ್ಲುಗೇಟ್ ಬಳಿಯ ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್ ನೊಳಕ್ಕೆ ನುಗ್ಗಿರುವ ಚಿರತೆಯು, ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಲಾಟ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮೊದಲು ಸೆರೆಯಾಗಿದೆ. ಅಲ್ಲಿಂದಲೇ ಅಪಾರ್ಟ್ ಮೆಂಟ್ ನ ಒಳಕ್ಕೆ ಪ್ರವೇಶಿಸಿರುವ ಅದು, ಆನಂತರ ಮೆಟ್ಟಿಲುಗಳನ್ನೇರಿ ಮೊದಲ ಮಹಡಿಗೆ ಹೋಗಿದೆ. ಆನಂತರ ಅಲ್ಲಿ, ಲಿಫ್ಟ್ ಚೇಂಬರಿನ ಬಳಿ ಮೂರ್ನಾಲ್ಕುಸುತ್ತು ಹಾಕಿ ಪುನಃ ಕೆಳಕ್ಕೆ ಇಳಿದು ಬಂದು ಅಲ್ಲಿಂದ ಓಡಿ ಹೋಗಿದೆ.
Forest Department personnel setting up a leopard trap cage at Kudlu Gate, Singasandra, off Hosur Road in Bengaluru on Monday. (Top) A video grab from a CCTV of the wild cat that had strayed in to one of the apartment complex’s first floor in the area on October 28, 2023. | Photo Credit: Special Arrangement
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm