ಬ್ರೇಕಿಂಗ್ ನ್ಯೂಸ್
07-09-21 01:16 pm Source: News 18 Kannada ಡಿಜಿಟಲ್ ಟೆಕ್
ಗೂಗಲ್ ಪೇ ಯುಪಿಐ ಪಾವತಿಗಳಿಗಾಗಿ ಭಾರತದಲ್ಲಿ ಜನಪ್ರಿಯವಾಗಿರುವ ಆಪ್ ಆಗಿದೆ. ಈ ಆಪ್ ಸಾಮಾನ್ಯ ಯುಪಿಐ ಪಾವತಿ ಆಪ್ ಆಗಿ ಕಾರ್ಯನಿರ್ವಹಿಸುವುದಲ್ಲದೆ ಇತರ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಡಿಜಿಟಲ್ ಚಿನ್ನವನ್ನು ಖರೀದಿಸಲು ಇಚ್ಛಿಸುವವರಿಗೆ ಈ ಆಪ್ ಗೋಲ್ಡ್ ಲಾಕರ್ ಅನ್ನು ಸಹ ಹೊಂದಿದೆ. ಈಗ ಆಪ್ ಸ್ಥಿರ ಠೇವಣಿ ಅಥವಾ ಎಫ್ಡಿಗಳನ್ನು ಪರಿಚಯಿಸಿದೆ. ಗೂಗಲ್ ಪೇ ಆಪ್ ಮೂಲಕ ಬಳಕೆದಾರರಿಗೆ ಎಫ್ ಡಿ ಮಾಡಲು ಅನುವು ಮಾಡಿಕೊಡುವ ಸಲುವಾಗಿ ಗೂಗಲ್ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ.

Google Payನಲ್ಲಿ FDಗೆ ಅರ್ಜಿ ಸಲ್ಲಿಸುವುದು ಹೇಗೆ?

ಬಡ್ಡಿ ದರ ಎಷ್ಟು?
ಪ್ರಸ್ತುತ, ಬ್ಯಾಂಕ್ ಒಂದು ವರ್ಷದ ಎಫ್ಡಿ ಮೇಲೆ 6.35% ಬಡ್ಡಿ ದರಗಳನ್ನು ನೀಡುತ್ತಿದೆ. ಎಫ್ಡಿಗಾಗಿ ಗ್ರಾಹಕರು ಈಕ್ವಿಟಾಸ್ ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯುವ ಅಗತ್ಯವಿಲ್ಲ ಏಕೆಂದರೆ ವಹಿವಾಟು ಯುಪಿಐ ಐಡಿ ಇರುವ ಬಳಕೆದಾರರ ಮೂಲಕವೇ ನಡೆಯುತ್ತದೆ. ಗೂಗಲ್ ಪೇ ಆಪ್ ಬಳಸಿ, ಉಪಯೋಗಗಳು ತಮ್ಮ ಠೇವಣಿಗಳ ಮೇಲೆ ನಿಗಾ ಇಡಲು, ಹೊಸದನ್ನು ಸೇರಿಸಲು ಮತ್ತು ಅಕಾಲಿಕವಾಗಿ ಹಿಂಪಡೆಯಲು ಆರ್ಡರ್ ಮಾಡಲು ಸಾಧ್ಯವಾಗುತ್ತದೆ.
ಎಫ್ಡಿ ಏಕೆ ಮುಖ್ಯ..?
ಉಳಿತಾಯದ ವಿಷಯಕ್ಕೆ ಬಂದರೆ ಉತ್ತಮ ಬಡ್ಡಿದರಗಳನ್ನು ನೀಡುವ ಬ್ಯಾಂಕ್ ನಿಮ್ಮ ಆಯ್ಕೆ ಆಗಿರಬೇಕು. ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಮಸ್ಯೆಯೆಂದರೆ ತಮ್ಮ ಸ್ಥಿರ ಠೇವಣಿಗಳಿಗೆ (FD) ಉತ್ತಮ ಬಡ್ಡಿದರಗಳನ್ನು ಹೊಂದಿರುವ ಬ್ಯಾಂಕುಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಏಕೆಂದರೆ FD ಬಡ್ಡಿ ವಿಷಯದಲ್ಲಿ ದೊಡ್ಡ ಬ್ಯಾಂಕುಗಳು ಹೆಚ್ಚಾಗಿ ಗಮನ ಸೆಳೆಯುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ನಂತಹ ಉನ್ನತ ಬ್ಯಾಂಕ್ಗಳು ನೀಡುವ ದರಗಳು ಕಳೆದ ಸ್ವಲ್ಪ ಸಮಯದಿಂದ ಕುಸಿಯುತ್ತಿವೆ.

ಅಧಿಕ ಬಡ್ಡಿದರ ನೀಡುವ ಬ್ಯಾಂಕ್ಗಳು ಯಾವುವು?
ಅದನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ಬಡ್ಡಿ ನೀಡುವ ಸಣ್ಣ ಬ್ಯಾಂಕ್ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. ಕೆಲವು ಅತ್ಯುತ್ತಮ ಸಣ್ಣ ಬ್ಯಾಂಕುಗಳು ನಿಮ್ಮ FD ಮೇಲೆ ಉತ್ತಮ ಬಡ್ಡಿದರಗಳನ್ನು ನೀಡುತ್ತವೆ. ನಿಮ್ಮ ವಯಸ್ಸು ಮತ್ತು ನೀವು ಆಯ್ಕೆ ಮಾಡಿದ ಸ್ಕೀಮ್ನ ಅವಧಿಯನ್ನು ಅವಲಂಬಿಸಿ ಸಣ್ಣ ಬ್ಯಾಂಕುಗಳು ಗ್ರಾಹಕರಿಗೆ ಶೇಕಡ 3 ರಿಂದ 7 ರಷ್ಟು ಅದಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿಯನ್ನು ನೀಡುತ್ತಿವೆ. ಈಶಾನ್ಯ ಬ್ಯಾಂಕ್ , ಜನ ಸ್ಮಾಲ್ ಬ್ಯಾಂಕ್ , ಸೂರ್ಯೋದಯ ಬ್ಯಾಂಕ್, ಉತ್ಕರ್ಶ್ ಬ್ಯಾಂಕ್ಗಳು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ. ಈ ಸಣ್ಣ ಬ್ಯಾಂಕ್ಗಳಲ್ಲಿ ಹೂಡಿಕೆ ಮೂಲಕ ಉತ್ತಮ ಬಡ್ಡಿ ಪಡೆಯಿರಿ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm